Saturday, January 30, 2016

ದಪ್ಪ  ಕೊಕ್ಕಿನ ಹಕ್ಕಿಯ ದಾಂಪತ್ಯ ನಿಷ್ಥೆ .... 
ಅಪರೂಪದ ಹಾಗೂ ಜಗತ್ತಿನ ಯಾವ ಜೀವಸ೦ಕುಲದಲ್ಲೂ ಕ೦ಡುಬರದ ಪ್ರಾಮಾಣಿಕ ದಾ೦ಪತ್ಯ ಮ೦ಗಟ್ಟೆಯದು. ತನ್ನ ಜೀವಮಾನದಲ್ಲಿ ಒಮ್ಮೆ ಮಾತ್ರ ಜೋಡಿಯಾಗುವ ಮ೦ಗಟ್ಟೆಗಳಲ್ಲಿ ಅಕಸ್ಮಾತಾಗಿ ಸ೦ಗಾತಿ ತೀರಿಹೋದರೆ ಇನ್ನೊ೦ದು ಕೂಡ ಜೀವ ಕೊಡುತ್ತದೆ. ಹೆಚ್ಚಿನ೦ಶ ಇದು ಸ೦ತಾನೋತ³ತ್ತಿಯ ಕಾಲದಲ್ಲಿ ಜರುಗಿಬಿಡುವ ವಿದ್ರಾವಕ ಕಥಾನಕ.
ಈ ಪಕ್ಷಿ ಕಾಡು ತೊರೆದರೆ ಅಥವಾ ಇದ್ದಕ್ಕಿದ್ದ೦ತೆ ಕಾಡಿನಲ್ಲಿ ಕಾಣದಾದರೆ ಆ ಕಾಡಿಗೆ ನೈಸಗಿ೯ಕ ಕೇಡು ಕಾದಿದೆ ಎ೦ದೇ ಅಥೆç೯ಸಲಾಗುತ್ತದೆ. ಕಾಡೊ೦ದರ ವåèಲ್ಯಮಾಪನ ನಡೆಯುವುದೇ ಈ ಪಕ್ಷಿ ಕಾಡಿನಲ್ಲಿ ಸ೦ತಾನೋತ³ತ್ತಿ ಮಾಡುತ್ತಿದೆಯೇ ಎ೦ಬುದರ ಮೇಲೆ. ಎಲ್ಲಕ್ಕಿ೦ತಲೂ ಮಿಗಿಲಾಗಿ ಈ ಹಕ್ಕಿ ಸುಲಭಕ್ಕೆ ತನ್ನ ಸ೦ತಾನೋತ³ತ್ತಿಯ ಮಾಹಿತಿಯನ್ನು ಯಾವ ಪಕ್ಷಿ ಪರಿಣತರಿಗೂ ಬಿಟ್ಟುಕೊಟ್ಟಿಲ್ಲ. ಜಾಗತಿಕವಾಗಿ, ಕನಾ೯ಟಕದ ಅಣಶಿ ಅಭಯಾರಣ್ಯದಲ್ಲಿ ಅತ್ಯಧಿಕವಾಗಿ ಇವು ವಾಸವಾಗಿರುವುದು ದಾಖಲೆಗೆ ಪಾತ್ರವಾಗಿದ್ದರೆ ಅಷ್ಟರ ಮಟ್ಟಿಗೆ ಕಾಳಿ ಅರಣ್ಯಪ್ರದೇಶ ಅತ್ಯ೦ತ ಸುರಕ್ಷಿತ ಎ೦ದೇ ವ್ಯಾಖ್ಯಾನಿಸಲು ಪೂರಕವಾಗುತ್ತಿದೆ. ಇದೇ ಮ೦ಗಟ್ಟೆ ಅಥವಾ ಹಾನ್‍೯ ಬಿಲ್. 
     ಪಕ್ಷಿಪ್ರಭೇದದಲ್ಲಿ ವಿಭೀನ್ನ ಎ೦ದೇ ಗುರುತಿಸಲಾಗುವ ಮ೦ಗಟ್ಟೆಗೆ ಪ್ರಾಧಾನ್ಯವಿರುವುದು ಮೂಗಿನ ಮೇಲಿರುವ ಹೆಚ್ಚುವರಿ ಕೊ೦ಬಿನಿ೦ದಾಗಿ. ಅದು ತೀವ್ರತರವಾದ ಆಥ೯ರೈಟಿಸ್ ಕಾಯಿಲೆಗೆ ಸ್ಥಳೀಯ ಮದ್ದಾಗಿ ಬಳಕೆಯಾಗುತ್ತಿರುವುದರಿ೦ದ ಅವ್ಯಾಹತವಾಗಿ ಬೇಟೆಗೆ ಬಲಿಯಾಗುತ್ತಿತ್ತು. 2004ರ ಹೊತ್ತಿಗೆ ತೀವ್ರವಾಗಿ ನಾಶವಾಗುತ್ತಿರುವ ಪಕ್ಷಿಸ೦ಕುಲದಲ್ಲಿ ಮ೦ಗಟ್ಟೆ ದಾಖಲಾಗಿತ್ತು. ಪ್ರಸ್ತುತ ಕಾಳಿ ಹುಲಿ ಅಭಯಾರಣ್ಯದಲ್ಲೇ ಸುಮಾರು ಆರು ಸಾವಿರಕ್ಕೂ ಹೆಚ್ಚು ಮ೦ಗಟ್ಟೆಗಳು ಗಣತಿಯಲ್ಲಿ ದಾಖಲಾಗಿದ್ದು 2010ರಲ್ಲಿ ಕನಾ೯ಟಕ ಸಕಾ೯ರ ಈ ವಲಯವನ್ನು ಮ೦ಗಟ್ಟೆ ಸ೦ರಕ್ಷಿತ ಅರಣ್ಯ ವಲಯ ಎ೦ದು ಗುರುತಿಸಿ ರಕ್ಷಣಾಕಾಯ೯ಕ್ರಮಕ್ಕೆ ಒ೦ದು ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಇಷ್ಟೆಲ್ಲ ಮುತುವಜಿ೯ ವಹಿಸಲು ಕಾರಣ ಮ೦ಗಟ್ಟೆ ಎನ್ನುವ ಈ ದಪ್ಪ ಕೊಕ್ಕಿನ ಹಕ್ಕಿಯ ದಾ೦ಪತ್ಯ. ಅದು ಜಗತ್ತಿನ ಯಾವ ಜೀವ ಸ೦ಕುಲದಲ್ಲಿಯೂ ಕ೦ಡುಬರದ ಅಪರೂಪದ ಪ್ರಾಮಾಣಿಕ ದಾ೦ಪತ್ಯ. (ಮೂರು ಬಾರಿ ಸೂಕ್ಷ್ಮ ಕ್ಯಾಮರಾ ಲಗತ್ತಿಸಿ ಇದರ ಪೊಟರೆ ಪ್ರವೇಶಿಸುವ ಪ್ರಯತ್ನಗಳು ವಿಫಲವಾಗಿವೆ.) 
    ಬರಲಿರುವ ಮಾಚ್‍೯ನಿ೦ದ ಜೂನ್ ತಿ೦ಗಳವರೆಗೆ ನಡೆಯುವ ಮ೦ಗಟ್ಟೆ ಕುಟು೦ಬ ವ್ಯವಸ್ಥೆಗಾಗಿ ಹೆಚ್ಚಿನ ಜೋಡಿಗಳು ಸಿದ್ಧವಾಗಿದ್ದು, ಪ್ರತಿವಷ೯ ಕಾಳಿ ಹುಲಿ ಅಭಯಾರಣ್ಯದ ವ್ಯಾಪ್ತಿಗೆ ಸರಿಸುಮಾರು 350ಕ್ಕೂ ಹೆಚ್ಚಿನ ಮರಿಗಳು ಯಶಸ್ವಿಯಾಗಿ ಸೇಪ೯ಡೆಯಾಗುತ್ತಿದ್ದರೆ, ಗೂಡಿನಲ್ಲೇ ಪ್ರತಿ ವಷ೯ ಮರಣಿಸುತ್ತಿರುವ, ಹೊರಗೆ ಜೋಡಿಗಾಗಿ ಜೀವ ಕೊಡುವ ಮ೦ಗಟ್ಟೆಗಳ ಸ೦ಖ್ಯೆ ಇನ್ನೂರರ ಆಸುಪಾಸು. ಪ್ರತಿ ಜನವರಿಯ ಹೊತ್ತಿಗೆ ಕನಿಷ್ಠ 60 ಅಡಿಗೂ ಮಿಗಿಲಾದ ಎತ್ತರದಲ್ಲಿ ನೀಳಮರವನ್ನು ಗುರುತಿಸಿ, ಅದರಲ್ಲಿ ಪೊಟರೆಯನ್ನು ಕೊರೆದು ಜೋಡಿಗಳು ಗೂಡನ್ನು ನಿಮಿ೯ಸಿಕೊಳ್ಳುತ್ತವೆ. ಅಲ್ಲಿ೦ದ ಸುಮಾರು ಮೂರು ವಾರಗಳ ಕಾಲ ಗೂಡು, ನದಿತೀರ, ನಿಮಾ೯ನುಷ ಪ್ರದೇಶಗಳಲ್ಲಿ ಸರಸ ಸಲ್ಲಾಪ ಮುಗಿಸಿ ಇನ್ನೇನು ಹೆಣ್ಣು, ಮೊಟ್ಟೆ ಇಡುವ ಸಮಯ ಬರುತ್ತಿದ್ದ೦ತೆ ಗೂಡಿನೊಳಗೆ ಸೇರಿಕೊ೦ಡು ಪ್ರವೇಶ ದ್ವಾರವನ್ನು ಮುಚ್ಚಿಕೊಳ್ಳುತ್ತದೆ. ಇದಕ್ಕಾಗಿ ಈ ನಿದಿ೯ಷ್ಟ ಅವಧಿಯಲ್ಲಿ ಅ೦ದರೆ ಸಲ್ಲಾಪೋತ್ತರ ಅವಧಿಯಲ್ಲಿ ಮೂಗಿನ ಮೇಲ್ಗಡೆಯ ಕೊ೦ಬಿನಿ೦ದ ದಪ್ಪ ಮೇಣ ಒಸರಲಾರ೦ಭೀಸುತ್ತದೆ. ಬ೦ಧಿಯಾಗುವ ಹೆಣ್ಣು 
     ಈ ಮೇಣ ಮತ್ತು ಪೊಟರೆಯ ಒಳಗಡೆಯ ಮರದ ಹುಡಿಯನ್ನು ಸೇರಿಸಿ ಬಾಗಿಲನ್ನು ಲ೦ಬಾಕಾರವಾಗಿ ಪರಿವತಿ೯ಸಿ ಉಳಿದದ್ದನ್ನು ಮುಚ್ಚಿಬಿಡುತ್ತದೆ. ಗ೦ಡಿನ ಕೊಕ್ಕು ಮೇಲ್ಮುಖವಾಗಿ ಪ್ರವೇಶಿಸಲು ಮಾತ್ರ ಸಾಧ್ಯವಾಗುವ೦ತೆ ರ೦ಧ್ರ ಉಳಿಸಲಾಗುತ್ತದೆ. ಒಳಗಿರುವ ಹೆಣ್ಣು ಗೂಡಿನ ತಳಭಾಗ ಸೇರಿಕೊಳ್ಳುವುದರೊ೦ದಿಗೆ ಸ೦ಪೂಣ೯ ಬ೦ಧಿಯಾಗಿಬಿಡುತ್ತದೆ. ಹೊರಗಿದ್ದ ಗ೦ಡು ಹಕ್ಕಿಗೆ, ಹೆಣ್ಣು ತಾನೀಗ ವ್ಯವಸ್ಥಿತವಾಗಿದ್ದೇನೆ ಎನ್ನುವ ಸ೦ದೇಶ ಕೊಡುತ್ತಿದ್ದ೦ತೆ ಹೊರ ಬಾಗಿಲನ್ನು ತನ್ನ ಅನುಕೂಲಕ್ಕೆ ತಕ್ಕಷ್ಟು ಮಾತ್ರ ಉಳಿಸಿಕೊ೦ಡು ಉಳಿದದ್ದನ್ನು ಇನ್ನಷ್ಟು ಭದ್ರಪಡಿಸಿಬಿಡುತ್ತದೆ. 
    ಇದಾದ ಎರಡು ಅಥವಾ ಮೂರನೆಯ ದಿನ ಹೆಣ್ಣು ಒ೦ದರಿ೦ದ ಎರಡು ಮೊಟ್ಟೆಗಳನ್ನಿಡುತ್ತದೆ. ಕೆಲವೊಮ್ಮೆ ಮೂರರಿ೦ದ ಐದು ಮೊಟ್ಟೆ ಇರಿಸುತ್ತದಲ್ಲದೆ, ಯಶಸ್ವಿಯಾಗಿ ಮರಿಯಾಗಿ ಹೊರಬ೦ದ ದಾಖಲೆಗಳೂ ಇವೆ. ಒಳಗಿದ್ದ ಹೆಣ್ಣಿಗೆ ಹೊರಗಿನಿ೦ದ ದಿನಕ್ಕೆ ಎ೦ಟರಿ೦ದ ಹತ್ತು ಬಾರಿ ಆಹಾರವನ್ನು ಕೊಕ್ಕಿನ ಮೂಲಕ ಪೂರೈಸುತ್ತ, ತನ್ನ ಕತ೯ವ್ಯ ಪೂರೈಸುತ್ತದೆ ಗ೦ಡು. ಹೆಣ್ಣು ಸುಮಾರು ಮೂವತ್ತು ದಿನ ಕಾವು ಕೊಟ್ಟು ಮರಿ ಮಾಡುತ್ತಿದ್ದ೦ತೆ ಆಹಾರ ಪೂರೈಕೆಯ ವಿಧ ಮತ್ತು ಸಮಯದಲ್ಲೂ ಬದಲಾವಣೆ ಮಾಡಿಕೊಳ್ಳುವ ಗ೦ಡು ಈಗ ದಿನಕ್ಕೆ ಸರಿ ಸುಮಾರು ಹದಿನಾರು ಬಾರಿ ವಿವಿಧ ರೀತಿಯ ಹಣ್ಣು, ಚೂಗರು ಸೇರಿದ೦ತೆ ಅಗತ್ಯದ ಅಹಾರ ಪೂರೈಕೆ ಮಾಡುತ್ತದೆ. ಪೊಟರೆಯಲ್ಲಿ ಮೆತ್ತೆಯ ಅಗತ್ಯತೆಗೆ ತನ್ನದೇ ಮ್ಯೆಯ ಗರಿಗಳನ್ನು ಉದುರಿಸುತ್ತ, ರೆಕ್ಕೆಪುಕ್ಕ ಕಳಚಿಕೊ೦ಡು, ಆಹಾರ ಕಡಿಮೆ ಮಾಡಿಕೊ೦ಡು, ದೇಹ ಗಾತ್ರವನ್ನೂ ಕುಗ್ಗಿಸಿಕೊ೦ಡು ಮರಿಗಳ ಪಾಲನೆ ಮಾಡುತ್ತ ಹೆಣ್ಣು ತೀರ ಇನ್ನೇನು ತೀರಿಬಿಡುತ್ತದೆನ್ನುವ ಹ೦ತ ತಲುಪಿರುವಾಗ ಮರಿಗಳು ಹೊರ ಪ್ರಪ೦ಚಕ್ಕೆ ಕಾಲಿಡಲು ತಯಾರಾಗುತ್ತವೆ.  
  ಹೊರಗಿನಿ೦ದ ಸ೦ದೇಶ ಸ್ವೀಕರಿಸುವ ಗ೦ಡು ಈಗ ಮತ್ತೊಮ್ಮೆ ಬಾಗಿಲನ್ನು ಕೊರೆದು ಅವುಗಳನ್ನು ಒ೦ದೊ೦ದಾಗಿ ಹೊರಕ್ಕೆ ಸಾಗಿಸುತ್ತದೆ. ಹೆಣ್ಣಿಗೆ ಆಹಾರ, ಭದ್ರತೆ ಇತ್ಯಾದಿಗಳ ಸ೦ಪೂಣ೯ ಕೌಟು೦ಬಿಕ ಪರಿಸರ ಒದಗಿಸುತ್ತದೆ. ಈ ಬಾರಿ ಎರಡೇ ವಾರದಲ್ಲಿ ಚಿಗಿತುಕೊಳ್ಳುವ ಹೆಣ್ಣು ಮತ್ತೊಮ್ಮೆ ಪುನಜ೯ನ್ಮ ಪಡೆದ೦ತೆ ಪೊಟರೆಯಿ೦ದ ಹೊರಬರುತ್ತದೆ. ಈಗ ಗು೦ಪಾಗಿ ಸ೦ಸಾರ ಸಾಗಿಸುವ ಮ೦ಗಟ್ಟೆ ಜೋಡಿ, ವಷ೯ದವರೆಗೆ ಮರಿಗಳನ್ನು ಪೋಷಿಸುತ್ತ, ಮತ್ತೆ ಹಳೆಯ ಪೊಟರೆ ಹುಡುಕಿ ಬರುತ್ತವೆ.
 
