Monday, November 30, 2015

ಸೌಜನ್ಯರಹಿತ ರ೦ಗಿನ ಬದುಕು...


ಹಾಯ ಸಾವಿರಾರು ಜನಕ್ಕೆ ಬೇಕಿದೆ. ಆದರೆ ಕೈಚಾಚಲು ಸಿದ್ಧರಿರುವವರು ಕೆಲವರು ಮಾತ್ರ. ಅದರಲ್ಲೂ ಕೆಲಸ ಇಲ್ಲದ ಗ೦ಭೀರ ಸನ್ನಿವೇಶದಲ್ಲಿ ಜೊತೆಗೆ ನಿ೦ತು ಕಾಯ್ದವರನ್ನು ಉಡಾಫೆಯಿ೦ದ ಮರೆತು ಬಿಡುವವರ ಕೃತಘ್ನತೆಯಿ೦ದ, ಭವಿಷ್ಯದಲ್ಲಿ ಅಗತ್ಯವಿದ್ದವರಿಗೆ ಸಹಾಯ ಲಭ್ಯವಾಗದೆ ಸ೦ಕಟಕ್ಕೀ ಡಾಗುತ್ತಾರಲ್ಲ. ಆ ಪಾಪವೂ, ನಿಟ್ಟುಸಿರೂ ಇವರನ್ನು ತಟ್ಟದಿರುತ್ತದೆಯೇ..?
"ನೀನು ಒ೦ದು ಮಾತು ಹೇಳಿದರೆ ಕೆಲಸ ಆಗುತ್ತೆ..? ಆದರೆ ಮುಜುಗರವಾಗಿ ಸುಮ್ಮನಾಗಿದ್ದೆ. ಮಗೂಗೆ ಸ್ಕೂಲು ಶುರುವಾಗಿ ಎರಡ್ಮೂರು ದಿನ ಆಗಿದೆ. ಬೇರೆ ಮಕ್ಕಳನ್ನು ನೋಡಿ ದಿನಾ ಗಲಾಟೆ ಮಾಡ್ತಿದಾನೆ. ಸ್ಕೂಲಿಗೆ ಹೋಗ್ಬೇಕು ಅ೦ತಾ.. ನನ್ನ ಪ್ರಾಬ್ಲ೦ ಸಾಲ್ವ ಅಗ್ತಿಲ್ಲ..' ಎ೦ದಾಕೆ ಪ್ರವರ ಹೇಳಿಕೊಳ್ಳುತ್ತಿದ್ದರೆ, ನಾನು 
     "ಮಕ್ಕಳು ಮತ್ತು ಶಾಲೆಯ ವಿಷಯದಲ್ಲಿ ಏನಾದರೂ ಮಾಡೋಣ. ನೀನು ಕೆಲಸ ಹುಡುಕಿಕೋ' ಎನ್ನುತ್ತ ಆಪತ್ಕಾಲದ ಸ್ನೇಹಿತರ ಮೂಲಕ ಮಗುವಿನ ಶಾಲಾ ಫೀಸು ಕಟ್ಟಿಸಿ, ಹುಡುಗಿ ತೀರಾ ಪೆ ಟ್ರೋಲ್‍ಗೂ ಪರದಾಡುತ್ತಿದ್ದುದರಿ೦ದ ಮೊಬ್ಯೆಲ್ ಕರೆನ್ಸಿ ಹಾಕಿಸಿ, ಮಿಸ್ ಕಾಲ್ ಮಾತ್ರ ಕೊಡುವ೦ತೆ ಹೇಳಿ ಎದ್ದು ಬ೦ದಿದ್ದೆ. 
   ನಾನು ಜಾಲಹಳ್ಳಿಯಿ೦ದ ಸೈಕಲ್ಲು ಹೊಡೆಯುತ್ತಿದ್ದಾಗ ಗೌಡರ ಮನೆಯಲ್ಲಿ ತು೦ಡು ಲ೦ಗ ಹಾರಿಸಿಕೊ೦ಡು ಓಡಾಡುತ್ತಿದ್ದ ಹುಡುಗಿ ಸೌಭಾಗ್ಯ. ಅದು ಎಲ್ಲರ ಬಾಯಲ್ಲಿ ಭಾಗಿ ಎ೦ದಾಗಿತ್ತು. ಓದುವುದಕ್ಕಿ೦ತ ರಸ್ತೆಯ ಮೇಲೆ ಜಾಸ್ತೀ ಇರುತ್ತಿದ್ದಳು. ನಮ್ಮ ನಡು ಮಧ್ಯಾಹ್ನದ, ಬೆಳಗುಗಳಿಗೆ ಆಡಿಕೊಳ್ಳುತ್ತ "ಅದೇನು ರಾತ್ರಿಯಿಡಿ ಕೆಲ್ಸಾ ಮಾಡ್ತೀರೊ. ಹಗಲೆಲ್ಲ ಮಲ್ಗಿರೋ ನಿಮ್ಮನ್ನು ನ೦ಬಿಕೊ೦ಡು ಕ೦ಪನಿ ಉದಾಟ್ಧರ ಆದ೦ಗೆ' ಎ೦ದು ಒ೦ದೇ ಡೈಲಾಗಿನಲ್ಲಿ ನಿವಾಳಿಸುತ್ತಿದ್ದಳು. 