ದಾ೦ಪತ್ಯನಿಷೆ 
ಮೊದಲ ಬಾರಿ ನಿಮಿ೯ತ ಪೊಟರೆ ಸ೦ಪೂಣ೯ ನಾಶವಾಗುವವರೆಗೂ ಅಲ್ಲೇ ಸ೦ತಾನೋತ³ತ್ತಿ ಮಾಡುವ ಮ೦ಗಟ್ಟೆ ಜೀವಿತಾವ˜ಯಲ್ಲಿ ಕನಿಷ್ಠ 6ರಿ೦ದ 14 ಬಾರಿಯವರೆಗೂ ಇದನ್ನು ಪುನರಾವತಿ೯ಸುತ್ತದೆ. ಪ್ರತಿ ಆವತ೯ನೆಯಲ್ಲೂ ಯಾವತ್ತಿಗೂ ಜೋಡಿ ಬದಲಾಗುವುದಿಲ್ಲ. ದಾರುಣ ಎ೦ದರೆ ಸ೦ತಾನೋತ³ತ್ತಿಯ ಕಾಲದಲ್ಲಿ ಹೊರಗಿದ್ದ ಗ೦ಡು ಅಕಸ್ಮಾತ್ ಮರಣಕ್ಕೀ ಡಾದರೆ ಒಳಗಿದ್ದ ಹೆಣ್ಣು ಯಾವ ಕಾರಣಕ್ಕೂ ಹೊರಬರದೆ ಅಲ್ಲೇ ಜೀವ ಕೊಡುತ್ತದೆ. ಕೆಲವೊಮ್ಮೆ ಒಳಗಿದ್ದ ಹೆಣ್ಣು ಪೋಷಿಸುವ ಭರದಲ್ಲಿ ಮರಿಗಳಿಗಾಗಿ ರೆಕ್ಕೆ ಪುಕ್ಕ ಕಿತ್ತುಕೊ೦ಡು ಅಹಾರ ಕಡಿಮೆ ಮಾಡಿಕೊ೦ಡು ನಿಶ್ಯಕ್ತಿಯಾಗಿ ಅಥವಾ ಶತ್ರುದಾಳಿಗೆ ಸಿಕ್ಕಿ ಸಾಯುವುದೂ ಇದೆ. ಆಗ ಮರಿಗಳು ಕೂಡ ಹೊರಬರದೆ ಅಲ್ಲೇ ಸತ್ತು ಹೋದರೆ, ಹೊರಗಿದ್ದ ಮ೦ಗಟ್ಟೆ ಹೃದಯ ವಿದ್ರಾವಕವಾಗಿ ಕೂಗುತ್ತ ಕೆಲವು ದಿನದವರೆಗೆ ಏಕಾ೦ಗಿಯಾಗಿ ತಿರುಗಾಡಿ ಮಾಸದೊಳಗೇ ಜೀವ ಬಿಡುತ್ತದೆ. ಈ ಜೋಡಿಗಳ ದಾ೦ಪತ್ಯ ನಿಷೆ ಜಾಗತಿಕವಾಗಿ ಚಚೆ೯ಯಲ್ಲಿದೆಯಲ್ಲದೆ, ಇವತ್ತಿಗೂ ಕದಲದಿರುವ ಅದರ ನಿಷೆ ಮನುಕುಲಕ್ಕೂ ಮಾದರಿಯಾಗಿದೆ. 
 
 ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚು 
ಪ್ರಸ್ತುತ ಪಶ್ಚಿಮಘಟ್ಟ ಪ್ರದೇಶದಲ್ಲಿ ಅತಿ ಹೆಚ್ಚು ಮ೦ಗಟ್ಟೆಗಳಿದ್ದು; ನೇಪಾಳ, ಶ್ರೀಲ೦ಕಾ, ಇ೦ಡೋನೇಷ್ಯಾದಲ್ಲಿ 7-8 ಪ್ರಭೇದಗಳ ಮ೦ಗಟ್ಟೆಗಳಿವೆ. ಈಶಾನ್ಯರಾಜ್ಯದ ನಾಗಾ ಬುಡುಕಟ್ಟುಗಳಲ್ಲಿ ಇದರ ರೆಕ್ಕೆಪುಕ್ಕಗಳಿಲ್ಲದೆ ಹಬ್ಬದ ದಿನ ವೇಷಭೂಷಣಗಳು ಪೂಣ೯ಗೊಳ್ಳುವುದಿಲ್ಲ. ಹಾಗಾಗಿ ಈಶಾನ್ಯ ರಾಜ್ಯದಲ್ಲಿ ಬೇಟೆ ಅವ್ಯಾಹತ. ಬಮಾ೯ ರಾಜಪತಾಕೆಯಲ್ಲಿ ಮ೦ಗಟ್ಟೆಗೆ ಶಾಶ್ವತ ಸ್ಥಾನವಿದ್ದು, ಮೊದಲೆರಡು ವಷ೯ದ ಯುವ ಮ೦ಗಟ್ಟೆ ಮಾ೦ಸಕ್ಕೆ ಅಪಾರ ಬೇಡಿಕೆ ಇದೆ. ಅನಿಮಾಲಿಯಾ ಗು೦ಪಿನ ಕೋಡಾ೯ಟ್ ಪ್ರಭೇದದಲ್ಲಿ ಬ್ಯೂಸೆರೋಟೆಡಿಯಾ ಕುಟು೦ಬಕ್ಕೆ ಸೇರಿದ ಹಕ್ಕಿಯಾಗಿ ಗುರುತಿಸಲಾಗಿದ್ದು ಇದನ್ನು ಅವೇಸ್‍ನ ಗು೦ಪಿನಲ್ಲಿ ವಗೀ೯ಕರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಈಗ ಇವುಗಳ ಗಲಾಟೆಯಿ೦ದ ತು೦ಬಿಹೋಗುತ್ತಿದ್ದು; ಹೊ೦ಡಗದ್ದೆ, ಬಿರೂರು, ಬಾರೆ, ಕೈಗಾ, ಕದ್ರಾ, ಅಣಶಿ, ಬರಪಾಲಿ, ಬಿಡೋಲಿ, ಜಾಲವಳಿ, ದುದಗಾಳಿ, ಖಾಮಸೆತಡಿ, ನುಜ್ಜಿ, ಮಾಸೇತ್, ಕು೦ಬಾರವಾಡ, ಜೋಯಿಡಾ ಸೇರಿದ೦ತೆ ಕಾಳಿಹುಲಿ ಸ೦ರಕ್ಷಿತ ವಲಯ ಈಗ ಸ೦ಪೂಣ೯ ಸುರಕ್ಷತೆಯನ್ನು ಕೊಡುತ್ತಿದ್ದುದರಿ೦ದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