    "ಅಯ್ಯೋ.. ಅವ್ರಿಗ್ಯಾಕೆ ತ್ರಾಸು ಕೊಡ್ತಿ ಪಾಪ ಹುಡುಗರು ನೈಟ್‍ಶಿಫ್ಟಲಿ ಇತಾ೯ರೆ. ಬೆಲ್ ಮಾಡಿ ಎಬ್ಬಿಸಬೇಡ' ಎ೦ದವರಮ್ಮ ಜೋರು ಮಾಡ್ತಿದ್ದರೆ, "ಅಮ್ಮ ಇವೆ್ರಲ್ಲ ಸ೦ಜೆ ಹೊತ್ತಿಗೇ ಬಿಯರು ಕುಡಿದು ಕೆಲ್ಸಕ್ಕೆ ಹೋಗ್ತಾರೆ' ಎ೦ದು ನಮ್ಮನ್ನೆಲ್ಲ ಸರಾಗವಾಗಿ ಹರಾಜಿಗಿಡುತ್ತಿದ್ದಳು. ಹುಡುಗಿಯ ಡಿಗ್ರಿಗೂ ಮೊದಲೇ ಅಪಾರ ಸ೦ಪತ್ತಿನ ಮನೆತನ ಸಿಕ್ಕು ಮದುವೆ ಮಾಡಿದ್ದಾರೆ. ಅದರಾಚೆಗೆ ನಾವೂ ನಮ್ಮದೇ ಬದುಕಿನ ತಿರುಗುಣಿಗೆ ಸಿಕ್ಕು ಎಲ್ಲೆಲ್ಲೋ ತಲುಪಿಕೊಳ್ಳುತ್ತಿದ್ದ೦ತೆ ಮನಸ್ಸಿನಿ೦ದಲೂ, ನಮ್ಮ ಇತಿಹಾಸದ ಪುಟಕ್ಕೂ ಸೇರಿಹೋಗಿದ್ದಳು ಸೌಭಾಗ್ಯ.
   ದಶಕಗಳ ತರುವಾಯ ಸ೦ಪಕ೯ಕ್ಕೆ ಬ೦ದಾಗ,"ಎಲ್ಲ ಬಿಟ್ಟು ಮನೆಯಲ್ಲಿದ್ದೇನೆ' ಎನ್ನಬೇಕೆ..? ಚಿಕ್ಕದಾದ ಒ೦ದು ರೂಮಿನ ಮನೆಯನ್ನು ಬಾಡಿಗೆಗೆರಿಸಿಕೊ೦ಡು, ಮನೆಯ ತು೦ಬ ಪುಸ್ತಕ ಹರಡಿಕೊ೦ಡ ಭಾಗಿ, ಸೊಫಾ ದ ಮೇಲೆ ಕಲೆಗಟ್ಟಿದ್ದ ಊಟದ ತಟ್ಟೆ, ಪಕ್ಕದ ಚಿಕ್ಕ ಟೇಬಲ್ಲಿನ ಮೇಲೆ ಯಾವಾಗಿನದ್ದೋ ಕಾಫಿ ಲೋಟ, ಕೈಯೊರೆಸಿ ಅಲ್ಲಿಯೇ ಬಿಟ್ಟು ಕಪ್ಪಗಾಗಿದ್ದ ಟವಲ್ಲು, ರೂಮಿನಾಚೆಗೆ ಕಾಣಿಸುತ್ತಿದ್ದ ಕೆದರಿದ್ದ ಬೆಡ್‍ಶೀಟು.. ಬದುಕು ಆಸ್ಥೆ ಕಳೆದುಕೊ೦ಡ ಅವಸ್ಥೆ ಎದ್ದು ಕಾಣುತ್ತಿತ್ತು. ಆಗಿದ್ದಿಷ್ಟು..
    ಓದು, ಸಾಹಿತ್ಯ ಇತ್ಯಾದಿ ಆಸಕ್ತಿಯ ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೂ ಅ೦ತಹದ್ದೇ ವಾತಾವರಣ ಸಿಗುವುದು ಕಡಿಮೆಯೇ. ಅದರಲ್ಲೂ ಓದಿಕೊ೦ಡ ಜ್ಞಾನದ, ತನಗೆಲ್ಲವೂ ಗೊತ್ತೆನ್ನುವ ಠೋ೦ಕಾರದ ಎದುರಿಗೆ ಸ೦ಸಾರಗಳು ಬರಕತ್ತಾಗಿದ್ದು ಕಡಿಮೆ. ಕಾರಣ ದಾ೦ಪತ್ಯ ಎನ್ನುವುದು ಅಪಾರ ತಾಳೆ್ಮಯನ್ನೂ, ಅಹ೦ನ್ನು ಅಪೂಟು ಬದಿಗಿಟ್ಟು ಬದುಕುವ ಸ್ಥಿಮಿತತೆಯನ್ನೂ ಬೇಡುತ್ತದೆ. ಫೆಮಿನಿಸ೦ನ ಅವತಾರಗಳೇನೇ ಇದ್ದರೂ, ಅದನ್ನೇ ಮನೆಯೊಳಗೂ ಅಪೆ್ಲ„ ಮಾಡ್ತೀನಿ ಎನ್ನುವ ಎಡಬಿಡ೦ಗಿತನಕ್ಕೆ ನಿ೦ತರೆ ಸ೦ಸಾರದ ಹಡಗು ಎಕ್ಕುಟ್ಟು ಹೋಗುವುದರಲ್ಲಿ ಸ೦ಶಯವೇ ಇಲ್ಲ. ಸಿOಉೀವಾದದ ಭಾಷಣಗಳೇನಿದ್ದರೂ ವೇದಿಕೆಗೂ, ಭರಪೂರು ಚಪ್ಪಾಳೆಗೂ ಬಾಕಿಯಿರಿಸಿಕೊ೦ಡು, ಮನೆಯಲ್ಲಿ ಚೆ೦ದವಾಗಿ ಸ೦ಸಾರ ನಡೆಸುವ ಸೋಕಾಲ್ಡ್ ಫೆಮಿನಿಸ್ಟು ಸ್ನೇಹಿತೆಯರು ನನಗಿದ್ದಾರೆ. ಕ್ಷಣಾಧ೯ದಲ್ಲಿ ಕಳೆದು ಹೋಗುವ ಬದುಕಿನಲ್ಲಿ ಇಸ೦ಗಳು ಯಾವತ್ತೂ ಸೌ೦ದಯ೯ವನ್ನು ಹೆಚ್ಚಿಸಿದ್ದು ನಾನು ಕ೦ಡಿಲ್ಲ. ಬದುಕಿನಲ್ಲಿ ಏನೇ ಆಗಿದ್ದರೂ ಬಾಯಿಗೆ ಬ೦ದ೦ತೆ ಪುರುಷರನ್ನೂ, ತಮ್ಮ ಮನಸ್ಸಿನ ಕಹಿಯನ್ನೂ ಕಾರಲು ಫೆೀಸ್‍ಬುಕ್‍ನಲ್ಲಿ ಪುಟಗಟ್ಟಲೇ ಬರೆಯುವ ಮಹಾಫೆೀಮಿನಿಸ್ಟರೂ ಇವತ್ತು ಮನೆಯಲ್ಲಿರುವ ರೀತಿಯೇ ಬೇರೆ. ಅವರ ಹೇಳಿಕೆಗಳನ್ನು ನ೦ಬಿ ಇತ್ತ ಬಡಿದಾಡಿಕೊಳ್ಳುವ ಹಿ೦ಬಾಲಕರು ಬಕರಾಗಳಾಗುತ್ತಿದ್ದಾರೆ. 
    ಇ೦ಥದ್ದೇ ಮನಸ್ಥಿತಿಯ ಭಾಗಿ ಮದುವೆ ವ್ಯವಸ್ಥೆಯಲ್ಲಿ ಬರಕತ್ತಾಗದೆ, ಕೌಟು೦ಬಿಕ ದೌಜ೯ನ್ಯ ಎ೦ದು ಮನೆಗೆ ಹಿ೦ದಿರುಗಿದ್ದಾಳೆ. ದುಡಿತದ ಹಣ ಮತ್ತು ಭೂಮಿಯ ಬೆಲೆ ಗಗನಕ್ಕೇರಿದ್ದರಿ೦ದ ಕೋಟಿಗಳಲ್ಲಿ ತೂಗುತ್ತಿದ್ದ ಕುಟು೦ಬ ಅದು. ಅವರೂ ಹೆಚ್ಚು ಸೊಪ್ಪು ಹಾಕಿಲ್ಲ. ಅವಕಾಶ ಸಿಗುತ್ತಿದ್ದ೦ತೆ ಈಕೆ ಅಪ್ಪನ ಮನೆ ಸೇರಿದ್ದಾಳೆ. ಅಷೆ್ಟೂತ್ತಿಗೆ ಹುಡುಗಿ ಕೈಗೊ೦ದು ಚಿಕ್ಕ ಮಗುವಿತ್ತು. 
   ಬ೦ದವಳೇ ತನಗೊ೦ದು ಚಿಕ್ಕ ನೌಕರಿ ಹುಡುಕಿಕೊ೦ಡಿದ್ದಾಳೆ. ಸಾಗರದ೦ತೆ ಬೆಳೆದು ನಿಲ್ಲುತ್ತಿರುವ ಕನ್ನಡದ ಟಿ.ವಿ. ಚಾನಲ್ ಗಳ ಲೋಕದಲ್ಲಿ ಕಳೆದು ಹೋಗುತ್ತಿದ್ದಾಗ, ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದಾಳೆ. ಅಲ್ಲೂ ಯಾಕೋ ಕೆಲಸ ಕೈಗೆ ಹತ್ತಿಲ್ಲ. ಸೌಜನ್ಯತೆ ಇಲ್ಲದ ಪ್ರವೃತ್ತಿಯಿ೦ದಾಗಿ ಹುಡುಗಿ ಕಾಲಿಟ್ಟಲೆಲ್ಲ ಇ೦ಥದ್ದೇ ಏನಾದರೂ ಕಿರಿಕ್ ಮಾಡಿಕೊ೦ಡು, ಎಲ್ಲೂ ಬರಕತ್ತಾಗದೆ ಕೆಲಸವಿಲ್ಲದೆ ಮನೆಯಲ್ಲಿ ಕೂತಿದ್ದಾಳೆ.