Wednesday, January 27, 2016



ಜಗತ್ತಿನ ಅಷ್ಟೂ ಒಳ್ಳೆಯತನ ಅವಳದ್ದೇ...
ಇಂಥಾ ಚೆಂದದ ಮನಸ್ಸು ಮತ್ತು ತ್ಯಾಗ ಹೆಣ್ಣುಮಕ್ಕಳಿಗೆ ಮಾತ್ರ ಹೆಂಗೆ ಬರುತ್ತದೋ..? ಆ ಆರ್ದ್ರತೆ ಮತ್ತು ತಾಯ್ತನ ಎನ್ನುವುದು ಅವಳ ಆತ್ಮದೊಂದಿಗೇ ಇರುವ ಸತ್ತ್ವವೇನೋ. ತೀರ ಜೀವನದ ಆಖೈರಿನವರೆಗೂ ಬದ್ಧತೆ ತೋರುವುದು ಆಕೆಯಿಂದ ಮಾತ್ರ ಸಾಧ್ಯವಾ..?
ಇವತ್ತಿಗೂ ತೀರ ಸಂಯಮದಿಂದ, ಇದ್ದುದರಲ್ಲಿ ಅದ್ಭುತ ಆನಂದದಿಂದ ದಿನಗಳನ್ನು ಕಳೆದುಬಿಡಲು ಕಾರಣ ನಾಳಿನದ್ದು ನನಗೆ ಗೊತ್ತಿಲ್ಲ. ಅದಕ್ಕಿಂತಲೂ ಇವತ್ತಿನ ದಿನವನ್ನು ಚೆಂದವಾಗಿ ಕಳೆದಲ್ಲಿ ಮಾತ್ರವೇ, ನಾಳೆಗಳು ಇನ್ನೂ ಅದ್ಭುತವಾಗಿರುತ್ತವೆ ಎನ್ನುವುದರಲ್ಲಿ ಅಪೂಟ ನಂಬಿಕೆ ಇರಿಸಿದವನು ನಾನು. ಆದರೆ ಕೆಲವೊಮ್ಮೆ ನಮಗೇ ಗೊತ್ತಿಲ್ಲದೆ ಅದೃಷ್ಟ ಕೈಕೊಟ್ಟಿರುತ್ತದಲ್ಲ ಅವರಿಗೆ ಮಾತ್ರ ದಿನಗಳೆಯುವುದಿರಲಿ, ಗಂಟೆಗಳೂ ಕೈಹಿಡಿಯುವುದಿಲ್ಲ. ಯಾವಾಗ ಈ ಲೋಕದಿಂದ ಎದ್ದು ಹೋಗುತ್ತೇವೆಯೋ ಎನ್ನುವುದಕ್ಕೇ ಕಾಯುತ್ತಿರುತ್ತಾರೆ. ಆದರೆ ಅದ್ಯಾವುದೂ ಅವರ ಕೈಯ್ಯಲ್ಲೂ ಇರುವುದಿಲ್ಲ. ದುರದೃಷ್ಟ ಬೆನ್ನಿಗೆ ಬಿದ್ದಾಗ ಬದುಕು ದುರ್ಭರವೂ ಅಗಿಬಿಟ್ಟಿರುತ್ತದೆ.
ಬದುಕಿನ ದೀರ್ಘ ದಾರಿಯ ಮಧ್ಯೆ ಹಳಿತಪ್ಪಿದ್ದ ಚಂದುಕಾಕನ ಬದುಕು ಯಾಕೋ ತಡವಾದರೂ ಪರವಾಗಿಲ್ಲ ಎನ್ನುವ ಹಂತಕ್ಕೆ ಬರುವ ಹೊತ್ತಿಗೆ ಹುಡುಗಿ ಕೈಗೆ ಬಂದಳು. ಅಪ್ಪ, ಮಗಳಿಗೆ ಒಬ್ಬರಿಗೊಬ್ಬರು ಸಂತೈಸಿಕೊಂಡು ಬದುಕುವುದು ಅಭ್ಯಾಸವಾಗಿಬಿಟ್ಟಿತ್ತಾ ಅಥವಾ ಅಭ್ಯಾಸ ಮಾಡಿಕೊಂಡಿದ್ದರಾ ಗೊತ್ತಿಲ್ಲ. ಅದರೆ ದಿವೀನಾಗಿ ಮಗಳೊಂದಿಗೆ ಯಾವ ಬಾಧೆಯೂ ಬರದಂತೆ ಚಂದುಕಾಕ ಗ್ಯಾರೇಜು ಕೆಲಸ ಇತ್ಯಾದಿಗಳೊಂದಿಗೆ ಸಮಯ ಅಳತೆ ಮಾಡುತ್ತ ಕಳೆಯತೊಡಗಿದ್ದ.
ಹುಡುಗರೂ ಕೈಯ್ಯಲ್ಲಿ ಪಳಗಿದ್ದುದರಿಂದ ಚಂದೂಕಾಕ ಮತ್ತು ಪುಟ್ಟಿ ನೀಸೂರಾಗಿದ್ದಂತೆ ಕಾಣಿಸುತ್ತಿತ್ತು. ಈ ಮಧ್ಯೆ ನಾನು ಎಲ್ಲೆಲ್ಲೋ ತಿರುಗಿ ವಾಪಸ್ ಇಲ್ಲೇ ಬಂದು ಕಾಲೂರುವ ಹೊತ್ತಿಗೆ ದಶಕಗಳೇ ಉರುಳಿದ್ದವು. ಹಾಗೆಯೇ ಚಂದುಕಾಕ ಮತ್ತು ಪುಟ್ಟಿ ಮರೆತಿರಲಿಲ್ಲವಾದರೂ ಕಣ್ಣಿಂದ ದೂರಾದವರೂ ಮನಸ್ಸಿನಿಂದನೂ ದೂರವಾಗೋದು ಸಹಜ ಎನ್ನುವಂತೆ, ಸ್ಟೇರಿಂಗ್ ಮತ್ತು ಗೇರಿಗೆ ಕೈಹಾಕುವಾಗೆಲ್ಲ ಚಂದುಕಾಕ ನೆನಪಾಗುತ್ತಿದ್ದನಾದರೂ ಸಂಪರ್ಕ ತಪ್ಪಿ ಹೋಗಿತ್ತು. ಆತ ಮನಸ್ಸಿಗೆ ನಾಟುವಂತೆ ಕಲಿಸಿದ್ದ ಡ್ರೈವರಿಕೆಗೆ ಇವತ್ತೂ ನನ್ನದೊಂದು ಕೃತಜ್ಞತೆ ಸಲ್ಲಿಸದಿದ್ದರೆ ಅಷ್ಟರಮಟ್ಟಿಗೆ ಕೃತಘ್ನನಾದೇನು.
‘ಹೆಂಗದಿಪಾ..? ನನ್ನ ನೆನಪ ಅದ ಏನೂ..’ ಎನುತ್ತಾ ಆವತ್ತು ಕರೆ ಬಂದಾಗ ಸರಿಯಾಗಿ ನಡುರಾತ್ರಿಗೆ ಇನ್ನರ್ಧ ಗಂಟೆ ಮಾತ್ರ ಬಾಕಿ ಇತ್ತು. ಇಷ್ಟು ಹೊತ್ತಿನಲ್ಲಿ ಯಾರು ಎಂದುಕೊಳ್ಳುತ್ತಲೇ ನಾನು ‘ನೆನಪಾಗ್ಲಿಲ್ಲ ಕ್ಷಮಾ ಮಾಡ್ರಿ.ಯಾರು ಮಾತಾಡೋದು..?’ ಎನ್ನುತ್ತಿದ್ದರೆ..
‘ಹ್ಹ..ಹ್ಹ... ಅನ್ಕೊಂಡ್ನಿ ನೆನಪಿರಲಿಕ್ಕಿಲ್ಲ ಧ್ವನಿ ಗುರುತು ಹಿಡಿಲಿಕ್ಕಿಲ್ಲ ಅಂತ. ಆದರ ಮೊನ್ನೆ ನೀ ಸ್ಟೇಜ್ ಮ್ಯಾಲೆ ಊರ ಬಗ್ಗೆ, ಸಾಲಿ ಬಗ್ಗೆ ಮಾತಾಡಿದ್ದು ಮಾತ್ರ ಭೇಷಾಗಿತ್ತು ನೋಡಪಾ.. ಏನ ಅಂದರೂ ಊರ ಮಕ್ಳು ನೆನಸ್ಕೊಂಡಾಗ ಆಗೋ ಖುಷಿನ ಬ್ಯಾರೇ..’ ಎನ್ನುತ್ತಿದ್ದರೆ ವರ್ಷಗಳ ಹಿಂದೆ ‘ಹಳಿಯಾಳದ ಹಬ್ಬ’ದಲ್ಲಿ ಶಾಲು ಸನ್ಮಾನ, ನನ್ನ ಪರಾಕು ಇತ್ಯಾದಿಗಳೆಲ್ಲ ಮುಗಿದ ಮೇಲೆ ವೇದಿಕೆಯ ಕೆಳಗೆ ಪ್ರೀತಿಯಿಂದ ಸಿಕ್ಕಿದವರನ್ನೆಲ್ಲ ನೆನಪಿಸಿಕೊಂಡೆ. ಅದರಿಲ್ಲಿದ್ದವರಾರೂ ಇವರಲ್ಲ ಎನ್ನಿಸಿತು. ಉಹೂಂ ನೆನಪಾಗಲಿಲ್ಲ.‘ಬೇಜಾರಾಗಬ್ಯಾಡ್ರಿ ಯಾರಂತ ನೆನಪಾಗವಲ್ದು..’ ಎನ್ನುತ್ತಿದ್ದಂತೆ, ‘ಇರ್ಲಿ ಬಿಡ್ರಿ. ಆವತ್ತು ನಾನು ದೂರ ಇದ್ದೆ. ಅಲ್ಲಿಗಂಟ ಬಂದ ಮಾತಾಡ್ಸೊ ಹಂಗೂ ಇರಲಿಲ್ಲ. ಗಾಡಿ ಹೊಡಿಯೋದು ಮರತಿಲ್ಲ ಹೌದಿಲ್ಲೋ.’ ಎನ್ನಬೇಕೆ..? ಚಂದುಕಾಕ. ಅದೆಂಗೆ ಮರೆತೇನು..?ಒಂದಿಷ್ಟು ಮಾತಾಡಿ ಎಲ್ಲಿದ್ದಾರೆಂದು ವಿಚಾರಿಸಿಕೊಂಡೆ.
ಕಾಲಾಂತರದಲ್ಲಿ ಆದ ಬದಲಾವಣೆಯಲ್ಲಿ ಚಂದುಕಾಕ ಗ್ಯಾರೇಜು ಮುಚ್ಚಿ ಮಗಳೊಂದಿಗೆ ನಗರಕ್ಕೆ ಹೋಗಿ ನೆಲೆಸಿದ್ದಾನಂತೆ. ಇನ್ನೇನು ಮಗಳ ಮದುವೆಗೆ ಓಡಾಡುತ್ತಿದ್ದಾನಿರಬೇಕು. ಧ್ವನಿಯಲ್ಲಿ ಸಂಭ್ರಮ. ನಾನೂ ಖುಷಿಗೊಳ್ಳುತ್ತ ‘ಪುಟ್ಟಿ ಮದ್ವಿಗೂ ಮದಲ ಬರೋನೇಳು ಕಾಕ. ಹೇಳಿಬಿಡ್ರಿ..’ ಎಂದು ಇರಿಸಿದ್ದೆ. ನಂತರದ ಓಡಾಟದಲ್ಲೂ ಆಗೀಗ ಚಂದುಕಾಕ ನೆನಪಾಗುತ್ತಿದ್ದರೂ ಹೋಗುವುದಾಗಿರಲೇ ಇಲ್ಲ. ಆವತ್ತೊಂದಿನ ಹುಬ್ಬಳ್ಳಿಗೆ ಹೋದವನು ಅಚಾನಕ್ ಆಗಿ ಆತ್ತ ಕಡೆ ಕಾರು ನಡೆಸಿದ್ದೆ. ಕರೆ ಮಾಡಿ ಸರಿಯಾದ ಅಡ್ರೆಸ್ಸು ಕೇಳಿಕೊಂಡು ಮನೆ ತಲುಪಿದಾಗ ಮಧ್ಯಾಹ್ನ ಊಟದ ಹೊತ್ತು.
ಥೇಟ್ ಕಕ್ಕಿಯ ರೂಪ ಮತ್ತು ಎತ್ತರದ ಹುಡುಗಿಯನ್ನು ಗುರುತಿಸುವುದು ಕಷ್ಟವಾಗಲಿಲ್ಲ. ಪುಟ್ಟಿ ಸಮಾ ಎದೆಯೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಚೆಂದಗೆ ಕಂಪ್ಯೂಟರ್ ಓದಿಕೊಂಡು ತುರ್ತಿಗೂ, ಅನುಭವಕ್ಕೀಡಾಗಲು ಸಾಕು ಎಂಬಂತೆ ಕೆಲಸವೊಂದನ್ನು ಹುಡುಕಿಕೊಂಡಿದ್ದಾಳೆ. ಎರಡು ನಿಮಿಷದಲ್ಲಿ ಹುಡುಗಿ ಚಹಾ ಮಾಡಿಕೊಂಡು ಬಂದಳು. ಕಾಕ ಕಾಣಿಸುತ್ತಿಲ್ಲ ಎನ್ನುತ್ತಿದ್ದರೆ,‘ಅಪ್ಪ ಮಲ್ಗಿದಾನೆ. ಎಬ್ಬಿಸ್ತೇನಿ ಇರ್ರಿ’ ಎನ್ನುವಷ್ಟರಲ್ಲಿ ಒಳಗಿನಿಂದ ‘ಯಾರೂ’ ಎನ್ನುವ ಚಂದುಕಾಕನ ಧ್ವನಿ ಕೇಳಿಬಂತು. ಮುಂದಿನ ಹತ್ತು ನಿಮಿಷದಲ್ಲಿ ವ್ಹೀಲ್ ಚೇರ್ ಮೇಲೆ ಕೂತಿದ್ದ ಚಂದುಕಾಕ ಗಾಲಿಯುರುಳಿಸುತ್ತಾ ಹೊರಬಂದ.
‘ಕಾಕ..’ ಎನ್ನುತ್ತಾ ನಿಂತುಬಿಟ್ಟೆ. ಇಳಿದುಹೋದ ಮುಖ, ಅರ್ಧಮರ್ಧ ಇರುವ ಎಡಗೈ, ಬಕ್ಕ ತಲೆ, ಅದಕ್ಕಿಂತಲೂ ಬದುಕು ಇನ್ಯಾವತ್ತೂ ಗಾಡಿಯ ಮೇಲೆ ಕೂರದಂತಾಯಿತಲ್ಲ ಎಂಬ ಮುಖದಲ್ಲೇ ವ್ಯಕ್ತವಾಗುತ್ತಿದ್ದ ದೀನಭಾವ. ಯಾಕೋ ಒಮ್ಮೆ ಹಳೆಯ ಕಾಕಾನ ವೇಗಗಳೆಲ್ಲ ನೆನಪಾಗಿ ನೇರವಾಗಿ ಚಂದುಕಾಕನ ಕಣ್ಣುಗಳನ್ನು ದಿಟ್ಟಿಸಲಾಗಲೇ ಇಲ್ಲ. ಸುಮ್ಮನೆ ಅವನ ಪಕ್ಕ ಕೂತು ಜೀವವಿಲ್ಲದ ಕೈ ಸವರುತ್ತಿದ್ದರೆ ಇದಕ್ಕೆ ಪಕ್ಕಾಗಿದ್ದ ಪುಟ್ಟಿ ಮಾತ್ರ ‘ಮಾಮ ಇದೆಲ್ಲ ತಲೀಗ ಹಚ್ಕೊಬ್ಯಾಡ್ರಿ. ಊಟಕ್ಕೆ ಏಳ್ರಿ..’ ಎನ್ನುತ್ತಿದ್ದಳು. ಆಗಿದ್ದಿಷ್ಟು, ಕಾಕಿ ಹೋದ ಮೇಲೆ ಜೊತೆಜೊತೆಗೆ ಮಗುವನ್ನು ಬೆಳೆಸುತ್ತಾ ಬದುಕು ಕಟ್ಟಿಕೊಂಡ ಚಂದುಕಾಕ. ಮಗಳು ವಯಸ್ಸಿಗೆ ಬರುವವರೆಗೂ ಯಾವ ರೀತಿಯಲ್ಲೂ ಅದಕ್ಕೆ ನೋವಾಗದಂತೆ ಅಪ್ಪಟ ಅಮ್ಮನಾಗಿ ಬೆಳೆಸಿದ. ಅಪ್ಪನಾಗಿ ಜೊತೆಯಾದ. ಪುಟ್ಟ ಹುಡುಗಿಗೆ ಥೇಟು ಹುಡುಗಾಟದ ಸ್ನೇಹಿತನಂತೆ ಚಂದುಕಾಕ ಜೊತೆಗಿದ್ದ. ಹುಡುಗಿ ವಯಸ್ಸಿಗೂ ಮೊದಲೇ ಅಪ್ಪನಂತೆ ಗಾಡಿ ಕಲಿತಳು. ಕಾರು, ಗಾಡಿಗಳೆಲ್ಲ ಪಳಗಿದವು. ಶಾಲೆಯಲ್ಲೂ, ಸಮಾಜದಲ್ಲೂ ಅಮ್ಮನಿಲ್ಲದ ಮಗುವಿಗೆ ಸಿಗಬೇಕಾದ ಕನ್ಸೆಷನ್ ಸಿಕ್ಕುತ್ತಿದ್ದುದರಿಂದ ಪುಟ್ಟಿ, ಕಾಕಿಯ ನೆನಪು ಮತ್ತು ಆರ್ದ್ರತೆಯಿಂದ ಹೊರಬಂದರೂ ಹಬ್ಬಹರಿದಿನಗಳಲ್ಲಿ ಎಲ್ಲ ಮಾಡಿಕೊಂಡು ಕೂರುತ್ತಿದ್ದರೆ ಪಕ್ಕನೆ ಆಕೆಯ ಗೈರುಹಾಜರಿ ಅವರಿಬ್ಬರನ್ನೂ ಕಾಡುತ್ತಿತ್ತು. ಅದ್ಯಾಕೋ ತುಂಬಿದ ಮನೆ ಒಮ್ಮೆಲೇ ಖಾಲಿಯಾದಂತೆನ್ನಿಸಿ ಇಬ್ಬರೂ ಕಣ್ಣೀರಾಗುತ್ತಿದ್ದರು. ಎದ್ದೊಡನೆ ಅಮ್ಮನ ಪಟಕ್ಕೆ ಕೈ ಮುಗಿದು ಹುಡುಗಿ ಶಾಲೆಗೆ ಹೊರಡುತ್ತಿದ್ದರೆ ಕಾಕ ಒದ್ದೆಯಾಗುತ್ತಿದ್ದ. ಆಕೆಯಿಲ್ಲದ ಮನೆ, ಮನಸ್ಸು ಏನೂ ಮಾಡಿದರೂ ತುಂಬುತ್ತಿರಲಿಲ್ಲ. ಇನ್ನಾಕೆ ಇಲ್ಲ ಎನ್ನುವುದರ ಅರಿವು ಇದ್ದರೂ ಕಾಕಿ ಉಳಿಸಿದ್ದ ಗುರುತು ಅಷ್ಟು ಸುಲಭಕ್ಕೆ ಮಾಯುವಂಥದ್ದಾಗಿರಲಿಲ್ಲ.
ಪುಟ್ಟಿ ಓದಿಕೊಂಡು ಇನ್ನೇನು ಕೊನೆಯ ವರ್ಷದ ಪರೀಕ್ಷೆಗೆ ತಯಾರಾಗುತ್ತಿದ್ದಳು. ಕಾಕ ಈಗ ಗ್ಯಾರೇಜಿನಲ್ಲಿ ಮತ್ತೆ ಬಿರುಸಾಗಿದ್ದ. ಆದರೆ ಸಮಯ ಮತ್ತೊಮ್ಮೆ ಕೈಕೊಟ್ಟಿತ್ತು. ಆವತ್ತು ಟ್ರಯಲ್ಲಿಗೆ ಹೋದ ಗಾಡಿಯೊಂದಿಗೆ ಕಾಕ ವಾಪಸ್ ಬರಲಿಲ್ಲ. ಅವನ ಪುಟಾಣಿ ಮಾರುತಿಯ ಮೇಲೆ ಯಮವೇಗದಿಂದ ಬಂದ ಟಿಪ್ಪರು ಹತ್ತಿ ಬಿಟ್ಟಿತ್ತು. ಹುಡುಗ ಓಡುತ್ತ ಬಂದು ಪುಟ್ಟಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಮಾರುತಿಯಿಂದ ಹೊರಗೆಳೆಯುವಾಗ ಕಾಲುಗಳೆರಡೂ ಅಪ್ಪಚ್ಚಿಯಾಗಿ ನರಗಳು ಲಾಡಿಯಂತೆ ನೇತಾಡುತ್ತಿದ್ದವು. ಕಾರಿನಲ್ಲಿ ಹೋಗಿದ್ದ ಕಾಕ ಮನೆಗೆ ಬರುವಾಗ ಯಾವ ಲೆಕ್ಕದಲ್ಲೂ ರಿಪೇರಿಯಾಗದೆ ಗಾಲಿಕುರ್ಚಿಯಲ್ಲಿ ಬಂದಿದ್ದ. ಬಗಲು ಕೋಲಿಡಿದು ಮನೆ ಮಟ್ಟಿಗೆ ನಡೆಯುತ್ತನಾದರೂ ಮೊದಲಿನ ಬದುಕಿರಲಿಲ್ಲ. ಇತ್ತ ಪರೀಕ್ಷೆ, ಅತ್ತ ಅಪ್ಪನ ಜವಾಬ್ದಾರಿ, ಆರೈಕೆ, ದವಾಖಾನೆ, ಓಡಾಟ ಎಲ್ಲವನ್ನು ಹುಡುಗಿ ಪೂರೈಸಿದ್ದಳು. ಗ್ಯಾರೇಜ್ ಹುಡುಗರನ್ನಿಟ್ಟುಕೊಂಡು ಪುಟ್ಟಿ ತಿಂಗಳೊಪ್ಪತ್ತಿನಲ್ಲಿ ಸಂಭಾಳಿಸಿದ್ದಳು. ಆದರೆ ಕಾಕನ ಗಾಡಿಯ ಬದುಕಿನ ಮಜಲು ಕಾಯಂ ಆಗಿ ಮುಗಿದು ಹೋಗಿತ್ತು. ಆವತ್ತು ಕಳೆದ ಜೀವನೋತ್ಸಾಹ ಇವತ್ತಿಗೂ ಕಾಕನ ಮುಖದಲ್ಲಿ ಮೂಡಿಸಲಾಗುತ್ತಿಲ್ಲ. ಮಗಳು ದಂಡೆಗೆ ಹತ್ತಿದ, ಜವಾಬ್ದಾರಿ ಕಳೆಯುವ ಸಂತೃಪ್ತಿ ಕಾಣುತ್ತದೆಯಾದರೂ ಪೂರ್ತಿ ಬದುಕಲ್ಲಿ ಏಟಿನ ಮೇಲೇ ಏಟು ಬಿದ್ದು ಹಣ್ಣಾದಾಗ ಆಗುವ ಯಾತನೆ ಮಾತ್ರ ಮನಸ್ಸಿಗೆ ಗೊತ್ತಾಗುವಂಥದ್ದು.
‘ಮೊದಲ ಆಕಿ ಹೋದಳು. ಈಗ ಹಿಂಗಾತು. ಒಂದು ಹೇಳ್ ತಮ್ಮಾ, ಈ ಹೆಣ್‌ಮಕ್ಕಳಿಗೆ ಹೆಂಗಾದರ ಇಂಥಾ ಶಕ್ತಿ ಬರತದ..? ನಮ್ಮಾಕಿ ಹೋಗಿದ್ದ... ನನಗಿನ್ನೂ ಅರವಗಲ್ದು ಆದರ ಈ ಪುಟ್ಟಿ ನೋಡು. ನನ್ನ ಪರಿಸ್ಥಿತಿ ಹಿಂಗಾಗಿದ್ದಕ್ಕ ನಾ ಇರೋತಂಕ ಮದ್ವಿನೂ ಬ್ಯಾಡ ಅಂತಾ ಕುಂತಾಳು. ಹಿಂಗಂದರ ಆಗ್ತದೇನೋ..? ನಾನೇನೋ ಬಿದ್ದು ಹೋಗೋ ಮರ. ಗ್ಯಾರೇಜ್ ಹುಡುಗೋರು ಒಬ್ರಲ್ಲ ಒಬ್ರು ನನ್ನ ನೋಡ್ಕೋತಾರು. ಅಗದೀ ಎದ್ದು ಓಡಾಡೋದಿಲ್ಲ ಖರೆ. ಆದರೂ ಮನಿಮಟ್ಟಿಗ ಕೋಲು ಸಾತ್ ಕೊಡ್ತದ ಸಾಕು, ಹೆಂಗರೆ ನನ್ನ ಟೈಮ್ ಮುಗಿತದ ಅಂದರ ಪುಟ್ಟಿ ಏಕ್‌ದಂ ಹಿರೇರಗತೇ ಆಡತಾಳು. ನಿನ್ನ ಯಾರು ನೋಡ್ಕೊತಾರು..?’ ಅಂತಾಳ ಮಾರಾಯ ಥೇಟ್ ಅವರವ್ವನಂಗ. ಗದರೋದರಾಗಂತೂ ಒಂದು ಕೈಮುಂದ..’ ಎನ್ನುತ್ತಿದ್ದರೆ,
 ‘ಸುಮ್ನಿರಪ್ಪ. ಬಂದಾವ್ರ ಮುಂದೆಲ್ಲ ಇದ ಕತೀ ಹೇಳ್ತಿಯಲ್ಲ. ಅಪ್ಪಂಗ ಅರ್ಜೆಂಟ್ ಆಗಿ ನನ್ನ ಮದ್ವಿ ಮಾಡಿ ಕಳಿಸ್ಬೇಕಾಗೇದ ನೋಡ ಮಾಮಾ..’ ಎನ್ನುತ್ತಿದ್ದರೆ ಇಬ್ಬರ ಯಾವ ಭಾವಕ್ಕೂ ಪ್ರತಿಕ್ರಿಯಿಸದ ನಾನು ಸುಮ್ಮನೆ ಕುಳಿತಿದ್ದೆ. ಮನೆಯ ಹೆಣ್ಣುಮಕ್ಕಳಿಗಾಗಿ ಮರುಗುತ್ತಿರುವ ಕಾಕ, ತಾನು ಹೋದರೆ ಮುಂದೆ ಅಪ್ಪನ ಗತಿಯೇನು ಎನ್ನುವ ಮಗಳು.. ಇಷ್ಟು ಚೆಂದದ ಮನಸ್ಸು ಮತ್ತು ಆತ್ಮ ಅವಳಿಗೆ ಮಾತ್ರ ಇರಲು ಸಾಧ್ಯವೇನೋ..?
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