    "ನನಗೆ ಕೆಲ್ಸ ಮಾಡಿಕೊ೦ಡು ಹೋಗೋಕೇನೂ ಬೇಜಾರಿಲ್ಲ. ಒ೦ದಷ್ಟು ತಡ ಆದರೂ ಸರಿಯಾಗಿ ಕೆಲಸ ಹುಡುಕಿಕೊ೦ಡು ಸೆಟ್ಲ್ ಆಗೆಕು. ಇದ್ದುದರಲ್ಲಿ ಪತ್ರಿಕೆಗಳೇ ವಾಸಿ. ಇನೆ್ಮೀಲೆ ಟಿ.ವಿ.ಗಳ ಕಡೆ ಹೋಗಲ್ಲ' ಎ೦ದು ಕಥೆ ಹೇಳಿಕೊ೦ಡಿದ್ದಳು. ಆಯಿತು ಹಳೆಯ ಪರಿಚಯದ ಸ್ನೇಹಿತೆ ಬೇರೆ. "ಯಾರಿಗಾದರೂ ಹೇಳೋಣ ಬಿಡು. ಅವಕಾಶಕ್ಕೇನೂ ಬರ ಇಲ್ಲ' ಎನ್ನುತ್ತ ಮೊದಲು ಮಗು ಶಾಲೆಗೆ ಸೇರಿಸಲು ಅಗತ್ಯದ ಸಹಾಯಕ್ಕೆ ಯೋಜಿಸಿದ್ದೆ. ಅವಳಮ್ಮ ಕೂಡ "ಏನಾದರೂ ಮಾಡು ಮಾರಾಯಾ' ಎನ್ನುತ್ತಿದ್ದರೆ, ಪರಿಚಯದ ವಕೀಲೆಗೆ ಕರೆ ಮಾಡಿ ವಿಚ್ಚೇದನಕ್ಕೆ ಕಾನೂನು ಸಹಾಯ ಮಾಡುವ೦ತೆ ಸೂಚಿಸಿದ್ದೆ. ಎರಡು ದಶಕಗಳ ಪತ್ರಿಕೆಗಳೊ೦ದಿಗಿನ ಒಡನಾಟದಲ್ಲಿ ಸ೦ಪಕ೯ಕ್ಕೆ ಬ೦ದ ಸ್ನೇಹಿತರೊಬ್ಬರಿಗೆ ಸೂಕ್ಷ$್ಮವಾಗಿ ವಿಷಯ ವಿವರಿಸಿ, "ಏನೋ ಒ೦ದು ಕೆಲಸ ಕೊಡಿಪ್ಪಾ.. ಬದುಕೋಕೆ' ಎ೦ದಿದ್ದೆ. ಇದಾಗಿ ನಾಲ್ಕಾರು ತಿ೦ಗಳೂ ಕಳೆದು ಹೋಯಿತು. ಅವತ್ಯಾಕೋ ಮಾತಿಗೆ ಸಿಕ್ಕಿದ ಸ್ನೇಹಿತರು
     "ನೀವು ಹೇಳಿದ ಕೆಲಸ ಆಗಿದೆ. ಲಿಗಲ್ ವಿಷ್ಯ ಎಲ್ಲ ಬಗೆಹರಿಸ್ಕೊಳ್ಳೋಕೆ ಹೇಳಿ' ಎನ್ನುತ್ತಿದ್ದರೆ ನನಗೆ ಆಶ್ಚಯ೯ವಾಯಿತು."ಯಾರು..?' ಎ೦ದೆ. "ಅದೇ ಆವತ್ತು ನೀವು ಕತೆ ಹೇಳಿದಿರಲ್ಲ. ನಿಮೆ್ಗ ಗೊತ್ತಿಲ್ವಾ' ಎ೦ದರು. ಕಸಿವಿಸಿಯಾದರೂ "ಒಹ… ಅದಾ..'ಎ೦ದು ಎನೋ ಹೇಳಿ ಹಲ್ಕಿರಿದೆ. ಹೀಗೂ ಇರಬಹುದಾ..? ಒ೦ದು ಮಾತಾದರೂ ಹೇಳಬಹುದಿತ್ತಲ್ಲ ಎನ್ನುತ್ತ ರಿ೦ಗಿಸಿದೆ ಎತ್ತಲಿಲ್ಲ. ಮೇಸೇಜು ಮಾಡಿದರೂ ಉತ್ತರವಿಲ್ಲ. ಮಾತಿಗೆ ಆಸ್ಪದವೇ ಇಲ್ಲದ೦ತೆಯೂ, ನಿ೦ದೇನು ಮಹಾ ಎನ್ನುವ೦ತೆಯೂ ಸಾಮಾಜಿಕ ಜಾಲತಾಣದಲ್ಲಿ ಬಣ್ಣಬಣ್ಣದ ಚಿತ್ರಗಳ ಸರಣಿ ಹಾರಾಡುತ್ತಿದೆ. ಇ೦ಥಾ ಅನುಭವ ನನಗೆ ಹೊಸದೇನೂ ಅಲ್ಲ. ಬದುಕೇ ಬರಗೆಟ್ಟು, ನಾಳೆ ಮುಗಿದೇ ಹೋಗುತ್ತೇನೇನೋ ಎನ್ನುವ೦ತೆ ಕಥೆ ಹೇಳಿಕೊ೦ಡು ಸಹಾಯ ಪಡೆದು, ಕೊನೆಗೆ ಕನಿಷ್ಠ ಒ೦ದು ಮಾತು ಹೇಳದೆ ಎದ್ದು ಹೋದ "ವನಜ'ಳ೦ತವರು ಹಲವು ದಿಶೆಯಲ್ಲಿ ಬದುಕಿನ ನಶೆ ಹುಡುಕಿಕೊಳ್ಳುವರನ್ನು ಮರೆತು ಸಾಗುತ್ತೇನೆ. ಅದಕ್ಯಾವತ್ತೂ ತಲೆ ಕೆಡಿಸಿಕೊ೦ಡಿಲ್ಲ. ಸಹಾಯ ಮಾಡಿದ ತೃಪ್ತಿ ಮತ್ತು ಸ್ವಚ್ಛ ಮನಸ್ಸಿಗೆ ದೇವರೂ ಬೆನ್ನಿಗೆ ನಿಲುತ್ತಾನ೦ತೆ. ಅವರವರ ಕಮ೯ ಅವರದ್ದು ಎ೦ದು ಪ್ರತಿ ಬಾರಿಯೂ ಸುಮ್ಮನಾಗಿದ್ದೇನೆ.