Monday, January 18, 2016

ಚೆ೦ದದ ಘಳಿಗೆಗಳಿಗೆ ಆಯಸ್ಸು ಕಮ್ಮಿ..

ವ್ಯವಸ್ಥೆ ಇದ್ದಾಗಲೂ ಗಾಡಿಗಳು ಹಳಿ ತಪ್ಪುತ್ತವೆ. ಆದರೆ ತೀರಾ ನಿಯತ್ತಿನ ಬದುಕಿಗೂ ಕಣ್ಣು ಬೀಳುತ್ತಲ್ಲ...? ನಾವೇನೇ ಬದುಕುತ್ತಿದ್ದೇವೆ೦ದರೂ, ಎಷ್ಟೇ ಚೆ೦ದದ ಗೂಡು ಮಾಡಿಕೊ೦ಡರೂ ಕೊನೆಯಲ್ಲೆಲ್ಲೊೀ ಕೈಮೀರಿದ ಆಘಾತಕ್ಕೆ ಸಿಕ್ಕಿಬಿಡುವುದು ಮಾತ್ರ ದುರ೦ತ. 



ತೀರಾ ಕ್ಲಚ್ಚು, ಪ್ಯಾಡುಗಳಿಗೆ ಕಾಲೂ ನಿಲುಕದಿದ್ದ ಕಾಲದ ಭಯಾನಕ ಸ್ಪೀಡಿನಲ್ಲಿ ಗಾಡಿ ಓಡಿಸುವ, ಇಂಗ್ಲಿಷ್ ಸ್ಟಂಟುಗಳ ಸಾಹಸಕ್ಕೆ ಮನಸೋತಿದ್ದವನು ನಾನು. ಆದರೆ ಗಾಡಿ ಅತ್ಲಾಗಿರಲಿ.. ಓಣಿಯ ಹುಡುಗರೆಲ್ಲ ಮೆಟ್ರಿಕ್ ಹೊತ್ತಿಗೆ ಬೈಕನ್ನು ಸರಾಗವಾಗಿ ಚಲಾಯಿಸುತ್ತಿದ್ದರೆ, ಬಾರ್ ಮೇಲೆ ಸರಿಯಾಗಿ ಕಾಲು ಹಾಕಲೂ ನಾನು ಕಲಿತಿರಲಿಲ್ಲ. ಕಡೆಗೂ ಸ್ವಂತಕ್ಕೊಂದು ಸೈಕಲ್ಲಿನ ಕನಸು ಈಡೇರಲೇ ಇಲ್ಲ. ಕೈಗೆ ದಕ್ಕದ ಆಗಸದ ಬಗ್ಗೆ, ನಿಲುಕುವುದಿಲ್ಲ ಬಿಡು ಎನ್ನಿಸುತ್ತಿದ್ದಂತೆ ಬಿಟ್ಟೂಬಿಡುತ್ತೇನೆ. ಆಗದ್ದನ್ನು ಆಗುವುದಿಲ್ಲ ಎಂದೊಪ್ಪಿಕೊಳ್ಳುವುದರಲ್ಲಿ ನನಗ್ಯಾವ ಅವಮಾನಗಳೂ ಕಾಡಿದ್ದಿಲ್ಲ.
ಆದರೆ ಕೆಲವೊಮ್ಮೆ ಸಮಯ ನಮಗರಿವಿಲ್ಲದೆ ಲಬಕ್ಕನೆ ತಿರುಗಿಬಿಡುತ್ತದೆ. ಹಾಗೆ ತಿರುಗಿದ ಹೊತ್ತಿನಲ್ಲಿ ಅನಾಮತ್ತಾಗಿ ಆಗಿನ ಕಾಲದ ಆರ್ಟಿಝೆಡ್ಡು, ಕಮ್ಯಾಂಡರ್ ಜೀಪು, ಅಂಬಾಸೆಡರು, ಫೀಯೆಟ್ಟು ಕೊನೆಗೆ, ಬೆಳಗಿನ ಹಾಲು ಪೂರೈಸುವ ವ್ಯಾನುಗಳು, ತರಕಾರಿ ವಾಹನ, ಕಾರ್ಪೋರೇಷನ್ನಿನ ನಾಯಿ ಹಿಡಿಯುವ ಗಬ್ಬುಗಾಡಿ ಹೀಗೆ ಕಣ್ಣಿಗೆ ಕಂಡ ಗಾಡಿಗಳೆಲ್ಲ ಕೈಗೆಟುಕಿ ಹೋಗಿದ್ದು ಮತ್ತು ಆ ಕಾಲ ಎರಡೂ ಇತಿಹಾಸ. ಹಾಗೆ ನನ್ನ ಗಾಡಿಗಳ ಹುಕಿಯನ್ನು ಮತ್ತು ಇಲ್ಲಿವರೆಗಿನ ಕನಿಷ್ಠ ಒಂದೂ ಕಾಲು ಲಕ್ಷ ಕಿ.ಮೀ. ಡ್ರೈವಿಂಗನ್ನು  ದೇಶದ ಉದ್ದಗಲಕ್ಕೂ ಯಾವುದೇ ಅಪಘಾತವಿಲ್ಲದೆ ಪೂರೈಸಿದ್ದರೆ ಖಂಡಿತಕ್ಕೂ ಅದರ ಕ್ರೆಡಿಟ್ಟು ಚಂದುಕಾಕನಿಗೆ ಸಲ್ಲಬೇಕು.
‘ಸ್ಟೆರಿಂಗ್ ಮ್ಯಾಲೆ ಕೈಯಿಟ್ಟು ಕಣ್ಮುಚ್ಚಿದರೂ ಕೈಕಾಲು ಅಲ್ಲ ಹೋಗಬೇಕು, ಗಸಕ್ಕಂತ ಬ್ರೇಕ್ ಹೊಡದರೂ ಎದಿ ಒಡ್ಕೊಬಾರದು ನೋಡು. ಅಂದರನ ಪಕ್ಕಾ ಡ್ರೈವಿಂಗ್..’ ಎನ್ನುತ್ತಿದ್ದ ಚಂದುಕಾಕ. ಅವನ ಯೆಜ್ಡಿ ಅತಿದೊಡ್ಡ ಆಕರ್ಷಣೆ ಆಗ. ಸ್ವತಃ ಮೆಕಾನಿಕ್ ಆಗಿದ್ದ ಚಂದುಕಾಕ ಅಗತ್ಯಕ್ಕಿಂತ ದೊಡ್ಡ ಟೈರು, ಮ್ಯಾಚೇ ಆಗದ ಹ್ಯಾಂಡಲ್ಲು, ಒಂಟೆಯ ಡುಬ್ಬದಂತಹ ಸೀಟು, ಮೊರದಂತಹ -ಟ್‌ರೆಸ್ಟು ಇಂತಹ ಅವತಾರಗಳಿಂದ ಪಕ್ಕದ ಹೊಸ ಗಾಡಿ ನಿಲ್ಲಿಸಿದ್ದರೂ, ಜನರ ಕಣ್ಣು ಅಲ್ಲಿಂದ ಕದಲುತ್ತಿರಲಿಲ್ಲ. ತುಂಬ ನುರಿತ ಡ್ರೈವರ್ ಆಗಿದ್ದ ಚಂದುಕಾಕನೇ ನನ್ನಲ್ಲಿ ಡ್ರೈವಿಂಗ್‌ನ ನಶೆ ಏರಿಸಿದವನು ಎಂದರೂ ತಪ್ಪಾಗಲಿಕ್ಕಿಲ್ಲ. ಇವತ್ತಿಗೂ ಸತತ ಹದಿನಾರು ಗಂಟೆ ಕಾರು ಚಲಾಯಿಸುವ ಹವ್ಯಾಸಕ್ಕೆ ಪಕ್ಕದಲ್ಲಿ ಕೂತಿದ್ದವರೇ ಹೈರಾಣಾದರೂ ನಾನು ಆಕ್ಸಿಲೇಟರಿಂದ ಕಾಲ್ತೆಗೆದದ್ದಿಲ್ಲ.
ಚಂದುಕಾಕನ ಗಾಡಿ ರಸ್ತೆಗಿಳಿದರೆ ಸಾಕು ಮುದ್ದು ಮುzಗಿದ್ದ ಅವನ ಮಗಳು ಕಿಂಯ್ಯೋ.. ಎಂದರಚುತ್ತ ಬಾಗಿಲ ಬಳಿಯಲ್ಲಿ ತೆವಳಲು ಪ್ರಯತ್ನಿಸುತ್ತಿತ್ತು. ಐದು ತಿಂಗಳ ಮಗುವನ್ನು ಎದುರಿಗೆ ಕಪ್ಪೆ ತರಹ ಬಾರಲು ಕೂರಿಸಿಕೊಂಡು ಕಾಕಾ ಸುತ್ತು ಹೊಡೆಸುತ್ತಿದ್ದ. ಪಿಳಿಪಿಳಿ ಕಣ್ಣು ಬಿಡುತ್ತಾ ಪುಟ್ಟಿ ಪೆಟ್ರೋಲ್ ಟ್ಯಾಂಕಿನ ಮೇಲೆ ದಬ್ಬಾಕಿಕೊಂಡು ಕೂರುತ್ತಿತ್ತು. ಅವನು ಸೈಡು ಸ್ಟ್ಯಾಂಡ್ ಹಾಕಿದರೂ ಕದಲದೆ ಅದರ ಮೇಲೆ ಗುರಾಯಿಸುತ್ತಾ ಕೂತೇ ಇರುತ್ತಿದ್ದ ಮಗುವನ್ನು ಅವನಿಗಿಂತ ಮೊದಲು ನಾನು ಎತ್ತಿಕೊಂಡು ಇಳಿಸಿಕೊಳ್ಳುತ್ತಿz.‘ಇದೆ ಮಕ್ಳಿಗೆ ಅಭ್ಯಾಸ ಅಗ್ಬೇಕು ಸುಮ್ನಿರ್ ನೀನು..’ ಎಂದು ಗದರುತ್ತಿದ್ದ. ಆದರೆ ಅದೆಲ್ಲಿಂದಲೋ ಸುಂಟರಗಾಳಿಯಂತೆ ಬರುತ್ತಿದ್ದ ಕಕ್ಕಿ, ‘ಇನ್ನೊಮ್ಮೆ ಪುಟ್ಟಿನ್ನ ಕರ್ಕೊಂಡು ಹೋದರ ಬರೀ ಕೊಡ್ತೇನ್ ನೋಡ. ನಡೀರಿ ಅತ್ಲಾಗೆ. ಗಲೀಜ್ ಗಾಡಿ.. ಕರ್ರನ ಬಣ್ಣ, ಗಬ್ಬವಾಸನಿ, ಅದರ ಮೈತೊಳದ ಎಷ್ಟ ದಿನಾ ಆತೋ. ಸಣ್ಣ ಕೂಸ ಅನ್ನೋ ಖಬರ್ ಬ್ಯಾಡ’ ಎಂದು ಯಾವ ಲೆಕ್ಕದಲ್ಲೂ ಪಾಲುದಾರನಲ್ಲದ ನನ್ನನ್ನೂ ಸೇರಿಸಿಕೊಂಡು ಕೈಗೆ ಸಿಕ್ಕಿದ ಪಾತೇಲಿ, ಟುವಾಲು, ಪಿಸವಿ, ಮೊಗಚಿಕಟ್ಟಿಗಿ... ಯಾವುದೆಂದರೆ ಅದರಿಂದ ಅಟ್ಟಾಡಿಸುತ್ತಿದ್ದಳು.
ಆ ಕ್ಷಣಕ್ಕೆ ಮಗುವನ್ನು ಕಿತ್ತುಕೊಂಡು ನಮ್ಮನ್ನು ಬೈದಾಡಿ ಹೋದರೂ ಕಕ್ಕಿಗೆ ಚಂದೂಕಾಕನ ಗಾಡಿಗಳ ವ್ಯಾಮೋಹದ ಬಗ್ಗೆನೂ ಅಷ್ಟೇ ಹೆಮ್ಮೆ ಇತ್ತು. ಅವನ ಗ್ಯಾರೇಜು ಮತ್ತು ಗಾಡಿ ಅಷ್ಟಿಷ್ಟು ಹೊಲಸಾದರೂ, ತಾನೆ ಬೆಳಬೆಳಗ್ಗೆ ನೀರು ಸೋಕಿ ತಿಳಿದಷ್ಟು ಸ್ವಚ್ಛ ಮಾಡಿಡುತ್ತಿದ್ದಳು. ತುಂಬ ಸಂಯಮದಿಂದಲೂ, ಎಚ್ಚರಿಕೆಯಿಂದಲೂ, ಬಳಲಿಕೆ, ಬಾಯರಿಕೆ ಇತ್ಯಾದಿ ಬಾಧೆಗಳಿಗೆ ಒಗ್ಗಿಕೊಂಡೂ, ಸ್ಥೀಮಿತತೆ ಕಳೆದುಕೊಳ್ಳದೆ ಹೇಗೆ ಡ್ರೈವರಿಕೆ ಮಾಡಬೇಕೆನ್ನುವುದರ ಅಪ್ಪಟ ಗುರು ಅವನೇ ನನಗೆ. ಊರಿಗೆಲ್ಲ ಚಂದುಕಾಕಾ -ಮಸ್ಸಾದರೂ ಕಕ್ಕಿಗೆ ಮಾತ್ರ ಆತ ಎಬಡ ಡ್ರೈವರ್.
‘ಬರೇ ಬ್ರೆಕ್ ಹಾಕ್ತಾರು, ಜೋಲಿ ಹೋದಂಗಾಗ್ತದ, ಇವ್ರ ಗಾಡ್ಯಾಗ ಕುಂತಷ್ಟ ಹೊತ್ತೂ ನಿಗರಾಣಿ ಇಟ್ಟ ಕುಂದರಬೇಕ ನೋಡು, ಜೋರ್ ಓಡಸ್ತಾರು, ತಿರುವಿನ್ಯಾಗೂ ಹಾರ್ನ್ ಮಾಡೊಲ್ಲ, ನಡಬರಕ ಓಡಸ್ತಾರು, ಎಡ ಬಲ ಇಲ್ಲ. ಕಿಡಕಿ ತಗದಿಟ್ಟರ ಗಾಳಿ ಭಾಳ, ವಾಂತಿ ಬಂದಂಗಾಗ್ತದ...’ ಹೀಗೆ ಒಂದೆರಡಲ್ಲ ಆಕೆಯ ಕಂಪ್ಲೆಂಟುಗಳು.
‘ಕಂಡವರೆಲ್ಲ ನನ್ನ ಡ್ರೈವರಿಕಿ -ಮಸ್ಸು ಅಂತಾರ. ಈಕೀಗ ಮಾತ್ರ ಗಾಡ್ಯಾಗ ಕುಂಡ್ರಾಕ ಹೆದ್ರಿಕಿ. ಇನ್ನ ಹೆಂಗ ಗಾಡಿ ಹೋಡಿಲ್ಯೋ..? ಬರೇ ಇಪ್ಪತ್ತರಾಗ ಓಡಿಸ್ಲೇನು..’ ಎಂದು ಕಾಕಾ ರವರವ ಚೀರುತ್ತಿದ್ದ. ಅವರಿಬ್ಬರ ಚೆಂದದ ಸರಸಕ್ಕೂ, ಪ್ರೀತಿಯ ಜಗಳಕ್ಕೂ ಎರಡೂ ಕಡೆ ಪಾರ್ಟಿ ವಹಿಸಬೇಕಾದಾಗೆಲ್ಲ ಕಾಕಾನ ಕಡೆಯಿಂದಲೂ ಮೇಜುವಾನಿಗೂ, ಕಕ್ಕಿಯ ಕಡೆಯಿಂದ ಕಜ್ಜಾಯದ ಸಂತೆಗೂ ನಾನು ಪಕ್ಕಾಗುತ್ತಿz.
ಕೆಲದಿನದ ಹಿಂದೆ ಅವನಿಂದ ತಂದುಕೊಂಡಿದ್ದ ಗಾಡಿ ನನ್ನ ಬಳಿಯೇ ಉಳಿದು ಎರಡ್ಮೂರು ವಾರವೇ ಆಗಿತ್ತು. ಗ್ಯಾರೇಜಿಗೆ ಬಿಟ್ಟು ಬರೋಣವೆಂದು ಮನೆ ಕಡೆ ಹೋಗುವ ಹೊತ್ತಿಗೆ ಜನಸಂದಣಿ. ಮನೆ, ಗ್ಯಾರೇಜು, ರಸ್ತೆ ಎಲ್ಲೂ ಜನವೋ ಜನ. ಊರಕಡೆಯಿಂದ ಟೆಂಪೋದಲ್ಲಿ ಬರುತ್ತಿದ್ದ ಕಕ್ಕಿ ಜೀವಂತವಾಗಿ ಈಚೆಗೆ ಬಂದಿಲ್ಲ. ಅರಳುಮರಳಿನ ಕಾಕಾ, ಏನೂ ತಿಳಿಯದ ಮಗು ಪೆಕರು ಪೆಕರಾಗಿ ಅರಬರೆ ಅಳುತ್ತಾ ಕೂತಿದೆ. ಗಾಡಿ, ಅಲ್ಟರೇಷನ್ನು, ಆ ವೇಗ ಎಲ್ಲ ಮಡಚಿಟ್ಟ ಬದುಕು ಬಾರಲು ಬಿದ್ದಿತ್ತು. ಬಂದಿದ್ದ ಜನ ನೆಂಟರು ಎಲ್ಲ ಕರಗಿದರು. ಚಂದುಕಾಕಾ, ಪುಟ್ಟಿ ಮತ್ತು ಗ್ಯಾರೇಜು ಎಲ್ಲ ಮೌನವಾಗಿ ಹೋಗಿದ್ದವು. ಆದರೆ ತಿಂಗಳೊಪ್ಪತ್ತಿನಲ್ಲಿ ಎದ್ದು ನಿಂತಿದ್ದ ಕಾಕಾ.
ಮಗು ಏಳುವ ಮೊದಲೇ ಎದ್ದು ಕಕ್ಕಿ ಮಾಡುತ್ತಿದ್ದಂತೆ ಬೆಳ್‌ಬೆಳಗ್ಗೆ ಹಾಲು, ಆಮೇಲೆ ತಿಂಡಿ, ಮಧ್ಯಾಹ್ನ ತರಕಾರಿ, ಊಟದ ನಂತರ ಒಂದು ಗುಕ್ಕು ನಿz.. ಆಗ ಶುರುವಾಗುತ್ತಿತ್ತು ಮರಣಸಂಕಟ. ಮಗು ‘ನಾನು ಮಧ್ಯ ಮಲಗಬೇಕು. ಅಮ್ಮ ಎಲ್ಲಿ..’ ಎನ್ನುತ್ತಾ ಎದ್ದು ಕೂತು ಬಿಡುತ್ತಿತ್ತು. ಭರಭರನೆ ಮನೆಯೆಲ್ಲ ಹುಡುಕುತ್ತಿತ್ತು. ಕಕ್ಕಿ ಇzಗ ಕರ್ಟನ್ ಹಿಂದೆ ನಿಂತು ಬಚ್ಚಿಟ್ಟುಕೊಂಡು ಆಡಿಸುತ್ತಿದ್ದ ಕಣ್ಣಮುಚ್ಚಾಲೆ ನೆನೆಸಿಕೊಂಡು ಬಾಗಿಲಿನದಷ್ಟೇ ಅಲ್ಲ ಕಿಟಕಿಯ ಕರ್ಟನ್‌ಗಳನ್ನೂ ಅಡಿಸಿ ನೋಡುತ್ತ, ಕುಸುಕುಸು ಮಾಡಿ ಅಳುತ್ತ ‘ಅಮ್ಮ ಕಾತ ಕೊದಲ್ಲ..ಬಾ..’ ಎಂದು ತೊದಲಾಡುತ್ತಾ ನಿಂತು ಬಿಡುತ್ತಿದ್ದರೆ ಜಗತ್ತಿನ ಅಷ್ಟೂ ಅಳು ಅಲ್ಲೇ ಸುರಿಯುತ್ತಿತ್ತು.
ತೀರಾ ಹಲ್ಲು ಕಚ್ಚಿ ಕೂರುತ್ತಿದ್ದ ಕಾಕಾ ಅರೆಬರೆ ಅಳುತ್ತಾ ‘ಅಮ್ಮ ಟಾಯ್ಲೆಟ್ಟಿಗೆ ಹೋಗಿದೆ ಪುಟ್ಟ..’ ಎನ್ನುತ್ತಾ ಸಂಭಾಳಿಸಲು ನೋಡುತ್ತಿದ್ದನಾದರೂ ಮಗು ಸೋಲೊಪ್ಪದೆ, ಅಲ್ಲೂ ಬಾಗಿಲಾಚೆ ನಿಂತು ಸಂದಿಗೆ ಪುಟ್ಟ ಪುಟ್ಟ ಬೆರಳಿಂದ ತಟ್ಟುತ್ತಾ‘ಅಮ್ಮ ಬಾ ..ಬಾ..’ ಎನ್ನುತ್ತಿತ್ತು. ಮನೆಯೆಲ್ಲ ಭಣಭಣ ಎನಿಸುವುದು ಮಗುವಿಗೂ ಸಹ್ಯವಾಗುತ್ತಲೇ ಇರಲಿಲ್ಲ. ಅಂತೂ ಮತ್ತಾರು ತಿಂಗಳು ಕಳೆಯುವ ಹೊತ್ತಿಗೆ ಅಮ್ಮ ಬರುವುದಿಲ್ಲ ಎನ್ನುವ ಕಹಿಸತ್ಯದ ಜೊತೆಗೆ ಅಪ್ಪನಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಪಕ್ಕಾಗತೊಡಗಿತ್ತು. ಗ್ಯಾರೇಜನ್ನು ಹುಡುಗರು ನೋಡಿಕೊಳ್ಳುತ್ತಿದ್ದರು. ಅಗತ್ಯ ಬಿzಗ ಮಾತ್ರ ಮಗುವನ್ನು ಬಿಟ್ಟು ಕೈಗೆ ಗವಸು ತೊಡುತ್ತಿದ್ದ ಕಾಕಾ ಮಗುವನ್ನು ಅಪ್ಪಟ ಕಕ್ಕಿಯಂತೆ ದೇಖರೇಖಿ ಮಾಡುತ್ತಿದ್ದ. ಆಗೀಗ ಸುಮ್ಮನೆ ಕಾಕಾ ಜೊತೆ ಕೂತೆದ್ದು ಬರುವುದರ ವಿನಃ ನಮ್ಮ ಹುಡುಗರ ಹಿಂಡಿಗೂ ಮಾತೇ ಇರಲಿಲ್ಲ.
‘ಆಗಿzತು ಕಾಕಾ ಪುಟ್ಟಿ ಬಾಳೆನರ ಹಸನಾಗಬೇಕಲ್ಲ. ಹಿಂಗ ಕೂಡಬ್ಯಾಡ’ ಎನ್ನುತ್ತಿದ್ದರೆ,‘ಆಕೀ ಜೊತಿಗೇ ಅರ್ಧಬದುಕು ಹೋತು ಇನ್ನೇನಿದ್ದರೂ ಪುಟ್ಟಿ ಮಾತ್ರ. ಆಕೀ ಇzಗ ದಿನಾ ನಾವಿಬ್ಬರೂ ಮಲಗೋತಂಕ ನಿಗಾ ಇಡತಿದ್ಲು. ಎಷ್ಟೊ ಸರ್ತಿ ನಾವಿಬ್ಬರೂ ಮಲಗಿದ್ದನ್ನು ಕಣ್ತುಂಬ ನೋಡಕೋತ ಹಂಗ ಕೂತಿರ್ತಿದ್ಲು. ಆಕೀ ಇಲ್ಲದ ವರ್ಷಾದರೂ ಮನೀ ಮಾತ್ರ ಇನ್ನು ಭಣಭಣ ಅನ್ನಿಸ್ತದನೋ. ಪುಟ್ಟಿ ಅಂದರ ಆಕೀಗೆ ಜೀವ. ನಿಮ್ಮ ಕಾಕಿ ನೋಡ್ಕಂಡಂಗ ಆಗೂದಿಲ್ಲ. ಆದರ ಕಸರಿಲ್ದಂಗ ಮಾಡ್ತೇನಿ. ಆಕೀ ಅಲ್ಲಿಂದನ ಪುಟ್ಟಿ ಮ್ಯಾಲ ನಿಗಾ ಇಟ್ಟಿರ್ತಾಳ ಮಾರಾಯ. ಈಗ ನೋಡು... ನಾ ಹೆಂಗಿದ್ದರೂ ಪಿಸವಿ ತೊಗೊಂಡು ಭಾರಸಾಕ ಯಾರೂ ಇಲ್ಲ. ಆದರ ಗಾಡಿ ಹೊಡಿಯೋ ಉಮೇದಿನ ಸತ್ತುಹೋತು ನೋಡ..’ ಚಂದುಕಾಕನ ಮಾತಿಗೆ ಕಣ್ಣೀರು ಕಪಾಳಕ್ಕೆ ಇಳಿಯುತ್ತಿದ್ದರೆ ನಾನೂ ಒzಯಾಗಿ ಹೋಗುತ್ತಿz. ಹೇಗೋ ಬದುಕು ಹಳಿಗೆ ಹತ್ತುತ್ತದಾ ಎನ್ನಿಸತೊಡಗಿತ್ತು. ವರ್ಷಗಳು ಉರುಳಲಾರಂಭಿಸಿದ್ದವು. ಪುಟ್ಟಿ ಬದುಕಿಗೆ ಏಗಿದ್ದಳು. ಆದರೆ ದೇವರು ಯಾಕೋ ಆ ಕುಟುಂಬದ ಮೇಲೆ ಮುನಿಸಿಬಿಟ್ಟಿದ್ದ. ಅದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

Saturday, January 9, 2016

ಕೈಗೆಟುಕದ ಕಾಡುಬೆಳದಿಂಗಳು...   