    ಇವತ್ತು ತಿ೦ಗಳಿಗೆ ಕನಿಷ್ಠ ಇಪ್ಪತ್ತು ಸಾವಿರ ಇಲ್ಲದೆ ಬೆ೦ಗಳೂರಿನಲ್ಲಿ ಬದುಕು ಸಾಧ್ಯವೇ ಇಲ್ಲ. ಹೀಗಿದ್ದಾಗ ಪಗಾರು, ಜನ ಬೆ೦ಬಲ, ತಿ೦ಗಳಿಗೊಮ್ಮೆ ಸ೦ಬಳ ಕೊಡುವ ಕೆಲಸ ಇವ್ಯಾವುದೂ ಇಲ್ಲದೆ ಮೇಲಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗೂ ಇರುತ್ತ, ಮಗು, ಕಾರು, ಒ೦ದು ಪೆ್ಲೀಶರು ನಿವ೯ಹಿಸುತ್ತಲೇ ಪುಕ್ಕಟ್ಟೆ ಪ್ರಚಾರಕ್ಕೂ ಈಡಾಗುತ್ತ ವಷಾ೯ನುಗಟ್ಟಲೇ ಹೇಗೆ ಜೀವನ ಮಾಡುತ್ತಾರೆನ್ನುವುದು ಮಾತ್ರ ನನಗಿವತ್ತೂ ಅರಿವಾಗಿಲ್ಲ. ಏನೆ೦ದರೂ ಅವರಮ್ಮ ಆಗೀಗ ಕರೆದು ಊಟ ಇಟ್ಟವರು. ಅವತ್ಯಾಕೋ ನೆನಪಾಗಿ ಅವರಮ್ಮನಿಗೆ ಹಿ೦ಗೆಗೆ ಆಯ್ತು.. ಎನ್ನುತ್ತಿದ್ದರೆ ಆಕೆ ತಲೆ ತಗ್ಗಿಸಿದರು. ಅಸಲಿಗೆ ಹುಡುಗಿ ಮನೆ ಬಿಡುವಾಗ ಸಾಕಷ್ಟು ಗ೦ಟು ಗದಡಿ ಮಾಡಿಕೊ೦ಡಿದ್ದಳಾ..? ಅವರೂ ಯಾಕೋ ಏನೋ ಮುಚ್ಚಿಡುತ್ತಿದ್ದಾರೆ ಎನ್ನಿಸಿತು.
    ಆದರೆ ಮಗೂನ ಸ್ಕೂಲಿಗೆ ಸೇರಿಸುವಾಗ, ಒ೦ದು ನೌಕರಿಗೆ ತೀರಾ ಗೋಗರೆದು ಬೇಡುವಾಗ, ಮನೆಯಲ್ಲಿ ನಾಳೆಗೆ ಏನು ಮಾಡಲಿ ಎ೦ದು ಆಕೆ ಕೈಚಾಚಿ ನಿ೦ತಿದ್ದಾಗ, ಹೊರಗೆ ಒ೦ದು ಊಟ ಹೋದರೆ ಅಷ್ಟೆ ಬೆಟ್ರು.. ಎ೦ದು ಸ್ನೇಹಿತರ ಜೊತೆ ಅಲೆದು ಅಲ್ಲೇ ಊಟ ಮುಗಿಸುವ ಪರಿಸ್ಥಿತಿಯಿದ್ದಾಗ, ಮೊಬ್ಯೆಲ್‍ಗೆ ಕರೆನ್ಸಿ, ಪೆ ಟ್ರೋಲ್ ಎಷ್ಟಾಗುತ್ತೆ೦ದು ಲೆಕ್ಕಿಸಿ ಬದುಕು ನಡೆಸುವಾಗ, ದಿನಕ್ಕೊಮ್ಮೆ ಕರೆ ಮಾಡಿ ಸಹಾಯಕ್ಕೆ ನಿ೦ತಿದ್ದ ಸ್ನೇಹಿತರು ಮತ್ತು ನಾನು ಎಲ್ಲ ಈಗ ಮರೆತು ಹೋಗಿದ್ದೆವು. ತೀರಾ ಬದುಕು ಚುರುಕುಗೊಳ್ಳುವಾಗ ಯಾವ ಹ೦ತದಲ್ಲೂ ನಾವು ನೆನಪಾಗಿರಲಿಲ್ಲ. ಬದುಕು ಇಷ್ಟು ಕಠೋರವಾ..? ನನಗೆ ಇ೦ಥ ಕೃತಘ್ನತೆ ಹೊಸತೇನಲ್ಲ. ಅದರೆ ಯಾರಾದರೂ ಅಳುತ್ತ ಸಹಾಯ ಬೇಕು ಎನ್ನುತ್ತಿದ್ದರೆ ಇವನ್ನೆಲ್ಲ ಮರೆತು ಕೈಚಾಚುವ ಹು೦ಬತನ, ದೌಬ೯ಲ್ಯದಿ೦ದ ನಾನಿನ್ನು ಈಚೆ ಬ೦ದಿಲ್ಲ. ಅಳುಮುಖದ ಹಿ೦ದಿನ ಅಸಲಿಯತ್ತು ಗುರುತಿಸುವುದನ್ನು ಕಲಿಯಬೇಕಿದೆ. 
    ಆದರೆ, ನಿಜಕ್ಕೂ ಸಹಾಯ ಬೇಕಿದ್ದವರ ಅವಕಾಶವನ್ನು ಭಾಗಿಯ೦ತವರು ಹಾಳು ಮಾಡುಬಿಡುತ್ತಾರಲ್ಲ ಆಗ ಆಗುವ ಹಾನಿಗೆ ಯಾರು ಹೊಣೆ..? ಉತ್ತರಿಸಬೇಕಾದ ಭಾಗಿ ಇರಲಿಲ್ಲ. ನನ್ನ ಬದುಕು ಚುರುಕುಗೊಳ್ಳುತ್ತಿದೆ ಎ೦ದು ಜಾಲತಾಣದಲ್ಲಿ ಹೊಸವರಸೆಯಲ್ಲಿದ್ದಾಳೆ. ಇತ್ತ ನೋಡಿದರೆ ಅಮ್ಮ ತಗ್ಗಿಸಿದ ತಲೆ ಮೇಲೆತ್ತುತ್ತಿಲ್ಲ. ಕೆದಕಿದರೂ ಈಗ ಪ್ರಯೋಜನವಿಲ್ಲ. ಅಮ್ಮ ಯಾವತ್ತೂ ಮಗಳು ಕೆಟ್ಟಿದ್ದಾಳೆ ಎನ್ನುವುದಿಲ್ಲ. ಕಾರಣ ಅವಳು ಎ೦ದರೆ..

Sunday, November 22, 2015

ಅವಳಿಲ್ಲದೆ ಬದುಕು ಭೂಮಿ ಎರಡೂ ಇಲ್ಲ 

ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಬಂದಾಗ, ತಾಕತ್ತನ್ನೆಲ್ಲ ಸೇರಿಸಿಕೊಂಡು ಎದ್ದು ನಿಲ್ಲುವವಳೇ ಅವಳು. ಆ ಧಿಶಕ್ತಿಗೆ ಇದಿರಿಲ್ಲ. ಎಲ್ಲ ಇದ್ದವರು ಇವತ್ತು ಬದುಕು ಗೆಲ್ಲುವುದು ದೊಡ್ಡದಲ್ಲ. ಆದರೆ ಏನೂ ಇಲ್ಲದ ಸ್ಥಿತಿಯಲ್ಲಿ ಕಾಲೂರಿ ನಿಲ್ಲುವುದಿದೆಯಲ್ಲ ಅದನ್ನು ಅಮ್ಮ... ಮಾತ್ರ ಮಾಡಬಲ್ಲಳು.

ಶ್ರೀಕುಮಾರ್ ಎನ್ನುವ ದೇವರೂಪಿ ಮಲೆಯಾಳಿ ಡಾಕ್ಟ್ರು ಆ ಮಗುವಿನ ಮುಗ್ಧತೆಗೂ ಅದರ ತುಂಟತನಕ್ಕೂ ಯಾವ ಪ್ರಶ್ನೆಯನ್ನೂ ಕೇಳದೆ ಅರ್ಧ ಖರ್ಚನ್ನು ಮಾಫಿ ಮಾಡಿಸಿದ್ದರು. ಇನ್ನರ್ಧದ ವ್ಯವಸ್ಥೆ ಮಾಡಿಕೊಂಡು ಬನ್ನಿ ಎಂದಿದ್ದರು. ಬರುವ ಗುರುವಾರಕ್ಕೆ ದಿನಾಂಕ ನಿಗದಿಯಾಗಿದ್ದನ್ನು ಯಾವ ಕಾರಣಕ್ಕೂ ಮುಂದಕ್ಕೆ ಹಾಕುವಂತಿರಲಿಲ್ಲ. ಪ್ರತಿ ನಿಮಿಷವೂ ಮಗು ಕೈಯಿಂದ ಜಾರುತ್ತಲೇ ಇತ್ತು. ಕಾರಣ ವೈದ್ಯರು ನೇರವಾಗಿ ಮಗು ಆಗಲೇ ಎರಡನೇ ಹಂತ ದಾಟುವ ಸ್ಥಿತಿಯಲ್ಲಿದೆ ಎನ್ನದಿದ್ದರೂ, ಅವರ ಮಾತಿನ ಧಾಟಿಯಲ್ಲೇ ಯಾವುದೋ ಅನಾಹುತದ ಮುನ್ನೆಚ್ಚರಿಕೆ ಉಷಾಳಿಗೆ ಸಿಕ್ಕಿಹೋಗಿತ್ತು. ಆಕೆಯ ಎದುರಿಗೆ ಕೇವಲ ಬದುಕು ಮತ್ತು ಮಗು ಎರಡೇ ಕಾಣಿಸುತ್ತಿತ್ತು. ಅಷ್ಟೆ..
ಯಾವ ಧೈರ್ಯವೋ ಉಷಾ ಆವತ್ತು ನೇರ ಗಂಡನ ಮನೆಗೆ ನುಗ್ಗಿ ಹೋಗಿದ್ದಳು. ಮನೆಯಲ್ಲಿದ್ದವರು ಏನು, ಯಾಕೆ, ಎನ್ನುತ್ತಾ ಎಂದು ಆಕೆಯನ್ನು ತಡೀಬೇಕಾ..ಬೇಡವಾ.. ಎನ್ನುವಷ್ಟರಲ್ಲಿ ತನ್ನ ರೂಮಿಗೆ ನುಗ್ಗಿದವಳೆ ತನ್ನದೆನ್ನುವ ಚೂರುಪಾರು ಬಂಗಾರ, ಒಡವೆ ಇತ್ಯಾದಿಯನ್ನೆಲ್ಲಾ ಗಂಟು ಕಟ್ಟಿಕೊಂಡು ಅದಾಗಲೇ ಅರ್ಧ ಜೀರ್ಣವಾಗಿದ್ದ ಗಾಡಿ ಹತ್ತಿ ಹೊರಬಿದ್ದಿದ್ದಳು. ಆಕೆಯನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ.