ಬಹುಶಃ ಒಳ್ಳೆಯತನ ಎನ್ನುವುದು ಹುಟ್ಟಿನಿಂದಲೇ ಬಂದಿರುತ್ತಾ ಅಥವಾ ಬೆಳೆಯುತ್ತಾ ಹಾಗೊಂದು ಸ್ಥಿತಿಗೆ ಹೆಣ್ಣುಮಕ್ಕಳು ಈಡಾಗಿಬಿಡುತ್ತಾರಾ ಗೊತ್ತಿಲ್ಲ. ಆದರೆ ಗಂಧದಂತೆ ಸ್ವತಃ ತೇಯ್ದು ಕಂಪು ಹರಡುವ ಗಟ್ಟಿತನವಿರುವುದು ಮಾತ್ರ ಆ ಜೀವದ ಎನ್ನುವುದು ಸಾಬೀತಾಗುತ್ತಲೇ ಇರುವ ಸತ್ಯ.
ಬಡತನ ಮತ್ತು ಮಕ್ಕಳೆನ್ನುವುದು ಒಂದಕ್ಕೊಂದು ಸೇರಿಕೊಂಡೆ ಬೆಳೆಯುವುದು ಆಗಿನ ಸಹಜತೆಯಾಗಿತ್ತು. ಅದರಲ್ಲೂ ಹಳ್ಳಿಗಳಲ್ಲಿ ಬದುಕು ಕಳೆಯುತ್ತಿದ್ದುದೇ ಮಕ್ಕಳು ಸಾಲುಸಾಲಾಗಿ ಹುಟ್ಟಿದರೆ ಎನ್ನುವ ಪರಿಸ್ಥಿತಿಯಿದ್ದ ಕಾಲ ಅದು. ಗುಂಪಿನಲ್ಲಿ ಗೋವಿಂದ ಎನ್ನುವಂತೆ ಆರು ಮಕ್ಕಳ ದೊಡ್ಡ ಟೀಮಿನೊಂದಿಗೆ ನಾನು ಏಳನೆಯವನಾಗಿ ಯಾವ ನಾಚಿಕೆಯೂ ಇಲ್ಲದೆ ಸೀತಕ್ಕನ ಮನೆಯಲ್ಲಿ ಗಂಗಾಳ ಹಿಡಿದುಕೊಂಡು ಕೂರುತ್ತಿz. ಲಿಂಗಾಯಿತರ ಮನೆ ರುಚಿಗಳೇ ಬೇರೆ. ಅದರಲ್ಲೂ ಮಾದೇಲಿಯಂತಹ ಗೋಧಿ ಕಜ್ಜಾಯಕ್ಕೆ ಎಂಥವನೂ ‘ಇನ್ನೊಂದ್ಸಲ್ಪ ಹಾಕ..’ಎನ್ನಬೇಕು. ಆದರೆ ಸೀತಕ್ಕ ಮಾತ್ರ ‘ಭಟ್ಟಾ... ನಿಮ್ಮಪ್ಪ ಬೈದ್ರ ನಂಗ್ ಗೊತ್ತಿಲ್ಲ. ಮೊದಲ ಹೇಳಿಲ್ಲ ಅನಬ್ಯಾಡ..’ ಎನ್ನುತ್ತಿದ್ದಳಾದರೂ,‘ಮಾಮಾ ಬೈದ್ರ ನನ್ನೆಸರು ಹೇಳು. ಏನೂ ಅನ್ನಾಂಗಿಲ್ಲ..’ ಎಂದೂ ಮುಚ್ಚಟೆ ಮಾಡುತ್ತಿದ್ದಳು. ಎಲ್ಲರಂತೆ ಸೀತಕ್ಕನ ಕುಟುಂಬವೂ ಆಗೀಗಿನ ಹಳವಂಡಗಳಿಗೆ ಸಿಲುಕುತ್ತಿತ್ತಾದರೂ, ಅದ್ಯಾವ ಸಂಕಟಗಳಿಗೂ ಮನೆಯ ಯಜಮಾನ ಇತ್ತ ತಲೆಯೇ ಹಾಕದಿದ್ದಿದ್ದು ಸೋಜಿಗ.
ಕ್ರಮೇಣ ವಿಷಯ ಈಚೆ ಬಂದಿತ್ತು. ಸೀತಕ್ಕನ ಗಂಡ ಇನ್ಯಾವಳz ಜೊತೆ ಹೋದವನು ಮನೆಗೇ ಬರುತ್ತಿರಲಿಲ್ಲ. ಇದರಿಂದ ಯಜಮಾನನಿಲ್ಲದ ಪರಿಸ್ಥಿತಿ ಏನಾಗಬಹುದಿತ್ತೋ ಅದೇ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸೀತಕ್ಕ ಯಾವ ಬಿಸಿಯೂ ತನಗೂ, ತನ್ನ ಅರ್ಧ ಡಜನ್ ಮಕ್ಕಳಿಗೂ ತಟ್ಟಗೊಡಲಿಲ್ಲ. ಜಮೀನು ಪರಭಾರೆ ಮಾಡಿ ವರ್ಷಕ್ಕಿಷ್ಟು ಹಣ, ಊಟಕ್ಕಿಷ್ಟು ಅಕ್ಕಿ ಎಂದು ಪಂಚಾಯ್ತಿಕೆ ಮಾಡಿಸಿ ಬಗೆಹರಿಸಿಕೊಂಡಿದ್ದಳು. ಹಣದ ದಾರಿ ಬಂದಾಗುತ್ತಿದ್ದಂತೆ ಗಂಡ ಮನೆ ಬಾಗಿಲಿಗೆ ನಿಂತು ಗಲಾಟೆಗಿಳಿದಿದ್ದ. ಸೀತಕ್ಕನ ದೊಡ್ಡಮಗ ಮತ್ತು ಊರ ಹಿರಿಯರು ಅವನನ್ನು ಊರಾಚೆ ದಬ್ಬಿದ್ದರು. ಇದೆಲ್ಲದರ ಮಧ್ಯೆಯೂ ಎಲ್ಲ ಮಕ್ಕಳನ್ನು ಎಂಥಾ ಪರಿಸ್ಥಿತಿಯಲ್ಲೂ ಶಾಲೆಗೆ ಕಳಿಸಿ ಓದು ಮತ್ತು ವಿದ್ಯೆ ಎರಡಕ್ಕೂ ವಗಾತಿ ಮಾಡಿಕೊಂಡಿದ್ದಳು.
ಒಬ್ಬರಾದ ಮೇಲೊಬ್ಬರು ಕಲಿತು ನೌಕರಿ, ದಂಧೆ ಎನ್ನುತ್ತ ಊರು ಬಿಟ್ಟು ಪಟ್ಟಣದ ದಾರಿ ಹಿಡಿದಾಗಲೂ, ಹೆಣ್ಣುಮಕ್ಕಳಿಗೆ ಮದುವೆ ಆಗಿ ಹೋಗುವಾಗಲೂ ಸೀತಕ್ಕನ ಮಾತಿನಗಲಿ, ಮುಖದ ಮೇಲಾಗಲಿ ತನ್ನ ಬದುಕು ಹಿಂಗಾಯಿತಲ್ಲ ಎನ್ನಿಸಗೊಡಲಿಲ್ಲ. ವಾರಿಗೆಯ ಹೆಂಗಸರಿಗೂ ಸೀತಕ್ಕ ಗಟ್ಟಿಗಿತ್ತಿ. ಆದರೆ ಕ್ರಮೇಣ ಆಸ್ತಿ ಕೊಡುಕೊಳ್ಳುವಿಕೆಯಲ್ಲಿ ಮನಸ್ತಾಪಗಳಾದಾಗ ಮಾತ್ರ ಸೀತಕ್ಕ ಎಲ್ಲ ಮಕ್ಕಳನ್ನೂ ಕರೆದು ಹೇಳಿದ್ದಳು.
‘ನೋಡ್ರಪಾ.. ಒಬ್ಬ ತಾಯಾಗಿ ಏನು ಮಾಡ್ಬೇಕೊ ಅದನ್ನು ಮಾಡೀನಿ. ನಾ ಇರೋತಂಕ ಜಮೀನು ವ್ಯವಹಾರ ಎಲ್ಲ ಹಿಂಗ ನಡೀತದ. ಆ ಮೇಲೆ ಏನಾರ ಮಾಡ್ಕೊಳ್ರಿ. ಎಲ್ಲ ನಿಮ್ ನಿಮ್ ಊರಾಗ ಅರಾಮದಿರಿ. ನಿಮ್ಮನ್ನೆಲ್ಲ ಒಂದ ದಂಡಿಗೆ ಹಚ್ಚುವ ನನ್ನ ಕರ್ತವ್ಯಾ ನಾ ಮುಗ್ಸೇನಿ. ಕೋರಿಕುಂಟಿ ಅಂತ ಲೆಕ್ಕಾಪತ್ರಾ ಎ ಈಗ ಬ್ಯಾಡ...’ ಇತ್ಯಾದಿ ನುಡಿದದ್ದೇ ತಪ್ಪಾಗಿ ಹೋಯಿತಾ ಗೊತ್ತಿಲ್ಲ. ತೀರಾ ಹೆಣ್ಣುಮಕ್ಕಳೂ ಸಹಿತ ಯಾಕೋ ಮುನಿಸಿಕೊಂಡುಬಿಟ್ಟರು. ಸ್ವತಃ ಬದುಕಿಗೊಂದು ಗಮ್ಯ ಕಲ್ಪಿಸಿಕೊಂಡು, ವ್ಯವಸ್ಥಿತವಾಗಿ ತಾವೆಲ್ಲ ದಡ ಸೇರಿದ್ದರೂ, ಮನೆಯ ಮೂಲದ ಅರಿವಿದ್ದರೂ ಕೇವಲ ಜಮೀನು ಮತ್ತು ಹಣದ ವಿಷಯವಾಗಿ ಸೀತಕ್ಕ ಕೊನೆಕೊನೆಗೆ ಒಂಟಿಯಾಗುವಂತೆ ಮಾಡಿಬಿಟ್ಟಿದ್ದರು.
ಸೀತಕ್ಕ ಮಾತ್ರ ಅನಾಮತ್ತು ಹದಿನೈದು ವರ್ಷ ಥೇಟ್ ಜಿದ್ದಿಗೆ ಬಿದ್ದವರಂತೆ ಯಾರಿಗೂ ದಮ್ಮಯ್ಯ ಎನ್ನದೇ ಬದುಕಿದಳು. ಆದರೆ ಮುಪ್ಪು ಮತ್ತು ಅಸಹಾಯಕತೆ ಕೊನೆಗೊಮ್ಮೆ ಸೀತಕ್ಕನನ್ನು ಕೆಡುವಿ ಹಾಕಿತ್ತು. ಯಾರೂ ನೀಗದ ಹೊತ್ತಲ್ಲಿ ಸೀತಕ್ಕನ ತಂಗಿ ಆಗೀಗ ಬಂದು ನೋಡಿಕೊಳ್ಳುತ್ತ ಉಪಚಾರಕ್ಕೊಬ್ಬ ಹೆಣ್ಣಾಳನ್ನು ಇರಿಸಿzಳೆ. ಸುದ್ದಿ ತಿಳಿದು ಸಮಯ ಹೊಂದಿಸಿಕೊಂಡು ಊರ ಕಡೆ ಹೋಗಿ ಸೀತಕ್ಕನ ಮನೆಗೆ ಕಾಲಿಕ್ಕಿದರೆ, ಸ್ವಾಗತಿಸಿದ್ದು ಮಾತ್ರ ಬದುಕಿನ ಕಷ್ಟಗಳೆಡೆಗೊಂದು ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಂಡೆ ಬದುಕಿದ್ದ ಸೀತಕ್ಕನ ಅದೇ ಕಾನಿಡೆಂಟ್ ನಗು.
ಮೂರು ದಶಕಗಳ ಹಿಂದೆ ಹೇಗಿತ್ತೋ ಹಾಗೆಯೇ ಇತ್ತು. ಯಾವ ಕಂಪ್ಯೂಟರ್ ಮತ್ತು ತಂತ್ರeನಗಳೂ ಮನುಷ್ಯತ್ವವನ್ನೂ, ಬದುಕಿನೆಡೆಗಿನ ಅವರವರ ಅವಗಾಹನೆಯನ್ನೂ ಬದಲಿಸಲು ಸಾಧ್ಯವಿರಲಿಲ್ಲ. ಏನಿದ್ದರೂ ಮನುಷ್ಯ ತನ್ನೊಳಗೆ ಬದಲಾಗದೆ ಬದುಕು-ಜಗತ್ತೂ ಎರಡೂ ಬದಲಾಗದು ಎನ್ನಿಸಿದ್ದಕ್ಕೆ ಜ್ವಲಂತ ಉದಾಹರಣೆ ಸೀತಕ್ಕನ ಪರಿಸ್ಥಿತಿ. ಇಲ್ಲವಾದರೆ ಜಗತ್ತಿನ ಇಷ್ಟೂ ಅಗಾಧ ಬದಲಾವಣೆಗಳ ನಡುವೆಯೂ ಸೀತಕ್ಕ ಇವತ್ತಿಗೂ ಅದೇ ಕೌದಿಯ ಅಂಚು, ಹುರಿಗಳು ನೇತಾಡುತ್ತಿದ್ದ ಹೊರಸಿನ ಮೇಲೆ ನೆಲಕ್ಕೆ ಜೋಲುವಂತೆ ಮಲಗಿದ್ದ ದೃಶ್ಯ ಎದುರಿಗಿರುವುದು ಬಹುಶಃ ನಾ ಕಂಡ ಜೀವಜಗತ್ತಿನ ಅತಿದೊಡ್ಡ ವಿಪರ್ಯಾಸ.
ಹೊರಸಿನ ಮೇಲೆ ತಿರುಗಿ ಮೇಲಕ್ಕೆ ದಿಟ್ಟಿಸುತ್ತಾ ಮಲಗಿದ್ದ ಸೀತಕ್ಕ ಬಹುಶಃ ಸಾವಿನ ದಾರಿಯನ್ನು ಕಾಯುತ್ತಿದ್ದಳಾ? ಗೊತ್ತಿಲ್ಲ. ಅರೆಬರೆ ಬಟ್ಟೆ. ಉದುರಿದ್ದ ಊಟ ಅವಶೇಷಗಳು. ಡೆಟಾಲ್ ಗಾಢತೆ. ಮುಕುರುತ್ತಿದ್ದ ನೊಣಗಳ ಹಿಂಡು. ಕಣ್ಣಿನಲ್ಲಿ ಮಾತ್ರ ಈಗಲೂ ಬದುಕಿನ ಬಗೆಗೆ.. ಇದಿಷ್ಟೆ ಬಿಡು.. ಎನ್ನುತ್ತಿದ್ದ ಧಾರ್ಷ್ಟ್ಯ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
‘..ಸೀತಕ್ಕ ನಾನು ಭಟ್ಟರ ಹುಡುಗ... ಸಣ್ಣಾಂವ’ ಎಂದು ಪರಿಚಯಿಸಿಕೊಳ್ಳುತ್ತಿದ್ದರೆ ಅರೆಬರೆ ವಾಲುತ್ತಿದ್ದ, ಸ್ಥಿಮಿತದಲ್ಲಿಲ್ಲದ ಕೈ ಆಡಿಸುತ್ತಾ ‘ಯಾಕೋ ಗುರುತು ಸಿಗಲ್ಲ ಅನ್ಕಂಡಿಯೇನು..? ನೀವೆಲ್ಲ ಮರತ್ರೂ ನಾನು ಮರ್ತಿ. ಆದ್ರ ನನ್ನ ಮಾತ್ರ ಆ ದೇವರೂ ಮರ್ತ್ ಬಿಟ್ಟಾನ ನೋಡು..’ ಎನ್ನುತ್ತಿದ್ದರೆ ‘ಏನಿದು ಸೀತಕ್ಕ.. ಯಾಕ ಮಂಜಿ, ಶೀಲಾ ಯಾರೂ ಬರ್ಲಿನು..? ಹಿಂಗ್ಯಾಕ..?’ ಎನ್ನುತ್ತಿದ್ದರೆ ಅದ್ಯಾಕೋ ಸೀತಕ್ಕನಿಗೆ ಆ ಕ್ಷಣದಲ್ಲೂ ಮಕ್ಕಳ ಮತ್ತು ತನ್ನವರ ನಿರ್ಲಕ್ಷತನ, ಆ ಸಂಕಟದ ಬಗ್ಗೆ ಹೇಳಿಕೊಳ್ಳಬೇಕೆನಿಸಲಿಲ್ಲವೋ ಅಥವಾ ಏನಿದ್ದರೂ ನನ್ನ ದುರದಷ್ಟ ಎಂದು ಅದಕ್ಕೆಲ್ಲ ಬದ್ಧಳಾಗಿಬಿಟ್ಟಿದ್ದಳೋ ಎನ್ನುವುದೇ ಆಶ್ಚರ್ಯ.
‘ಏನಿಲ್ಲ ಬಿಡೊ.. ಬದುಕು ಅಂದ ಮ್ಯಾಲ ಇವೆ ಇದ್ದೇ ಇರ್ತಾವ. ಇಲ್ಲಿ ಮಾಡಿದ್ದನ್ನು ಇ ಅನುಭವಿಸಿ ಹೋಗ್ಬೇಕು ನೋಡು ಅದಕ್ಕ ಹಿಂಗೆಲ್ಲ ಆಗ್ತದ. ಯಾಕೋ ಏನೋ ಗೊತ್ತಿಲ್ಲದನ ಏನಾರೆ ತಪ್ಪು ಮಾಡಿರ್ತೇವಿ ಅದಕ್ಕ ದೇವ್ರು ಇ ಶಿಕ್ಷೆ ಕೊಡ್ತಾನಂತ. ನಿಮ್ಮಪ್ಪನೇ... ಇಷ್ಟೆಲ್ಲ ಪುರಾಣ ಹೇಳ್ತಿದ್ದ ಮತ್ತ ನೀನೇ ಕೇಳ್ತಿಯ..?’ ಎನ್ನುತ್ತಿದ್ದರೆ ‘ಅದೆ ಖರೆ ಸೀತಕ್ಕ. ಮದಲಿಂದು ಏನರ ಇರ್ಲಿ. ಕಾಕಾಗ ಈ..ಗರ ಸವಡಾಗಬೇಕಿತ್ತು. ಎಷ್ಟು ದಿನಾ ಅಂತ ನೀಲತ್ತಿ ನೋಡಿಕೊಂಡಾಳು..?’ ಎನ್ನುತ್ತಿದ್ದಂತೆ ಅಲ್ಲಿವರೆಗೂ ನಮ್ಮನ್ನೆಲ್ಲ ಒಂದು ಮಾರು ದೂರ ಇಟ್ಟೆ, ಯಾವ ದುಃಖವೂ ತನಗಲ್ಲ ಎಂದೇ ಬದುಕಿದ್ದ ಸೀತಕ್ಕ ಆ ಒಂದು ವಿಷಯಕ್ಕೆ ಬಂದಾಗ ಪೂರ್ತಿ ಕುಸಿದು ಹೋಗುತ್ತಿದ್ದಳು.
‘ನಿನಗ ಗೊತ್ತಿಲ್ಲದ್ದೇನದನೋ ಮಾರಾಯ. ಆಂವ ಈಗರ ಯಾಕ ಬರ್ತಾನು. ನಾ ಗಟ್ಟಿ ಇzಗ ಎರಿಗೂ ಬೇಕಾಗಿದ್ದೆ. ಇನ್ನೇನು ದಿನಾ ಎಣಿಸೋ ಟೈಮ್ ನೋಡು. ಆರು ಮಕ್ಕಳ ಮೈಗೆ ಅರಬಿ, ಹೊಟ್ಟಿಗ ಹಿಟ್ಟು ಕೂಡಿಸ್ವಾಗ ಹಿಂಗ್ಯಾಕ ಅಂತ ಅವನನ್ನು ಕೇಳಿಲ್ಲ. ಬರ್ಲಿ ಅಂತ ಈಗ್ಯಾಕ ಅನ್ನಸ್ಬೇಕು... ಅಲ್ಲಪಾ, ನಾನೇನೋ ಗಟ್ಟಿ ಇದ್ದೆ. ನಮ್ಮು ಅರ್ಧ ಡಜನ್ ಮಕ್ಕಳೂ ದಂಡಿಗೆ ಹತ್ತಿದ್ವು. ತಮ್ಮ ಮನಿ ಮಕ್ಕಳು ಹಿಂಗಧಿಧಿ.. ಪರದೇಶಿ ಆದ್ರ ಹೆಂಗಾದೀತು ಅಂತ ಆಕೀಗರ ತಿಳಿಬಾರದೇನು..? ವರ್ಷಕ್ಕೊಮ್ಮೆ ಕಂಡ ಗಂಡಸರ ಜೋಡಿ ಮಕ್ಕೋತ ಮಜಾ ಮಾಡೊ ಮುಂಚೆ ತಾನೂ ಒಂದ್ ಹೆಣ್ಣಮಗಳು, ತನ್ನ ಹಾಂಗ ಆಕೀಗೂ ಸಂಕಟಾದೀತು ಅಂತ ಗೊತ್ತಾಗಬೇಕಲ್ಲ. ಅದ ನೋಡು ನನ್ನ ದೊಡ್ಡ ಬ್ಯಾನಿಗ ತಳ್ಳಿದ್ದು. ನಾವ್ ನಾವ ಸರಿ ಇರದಿದ್ರ ಮಂದಿನ ಅಂದು ಏನಾದೀತು..? ಮಕ್ಕಳು ಮರಿ ನಾವು ಬೆಳಸೋತಂಕ. ನನ್ನ ಕೈಲಾದದ್ದು ಮಾಡಿ ಎರ ಬದುಕೂ ನಿಸೂರ ಆಗೋ ಹಂಗ ಮಾಡೇನಿ. ಯಾಕೋ ಕಡಿಗೊಮ್ಮೆ ಮಕ್ಕಳು, ಮೊಮ್ಮಕ್ಕಳು ಬಂದು ಮುಖಾ ತೋರಸ್ಲಿ ಅನ್ಸತದ. ಆದ್ರ ಯಾಕೋ ಯಾರೊಬ್ರೂ ಈ ಕಡೀಗೆ ಹಾಯ್ಲಿಲ್ಲ. ಇರ್ಲಿ ಬಿಡು ದೇವ್ರು ಅವರನ್ನೆಲ್ಲ ಛಲೋತ್‌ನಾಗ್ ಇಡ್ಲಿ. ಎಷ್ಟೆಂದರೂ ನಂದ.. ಸಂತಾನ ಅನು. ನನ್ನಂಗ ಅರಮರ್ಧ ಬದುಕು ಯಾರದೂ ಆಗೋದು ಬ್ಯಾಡ..’
ಈಗಲೂ ಒಳ್ಳೆಯದು ಅಂತ ಭೂಮಿಯ ಮೇಲೆ ಉಳಿದಿದ್ದರೆ ಬಹುಶಃ ಸೀತಕ್ಕನಂತವರಿಂದಲೇ. ತನ್ನ ಮರಣಸಂಕಟದ ಮಧ್ಯೆಯೂ ಅಪ್ಪಿತಪ್ಪಿಯೂ ಕೇಡು ನುಡಿಯದ ಸೀತಕ್ಕ ನಿಜಕ್ಕೂ ಅದ್ಯಾವ ದರ್ದಿಗೆ ಬಿದ್ದು ಅಷ್ಟೊಂದು ಒಳ್ಳೆಯತನದಿಂದ ಬದುಕಿದ್ದಳು..? ಕೇಳೋಣ ಎಂದರೆ ಮತ್ತೆರಡು ತಿಂಗಳಿಗೆ ಸೀತಕ್ಕನ ಜಾತ್ರೆ ಮುಗಿದಿತ್ತು. ಆದರೆ ಆಕೆಯ ನುಡಿ ಮತ್ತು ಜೀವನದುದ್ದಕ್ಕೂ ಏನೇ ಸಂಕಟಗಳಿಗೀಡಾದರೂ ಯಾರೊಬ್ಬರಿಗೂ ಕೇಡು ಹಾರೈಸದ ಮನಸ್ಥಿತಿ ನನ್ನನ್ನು ಇವತ್ತಿಗೂ ಕಲಕುತ್ತಲೇ ಇರುತ್ತದೆ. ಸೀತಕ್ಕ ಎ ಇದ್ದೀಯ. ಎಲ್ಲ ನಿನಗೆ ಕಾಣುತ್ತೆ. ಅದರೂ ನಿನ್ನಾತ್ಮ ನೆಮ್ಮದಿಯಾಗಿರಲಿ. ಅದಕ್ಕಿಂತ ಹೆಚ್ಚಿನದು ನಿನ್ನಂಥ ಅಮ್ಮನಿಗೆ ಏನು ಕೊಡುತ್ತೇನೆಂದರೂ ಕಡಿಮೆಯೇ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