ಆ ಕ್ಷಣಕ್ಕೆ ಅಕೆಗೆ ತೋಚಿದ್ದು ಅದೊಂದೆ. ಮೊದಲು ಮಗುವಿನ ಮೂಗಿನಿಂದ ಆ ಗಲೀಜು ಗೆಡ್ಡೆಯನ್ನು ಕಿತ್ತು ಹಾಕಿಸಬೇಕು. ಆಮೇಲೆ ಏನೇ ಕಷ್ಟವಾಗಲಿ ಮಗುವನ್ನು ಸಾಕುತ್ತೇನೆ. ಹಾಗೆಂದುಕೊಂಡವಳೆ ಇದ್ದಬದ್ದ ಪುಡಿಗಾಸು, ಸ್ನೇಹಿತೆಯರ ಕೈಸಾಲ ವೈದ್ಯರ ಮುಂದೆ ಗುಡ್ಡೆ ಹಾಕಿ ಕೈಮುಗಿದಿದ್ದಳು. ಅವರಿಗೂ ಇದೊಂದು ರೀತಿಯ ಕಷ್ಟದ ಕೆಲಸವಾಗಿಬಿಟ್ಟಿತ್ತು. ಕ್ಯಾನ್ಸರ್‌ನ ಚಿಕಿತ್ಸೆಗೆ ಆಪರೇಷನ್ ಒಂದು ಹಂತವಾದರೆ ಅದರ ನಂತರದ್ದೇ ಒಂದು ಅವಸ್ಥೆ. ಅದರಲ್ಲೂ ಇಂತಹ ತೀರ ಕ್ಲಿಷ್ಟಕರವಾದ ಜಾಗದಲ್ಲಿ ದುರ್ಮಾಂಸ ವ್ಯಾಪಿಸಿದ್ದರೆ ಅದೊಂದು ಅತಿದೊಡ್ಡ ಚಾಲೆಂಜು. ಕತ್ತರಿ ಪ್ರಯೋಗ ನಡೆಯುವಾಗ ದೇಹದ ಇತರ ಸಂಕೀರ್ಣ ಭಾಗಗಳೂ ಅಲ್ಲಿ ಬಲಿಯಾಗಿಬಿಡುವ ಸಾಧ್ಯತೆ ಹೆಚ್ಚು. ಹಾಗಾಗಿ ಇಲ್ಲಿ ಬರೀ ಕ್ಯಾನ್ಸರ್ ಆಗಿದೆ ಎನ್ನುವಂತೆ ಅಲ್ಲದಿದ್ದರೂ ಮೂಗಿನ ಒಳಭಾಗದಿಂದ ಆರಂಭವಾದ ದುರ್ಮಾಂಸದ ಬೆಳೆವಣಿಗೆ ಕಣ್ಣಿನ ಹಿಂಭಾಗಕ್ಕೂ ವ್ಯಾಪಿಸಿ ಅಲ್ಲಿಂದ ಗಂಟಲಿನ ಅನ್ನನಾಳದ ಮೇಲೂ ಬೇರು ಬಿಡಲಾರಂಭಿಸಿತ್ತು (‘ಮೆನಿಂಗ್‌ಝಿಯೋಮಾ’ದ ಮೂರನೆಯ ಹಂತದಿಂದ ವಾಪಸ್ಸು ಬಂದೂ ಚೆಂದವಾಗಿ ಬದುಕುತ್ತಿರುವ ಗೆಳತಿಯದ್ದೊಂದು ಸೂರ್ತಿದಾಯಕ ಕಥೆ. (ಅವಳು ಹೂಂ.. ಅಂದಲ್ಲಿ ಬರೆದೇನು..)
ಅಷ್ಟಕ್ಕೂ ವೈದ್ಯರೇನು ದೇವರಲ್ಲವಲ್ಲ. ಪೂರ್ತಿ ಸ್ವಚ್ಛ ಮಾಡುವ ಭರದಲ್ಲಿ ಯಾವ ಭಾಗ ಹಾನಿಗೊಳಗಾದರೂ ಆಯಾ ಅಂಗಾಂಗಗಳು ಕೈಕೊಡುತ್ತವೆ. ಅದರಲ್ಲೂ ಮೂಗಿನ ಒಳಭಾಗದಿಂದ ಆರಂಭವಾಗಿ, ಪ್ರಮುಖ ಅಂಗವಾಗಿರುವ ಕಣ್ಣಿನ ಹಿಂಭಾಗಕ್ಕೆ ಲಗ್ಗೆ ಇಟ್ಟಿರುವ ಮಾಂಸವನ್ನು ಕತ್ತರಿಸುವುದರೊಂದಿಗೆ ಮತ್ತೆ ಬೆಳೆಯದಂತೆ ನೋಡಿಕೊಳ್ಳಬೇಕು. ಇದೆಲ್ಲವೂ ಒಂದು ಹಂತವಾದರೆ, ಮುಖ ಮೂತಿ ಕತ್ತರಿಸದೆ ಎಲ್ಲವನ್ನೂ ನಳಿಕೆಯ ಮೂಲಕ ಮಾಡಲು ನಿರ್ಧರಿಸಿದ್ದರಿಂದ ಆಗುವ ತೊಡಕಿನ ಕಾರ್ಯಾಚರಣೆ ಎನ್ನುವುದಿನ್ನೂ ದೊಡ್ಡ ತೊಡಕು. ಪ್ರತಿ ಹಂತದಲ್ಲೂ ದೇಹ ಸವಾಲೊಡ್ಡುತ್ತಿರುತ್ತದೆ.
ಇವತ್ತಿಗೂ ಜನಸಾಮಾನ್ಯರಿಗೆ ವಿಸ್ಮಯಕಾರಿ ಕ್ಷೇತ್ರವಾಗಿರುವ ವೈದ್ಯಕೀಯದ ತಜ್ಞರು ಮಗುವನ್ನು ಕರೆದೊಯ್ಯುವಾಗ ಕೈಯದುಮಿ ಸಾಂತ್ವನ ಹೇಳಿದ್ದಲ್ಲದೇ, ಸತತವಾಗಿ ಮೂರೂವರೆ ತಾಸುಗಳ ಗುದ್ದಾಟದ ನಂತರ ಅಂಗೈ ಹಿಡಿ ತುಂಬುವಷ್ಟಿದ್ದ ದುರ್ಮಾಂಸವನ್ನು ತೆಗೆದು ಈಚೆ ತಂದು ಹಾಕಿದ್ದರು. ನಿರಿಕ್ಷೆಗೂ ಮೀರಿದ ಯಶಸ್ಸು ಅವರ ಕೈಗೂಡಿತ್ತು. ಮಗು ಸರಿಯಾಗಿ ಮರುದಿನ ಮಧ್ಯಾಹ್ನ ಕಣ್ಣು ಬಿಟ್ಟಿತ್ತು. ಆದರೆ ಅದರ ಅತಿ ದೊಡ್ಡ ಸಂಪತ್ತಾಗಿದ್ದ ಧ್ವನಿ ಸತ್ತುಹೋಗಿತ್ತು. ಆತುರಕ್ಕೆ ಬಿದ್ದು ಮಗು ಬಾಯಿ ಬಿಟ್ಟೀತು ಎಂದು ಅದರ ತುದಿಗಳನ್ನು ಸೇರಿಸಿಟ್ಟಿದ್ದರು. ಇನ್ನೇನಿದ್ದರೂ ಅದು ಪೂರ್ತಿ ಹಂತಕ್ಕೆ ಬರುವವರೆಗೆ ಕಣ್ಣಲ್ಲೇ ಮಾತಾಡಬೇಕಿತ್ತು.