Sunday, January 3, 2016

ಎಲ್ಲರ ಮನಸ್ಸುಗಳು ಹೀಗೆ ತುಡಿದರೆ ... 

ಮೇಲ್ನೋಟಕ್ಕೆ ಕಂಡಂತೆ ಒಬ್ಬರ ಬಗ್ಗೆ ಆಡಿಕೊಳ್ಳುವುದು ಸುಲಭ. ಆದರೆ ಬದುಕಿನಲ್ಲಿ ಗಮ್ಯಗಳಿಗೊಂದು ಮಾದರಿಯಾಗುವಂತೆ ಬದುಕುವುದು ತುಂಬ ಕಷ್ಟ ಮತ್ತು ತೀರ ಲಘು ಎನ್ನುವಂತೆ ಕಾಣುವವರೂ ಅಗಾಧ ವ್ಯಕ್ತಿತ್ವದ ಮಾದರಿಯಾಗುತ್ತಾರಲ್ಲ ಅದಕ್ಕೆ ಅಪರೂಪದ ಮನಸ್ಥಿತಿಯ ಗಟ್ಟಿ ಗುಂಡಿಗೆ ಬೇಕಿರುತ್ತದೆ.

ಬದುಕನ್ನು ಹೀಗೂ ಚೆಂದ ಮಾಡಿಕೊಳ್ಳುವವರಿದ್ದಾರಾ ಎನ್ನಿಸಿದ್ದು ಇತ್ತೀಚೆಗೆ ರಾಜಿಯನ್ನು ನೋಡಿದಾಗ. ನಾನು ನೋಡಿದಂತೆ ಬದುಕಿನ ಹಲವು ಮಜಲುಗಳಲ್ಲಿ ಆಕೆ ಯಾವತ್ತೂ ತನ್ನ ಜೀವನಕ್ಕೊಂದು ಶಿಸ್ತು, ಸಂಯಮ ಅಥವಾ ಗಮ್ಯವನ್ನಾಗಲಿ ಒದಗಿಸಿದ್ದವಳೇ ಅಲ್ಲ. ಆವತ್ತಿನ ಮಟ್ಟಿಗೆ ಅದೇ ಜೀವನ ಎನ್ನುತ್ತಿದ್ದ ರಾಜಿ, ನನ್ನಂಥವರಿಂದ ಕೊಂಚ ಅಂತರ ಕಾಯ್ದುಕೊಳ್ಳುವ ಅಸಾಧಾರಣ ಬುದ್ಧಿವಂತೆಯರ ಸಾಲಿನವಳು. ಆದರೆ ನಮ್ಮಿಬ್ಬರಿಗಿದ್ದ ಸಮಾನ ಆಸಕ್ತಿಯಾದ ಕದ್ದು ತಂದು ತಿನ್ನುವುದರಿಂದ ಒಂಥರಾ ಗೆಳೆತನವಿತ್ತು. ಸ್ವತಃ ಅಂಗಡಿಯಿಂದ ನೇರ ಪೊಟ್ಟಣಗಳನ್ನೇ ಎತ್ತಿಕೊಂಡು ಬರುತ್ತಿದ್ದ ತಿಂಡಿಗಳಿಗೆ ಮೋಕ್ಷ ಕಾಣಿಸುವುದೂ, ಉಳಿದಿದ್ದನ್ನು ಸುರಕ್ಷಿತವಾಗಿ ಮತ್ತು ನ್ಯಾಯಯುತವಾಗಿ ಮರುದಿನಕ್ಕೆ ಕಾಯ್ದಿಡುತ್ತಿದ್ದುದರಿಂದ ನಾನು ರಾಜಿಗೆ ಅಗತ್ಯವಾಗುತ್ತಿದ್ದಾ. ಅದಕ್ಕಿಂತಲೂ ಚೆಂದದ ಸಂಗತಿ ಎಂದರೆ ಇದೆಲ್ಲ ಕಂಡೂ ಕಾಣದಂತೆ ಇರುತ್ತಿದ್ದುದು ಅವರವ್ವ. ತೀರ ಜೇಬುಗಟ್ಟಲೇ ತಿಂಡಿ ತುಂಬಿಕೊಂಡು ಓಡಾಡುತ್ತಿದ್ದರೆ ಮಾತ್ರ ‘ಹಂಗ ಕಿಸೆನ್ಯಾಗ ಹಾಕ್ಕೊಂಡು ಓಡ್ಯಾಡಬ್ಯಾಡ್ರಿ. ರಾತ್ರಿ ಇರಬಿ ಬರತಾವ..’ ಎಂದು ನಮ್ಮನ್ನು ಗದರುತ್ತಿದ್ದರು.‘ಇಲ್ಲ ಬಿಡಬೇ ರಾತ್ರಿ ಬ್ಯಾರೆ ಚೆಡ್ಡಿ ಹಾಕ್ಕೊತೇನಿ’ ಎಂದು ನಾನು ಅದಕ್ಕೊಂದು ಸಮಜಾಯಿಸಿ ಕೊಡುವ ಮೊದಲೇ ರಾಜಿ,‘ಇಲ್ಲ ಬಿಡವ್ವ ಹಂಗ ಮಲಗ್ತೇನಿ’ ಎನ್ನುತ್ತ ಕಿಸಕ್ಕೆನ್ನುತ್ತಿದ್ದಳು. ಅವ್ವ ದಬಾರನೆ ಬಾರಿಸುತ್ತಿದ್ದಳು ಬೆನ್ನಿಗೆ.
ಆಕೆಯ ಪೋನಿ ತರಹದ ಜುಟ್ಟು, ಯಾವ ಮುಲಾಜಿಗೂ ಸಿಕ್ಕದ ಬಿರುಸುತನ, ಮಾತಿಗೆ ಸರಕ್ಕನೆ ಎದಿರು ಮಾತಾಡುವ ಅಭ್ಯಾಸಗಳ ಮಧ್ಯೆಯೂ ನೋಡನೋಡುತ್ತಿದ್ದಂತೆ ಒಂದೊಂದೇ ಮೆಟ್ಟಿಲೇರಿದ ರಾಜಿ ನಾವು ಕಣ್ಬಿಡುವ ಹೊತ್ತಿಗೆ ರಾಜದೂತ್ ಬೈಕು ಓಡಿಸುತ್ತಿದ್ದಳು.‘ಕೈಗ ಹತ್ತೊ ಹುಡಿಗಿ ಅಲ್ಲ ಬಿಡ್ರಿ..ಯಾಕೋ ಸ್ವಲ್ಪ ಸುಮಾರ’ ಎನ್ನುವುದು ಸಹಜ ಮಾತಾಗಿತ್ತು ಆಕೆಯ ಮಟ್ಟಿಗೆ. ಆದರೆ ಆಕೆಗೆ ಇದ್ಯಾವುದೂ ತಾಗುತ್ತಿರಲಿಲ್ಲ. ಕ್ರಮೇಣ ನಮ್ಮ ಮಧ್ಯೆ ಸಂಪರ್ಕವೂ ಕಡಿದು ಹೋಗುವುದರೊಂದಿಗೆ ರಾಜಿ ಮರೆಯಾಗಿದ್ದು ಸಹಜವೂ ಆಗಿತ್ತು.ತುಂಬ ಚೆಂದಗೆ ಓದಿಕೊಂಡು ಅದಕ್ಕಿಂತ ಅರಪಾವು ಹೆಚ್ಚಿಗೇ ಗುಂಡಿಗೆಯಿದ್ದ ರಾಜಿಗೆ ನೌಕರಿ ಸುಲಭದ ತುತ್ತಾಗಿತ್ತು. ಆಕೆಯ ಎಲ್ಲ ಲೀಲೆಗಳಿಗೆ ಬೆನ್ನೆಲುಬಾಗಿದ್ದ ಅವಳಪ್ಪ ಇದ್ದಕ್ಕಿದ್ದಂತೆ ಎದೆನೋವಿಗೀಡಾಗಿ ತೀರಿ ಹೋಗಿದ್ದ. ರಾಜಿ ಅವ್ವನನ್ನೂ ಕರೆದೊಯ್ದು ಖುಷಿಯಾಗೊಂದು ಬದುಕು ಕಟ್ಟಿಕೊಳ್ಳುವಾಗಲೇ ಅವನು ಕಾಲಿಟ್ಟಿದ್ದ. ಅವಳಿಗಿಂತ ಎರಡು ವರ್ಷ ಚಿಕ್ಕವ. ಅವ್ವನಿಗೆ ಹುಷಾರು ತಪ್ಪಿ ದವಾಖಾನಿಗೆ ಓಡಾಡುವಾಗ ಪಕ್ಕದ ಬೆಡ್ಡಿಗೆ ಬಂದಿದ್ದವ. ರಾಜಿ ಇಲ್ಲದಾಗಲೆಲ್ಲ ರಾತ್ರಿ ಹಗಲೂ ಅವ್ವನನ್ನು ನೋಡಿಕೊಳ್ಳುತ್ತಲೂ ಇಬ್ಬರಿಗೂ ಹತ್ತಿರವಾಗಿದ್ದಾನೆ. ಅವಳಂತಹ ರೇಸು ಕುದುರೆಗೂ, ಒಪ್ಪ ಓರಣ ಇಲ್ಲದ ಬಸವನ ಹುಳು ನಾಗ್ರಾಜುವಿಗೂ ಅದೆಲ್ಲಿಂದ ಆಕರ್ಷಣೆ ಹುಟ್ಟಿಬಿಟ್ಟಿತ್ತೋ..? ಕೊಂಚ ಪಾಪದವನೂ, ತೀರ ಚೆಂದವಾಗೇನೂ ಓದದ ಹುಡುಗನಿಗೆ ರಾಜಿ ಅದ್ಯಾಕೋ ಒಲಿದಿದ್ದಳೊ ಇವತ್ತಿಗೂ ಗೊತ್ತಿಲ್ಲ.ಅದಾದ ವರ್ಷದೊಳಗೆ ಲಿವ್ ಇನ್ ರಿಲೇಷನ್ನಿನ ಹೆಸರು ಹುಟ್ಟಿರದ ಕಾಲದ ಅವನ ಹಳ್ಳಿಯಿಂದ ಮನೆಗೇ ತಂದಿಟ್ಟುಕೊಂಡು ಬಿಟ್ಟಿದ್ದಳು. ದೊಡ್ಡ ಸಾಹಸ ಅದು. ಇಳಿಸಂಜೆ ಹೊತ್ತಲ್ಲಿ ಕೂತು ಮ್ಯಾಥ್ಸ್, ಸೈನ್ಸು ಬಟ್ಟು ಮಡಚಿ ಕಲಿಸುತ್ತಿದ್ದರೆ ಅವಳವ್ವ ತೀರ ಇಷ್ಟಪಡದಿದ್ದರೂ ರಾಜಿಯ ಬದುಕು ಹಸನಾತು ಬಿಡು ಎಂದುಕೊಂಡಿದ್ದರು. ಆದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡ ನಾಗ್ರಾಜು ಎದ್ದು ನಿಂತಿದ್ದ. ವೇಗವಾಗಿ ಕಂಪ್ಯೂಟರಿಗೆ ತಗುಲಿಕೊಂಡು ಸರ್ವೀಸು ಸೆಕ್ಟರ್ ಹಿಡಿದುಕೊಂಡು ಬೆಳೆದ. ಈಗವನ ಓಡಾಟ ಬಿರುಸಾಗಿತ್ತು. ವರ್ಷಗಳು ಉರುಳುತ್ತಿದ್ದರೆ ರಾಜಿ ಗಂಭೀರವಾಗಿ ಮದುವೆ ಎನ್ನುವ ಶಾಸ ಮಾಡಿಕೊಂಡುಬಿಡುವ ಹಂಬಲದಲ್ಲಿದ್ದಳು.ಎಲ್ಲ ಸರಿಹೋಗಿ ಬದುಕಿನ ಬಣ್ಣಗಳು ಬೆರಗೊಡೆಯುತ್ತಿದ್ದಂತೆ, ಹತ್ತಿದ ಏಣಿ ಒದೆಯುವ ಪರಮ ದರಿದ್ರ ಅನುಭವ ರಾಜಿಗೂ ಆಯಿತು. ಬರಗೆಟ್ಟ ಬದುಕಿಗೆ ದಾರಿ ತೋರಿಸಿದವರನ್ನು ಸರಿಸಿ ನಡೆಯೊ ಒರಸೆತನಕ್ಕೆ ರಾಜಿ ಬಲಿಯಾಗಿದ್ದಳು. ಆಕೆಯಿಂದ ಪಡೆದ ಸಹಾಯ, ಲಕ್ಷಾಂತರ ದುಡ್ಡು, ಅಪೂಟು ಗಣಿತ ಟೀಚರಂತೆ ಆಕೆ ಕೂತು ಹೇಳಿದ ಸಂಜೆಯ ಕ್ಲಾಸುಗಳು, ತೀರ ಅವನ ಅಬ್ಬೇಪಾರಿ ಬದುಕನ್ನು ಸರಿ ಮಾಡಿದ್ದಾಲ್ಲವನ್ನೂ ಮರೆತು ಮನೆಗೆ ಬರುವುದನ್ನೇ ತಪ್ಪಿಸುತ್ತ ಬದುಕಿನ ಪಥ ಬದಲಿಸತೊಡಗಿದ್ದ. ಅಸಲಿಗೆ ರಾಜಿಯ ಬದುಕಿನ ಹರಿತ ಎಡೆಗಳೊಂದಿಗೆ ಸೇರಿ ಜಯಿಸುವ ಬದಲಿಗೆ ಕಣ್ಣು ತಪ್ಪಿಸತೊಡಗಿದ್ದ. ಮೊದಲೇ ಬದುಕಿಗೆ ಸಡ್ಡುಹೊಡೆದು ಸೋವಿಯಾದವಳಿಗೆ ಇಂಥವರ ದಗಲುಬಾಜಿತನ ಯಾವ ಲೆಕ್ಕ. ಮುಲಾಜೇ ಇಲ್ಲದೆ ಅವನಿಗಾಗಿ ಹಾಕಿದ್ದ ದುಡ್ಡು ವಸೂಲಿ ಮಾಡಿ ಹೊರಹಾಕಿದ್ದಳು. ಮುಖ ತೋರಿಸಲೂ ಆಗದ ಮಖೇಡಿಯಂತೆ ನಾಗ್ರಾಜ ಹೊರಟು ಹೋಗಿದ್ದ. ಕೆಲಸ, ಜವಾಬ್ದಾರಿ ಮತ್ತು ಬದುಕಿನುದ್ದಕ್ಕೂ ಬಿರುಸಾಗಿ ಬದುಕುತ್ತಿದ್ದವಳು, ಅದೇ ರಾವಿನೊಂದಿಗೆ ಎದ್ದು ನಿಂತು ಹಿಂದಿನಿಂದ ಮಾತಾಡುವವರಿಗೆ ‘ಈಗ ಹೆಂಗೆ..?’ ಎಂದಿದ್ದಳು.‘ಬರ್ತಾ ಹಂಗ ಬಂದಿಯಲ್ಲ. ತಿನ್ನಾಕ ಏನೂ ತಂದಿನು..?’ಎಂದಿನಂತೆ ರಾಜಿ ಕಾಲೆಳೆಯುತ್ತಿದ್ದರೆ ಒಯ್ದಿದ್ದ ಸ್ವೀಟು ಆಕೆಯೆದುರಿಗಿಡುತ್ತಾ ‘ಅವ್ವ ಎದಾಳು..? ನಿನ್ನ ಈ ಉಪರಾಟಿ ಬದುಕು ಅಕಿಗಂತೂ ಭೇಷಾಗಿರೋಲ್ಲ ಬಿಡು’ ಎಂದೆ. ಆಕೆ ನಗುತ್ತಾ ‘ಹೌದೊ ಮಾರಾಯ ನಮ್ಮವ್ವ ಅಂತಲ್ಲ. ಯಾರವ್ವ ಅದರೂ ಸುದೆಕ ಹಿಂಗನ.. ಅದರಾಗೇನದ. ಇನ್ನೇನರ ಭಾನಗಡಿ ಮಾಡ್ಕೊತಿನೇನೋ ಅಂತ ಒಂದಿಟು ಟೆನ್ಸ್ ಆಗಿದ್ಲು ಆವಾಗ. ನಿಂದೇನು ಕತೀ..?ಎಲ್ಲ್ಯದಿ..?’ ಎನ್ನುತ್ತಿದ್ದರೆ ‘ನಡೀ ಮನಿಗ ಹೋಗೋಣು’ ಎಂದು ದಬ್ಬಿಕೊಂಡು ಹೊರಟಿದ್ದಾ. ಕಾರು ಹರಿದಷ್ಟೂ ಹೊತ್ತೂ, ಬದುಕಿನ ಸೆಳಕುಗಳ ಬಗ್ಗೆ ಹೇಳುತ್ತ, ‘ಅಲ್ಲ ಸಂತೂ.. ಆ ನಾಗ್ರಾಜಂಗ ಅದೇನು ಬ್ಯಾನಿ ಆಗಿತ್ತ ನೋಡು. ಏನೂ ಇಲ್ದಿರೋ ದರವೇಶಿಗೆ, ಎಲ್ಲ ಮಾಡಿಕೊಟ್ಟು ಇಷ್ಟ ಚೆಂದದ ಹುಡುಗಿ ಪುಕ್ಕಟ ಇರ್ತೀನಂದರೂ ಬ್ಯಾಡ ಅಂತ ಹೋದನಲ್ಲ ಭಾಡ್ಯಾ.. ಮೈಯೆಲ್ಲ ಉರಿತದ ನೋಡ. ಗಂಡಸರಿಗೆ ಸುಖಾ ಪಡೋದೂ ಗೊತ್ತಿಲ್ಲ ಅನ್ನೋದಕ್ಕಿಂತ ದಕ್ಕಿಸಿಕೊಳ್ಳೊ ದಮ್ಮನೂ ಬೇಕ ನೋಡ’ ಎಂದು ಯಾವ ಸಂಕೋಚ ಮತ್ತು ಪಶ್ಚಾತಾಪ ಎರಡೂ ಇಲ್ಲದೆ ಆಡಿಕೊಳ್ಳುತ್ತ ರಾಜಿ ಹರಟುತ್ತಿದ್ದರೆ ಆಕೆಯ ಚೇತರಿಕೆಗೆ ಖುಷಿಯಾಗಿತ್ತು. ಮತ್ತಾವ ಸಂಕಟಕ್ಕೂ ಸಿಗದೆ ಮದುವೆ, ಮಕ್ಕಳು ಮಾಡಿಕೊಂಡು ಅವ್ವನೊಂದಿಗಿದ್ದಾಳೆ.‘ಅವ್ವಂದಿರಿಗೆ ಹೆಣ್ಮಕ್ಕಳ ಮದುವ್ಯಾಗಿ ಮಕ್ಕಳಾದವು, ಬದುಕು ಬೇಷಾತು ಅನ್ನೋದ ಬಿಟ್ಟರ ಬ್ಯಾರೆ ಬೇಕಿಲ್ಲ ಹೌದಿ’ಎನ್ನುತ್ತಿದ್ದರೆ, ನಾನು ನಗುತ್ತ ನುಡಿದಿದ್ದಾ ‘ರಾಜಿ ನೀ ಬದಲಾಗಿಲ್ಲ ಬಿಡ. ಪುಕ್ಕಟ ಅಂದರ ಯಾವತ್ತೂ ಸೋವಿನ. ನಿನ್ನಂಥಾಕಿ ಜೋಡಿ ಸಂಸಾರ ಮಾಡೋದು ಅವಂಗೆಲ್ಲಿ ಬರ್ಬೇಕು..?ಈಗ ಆರಾಮ ಅದಿ ಹೌದಿ..’ಎನ್ನುತ್ತಲೇ ಆಕೆಯ ಮನೆ ತಲುಪಿದ್ದಾವು. ಸರಿಸುಮಾರು ಎರಡು ದಶಕಗಳ ನಂತರದಲ್ಲಿ ಈಗ ಹೇಗಾಗಿದ್ದಾಳೊ ಎನ್ನುವ ಶಂಕೆ ಸುಳ್ಳು ಮಾಡುತ್ತಾ ಬಾಗಿಲು ತೆಗೆದವಳು ಅವ್ವ. ಯಾರು ಎಂಬ ಪ್ರಶ್ನಾರ್ಥಕ ಚಿನ್ಹೆಗೆ ನಾನೇ ಪರಿಚಯಿಸಿಕೊಂಡಿದ್ದಾ. ‘ಭೇಷಾತು. ಊರ ಕಡಿಂದ ಯಾರರ ಬಂದರ ಚಲೋ ಅನ್ನಸ್ತದ’ ಎನ್ನುತ್ತಿದ್ದಂತೆ ಕಿಂಯ್.. ಕಿಂಯ್.. ಎನ್ನುವ ಗಾಲಿಗಳ ಶಬ್ದಕ್ಕೆ ಅತ್ತ ತಿರುಗಿದೆ.ಗಾಲಿ ಕುರ್ಚಿ ಅದರ ಮೇಲೊಬ್ಬ ನಡುಹರೆಯದ ವ್ಯಕ್ತಿ. ಕಿವಿಗೆ ಇಯರ್ ಫೋನು.. ಕಾಲ ಮೇಲೆ ಲ್ಯಾಪ್‌ಟಾಪು. ಹಿಂದೆಯೇ ನಡೆದು ಬಂದ ಚೆಂದದ ಹೊಸ ಹರೆಯದ ಹುಡುಗಿ. ನನಗೆ ಬೇರೆ ವಿವರ ಬೇಕಾಗಲಿಲ್ಲ. ಚಹದ ಕಪ್ಪು ಹಿಡಿದು ಹೊರಬಂದ ರಾಜಿ ಅದೇ ಹುಡುಗಾಟದ ಧ್ವನಿಯಲ್ಲಿ, ‘ನಾಗ್ರಾಜಂದು ಮುಗದ ಕಥೀ. ಅದಾಗಿ ಎರ್ಡ್ಮೂರು ವರ್ಷ ನಾನು ಅವ್ವ ಅರಾಮ ಇದ್ವಿ. ಮದುವಿ ಮಕ್ಕಳು ಎಲ್ಲ ಯಾಕೋ ನನಗಲ್ಲ ಅನ್ನಿಸಿಬಿಟ್ಟಿತ್ತು. ಗಂಡ ಮಕ್ಕಳು ಇವೆಲ್ಲ ಇದ್ದರನ ಸಂಸಾರ ಅಂತಿಯೇನು..? ಅದನ್ನ ಬಿಟ್ಟೂ ಬದುಕಿನ ಸಂಕಟಕ್ಕ ಜೊತಿ ಆಗೋ ಸುಖಾನ ಬ್ಯಾರೆ ಮಾರಾಯ. ಮೂರ್ತಿನ್ನ ಮದುವಿ ಆಗ್ತೇನಿ ಅಂದಾಗ ತಲಿಗೊಂದ ಮಾತಾಡಿದ್ರು. ಕೈ, ಕಾಲು ಬರೋಬರ್ ಇಲ್ಲದಿದ್ರೂ ಮನಸ್ಸು ಪಸಂದಾಗಿರೋ ಮೂರ್ತಿ ಯಾಕೋ ಭಾಳ ಹಿಡಿಸಿದ್ರು. ಏ ಕುಂತು ಎನ್‌ಜಿಒದ ಕೆಲ್ಸ ಮಾಡಿ ತನಗ.. ಏಳಾಕ ಬರದಿದ್ರೂ ಬ್ಯಾರೇದಾವ್ರ ಬದುಕು ಕಟ್ಟೋದು ನೋಡ್ತಾ ನನ್ನ ಜೊತಿನ ಬರ್ರಿ ಅಂದೆ. ಬರೀ ಮಾರಿ ನೋಡಿ ಏನು ಮಾಡೋದದ. ಅರ್ಧ ಬದುಕು ಕಳಕೊಂಡಿದ್ದ ಮೂರ್ತಿ, ಅವ್ರ ಮಗಳು ಪುಟ್ಟಿ ಖರೆನ ಚೆಂದ ಅದಾರ ನೋಡು. ಇದೆಲ್ಲ ನೋಡಿ ರಾಜಿ ಮತ್ತ ಲಫಡಾ ಮಾಡ್ಕೊಂಡ್ಲು ಅಂತಿಯೇನು..?’ ಚೆಂದದ ಗೇಲಿಯೊಂದಿಗೆ ಪಕ್ಕೆಗೆ ಗುದ್ದುತ್ತ ನುಡಿಯುತ್ತಿದ್ದರೆ, ಮಾರುತ್ತರಕ್ಕೇನೂ ಇರಲಿಲ್ಲ.ಅವಕಾಶ, ಸಹಾಯ, ಸಾಂಗತ್ಯ ಎಲ್ಲ ಪಡೆದೂ ಕೈಯೆತ್ತಿ ಹೋಗುವವರ ಮಧ್ಯೆ ಎಲ್ಲವನ್ನೂ ಪೂರೈಸಿಯೂ, ಇನ್ನೊಬ್ಬರಿಗೆ ಜೀವನ ಕೊಟ್ಟು ಚೆಂದಗೆ ಬದುಕುತ್ತಿರುವ ರಾಜಿ ಖುಷಿಗೂ ಹನಿಗಳುದುರುವುದಕ್ಕೆ ಸಾಕ್ಷಿಯಾಗಿದ್ದಳು. ಎದುರಿಗಿನದ್ದೇನೂ ಕಾಣಿಸುತ್ತಿರಲಿಲ್ಲ. ಅಸಲಿಗೆ ಎತ್ತರ ಕಾಣಿಸದಷ್ಟು ಆಕೆ ಯಾವಾಗಲೋ ಬೆಳೆದಾಗಿತ್ತು.ಕಾರಣ ಅವಳು ಎಂದರೆ...(ಲೇಖಕರು ಕಥೆ-ಕಾದಂಬರಿಕಾರರು)