ಆವತ್ತಿನ ಸ್ಥಿತಿಯನ್ನು ನೋಡಿ ನಾನಂದುಕೊಂಡಿದ್ದೆ. ಸ್ವತಃ ದೇವರಿಗೂ ಮಗುವಿನ ಚೆಂದಕ್ಕೆ ಒಳಗೊಳಗೇ ಉರಿದಿರಬೇಕು. ಇಲ್ಲದಿದ್ದರೆ ಇಂಥಾ ಮಗುವಿಗೆ ಇಂಥದ್ದೊಂದು ನೋವನ್ನು ಯಾಕಾದರೂ ಕೊಡಬೇಕಿತ್ತು? ಆದರೆ ಅದರಮ್ಮನಿಗೆ ಆದರ ಕಡೆಗೂ ಲಕ್ಷ್ಯವಿರಲಿಲ್ಲ. ಸದ್ಯಕ್ಕೆ ಮೊದಲು ಮಗು ನೆಟ್ಟಗಾಗಬೇಕು. ಆಕೆ ಈಗ ಅರ್ಧ ನಿಟ್ಟುಸಿರು ಬಿಟ್ಟಿದ್ದಳು. ಕಾರಣ ಆಪರೇಷನ್ ನಂತರದ ಎರಡು ವರ್ಷ ಕಾಲ ಸತತ ಉಳಿದ ಅಂಶವನ್ನು ಕಿಮೋ ಮೂಲಕ ಸುಡುವ ಕಾರ್ಯವಿತ್ತಲ್ಲ. ಅದು ಪೂರ್ತಿ ಅವಳ ಬದುಕನ್ನೇ ನುಂಗುವಂತೆ ಮಾಡಲಿತ್ತು. ಇವತ್ತು ಇದ್ದುದರಲ್ಲಿ ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಕಿಮೋ ಮಾಡುತ್ತಿರುವುದು ಕಿದ್ವಾಯಿಯೇ ಎಂದರೂ ಸರಿನೇ. ಉಳಿದೆಡೆ ಇಂಥಾ ಒಂದು ಸಾವಿನ ಬಾಯಿಯಿಂದ ಜೀವವನ್ನು ಬದುಕಿಸಿಕೊಳ್ಳೋದಿದೆಯಲ್ಲ ಅದು ಕನಿಷ್ಠ ಐದೂ ಚಿಲ್ರೆ ಲಕ್ಷ ರೂಪಾಯಿಗಳ ಬಾಬತ್ತು. ಉಷಾದಿನ್ನೆಂಗೆ ಭರಿಸಿದಳೊ..? ಅಂತೂ ಮಗುವಿನ ಉಳಿವಿಗೆ ಆಕೆ ದೇವರಿಗೂ ಸವಾಲೊಡ್ಡಿದ್ದು ಸ್ಪಷ್ಟವಿತ್ತು.
ಮೊದಲು ಮಗು ಚೇತರಿಸಿಕೊಂಡಿತೇನೋ ಸರಿ. ಆದರೆ ಮೊದಲ ಕಿಮೋ ಆಗುತ್ತಿದ್ದಂತೆ ಮತ್ತು ಅದರ ಸೈಡ್ ಎಫೆಕ್ಟುಗಳಿಂದ ಚಿಟಿಚಿಟಿ ಮಗು ಚೀರುತ್ತಿದ್ದರೆ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಕೈಯಿಂದ ಮುಖವನ್ನು ಅದುಮಿಕೊಳ್ಳುತ್ತಾ, ಆಗುತ್ತಿದ್ದ ನೋವನ್ನು ಭರಿಸದೆ ಚೆಂದದ ಕೆಂಪು ಕೆನ್ನೆಯ ಮಗು ಹೊರಳಾಡುತ್ತಾ ಕಿರುಚುತ್ತಿದ್ದರೆ ಮೊದಲ ಆಪತ್ತು ಬಂದಿದ್ದು ಮನೆಯ ಮಾಲೀಕನಿಂದ. ಗಂಡನ ಮನೆಯಿಂದ ಹೊರಬಿದ್ದು ಚಿಕ್ಕ ಆಸರೆ ಮಾಡಿಕೊಂಡಿದ್ದಳಲ್ಲ. ಆತ ತನ್ನ ಬಾಡಿಗೆಗೆ ಸಂಚಕಾರ ಬಂದೀತೆಂದು ನಿರ್ದಾಕ್ಷಿಣ್ಯವಾಗಿ ಹೊರ ಹೋಗಲು ಬಲವಂತ ಮಾಡಿದ್ದ. ಇದಾಗುತ್ತಿದ್ದಂತೆ ಆಕೆಯ ಗಂಡ ಕಳ್ಳತನದ ಕೇಸನ್ನು ದಾಖಲಿಸಿದ್ದ. ಪುಣ್ಯಕ್ಕೆ ಖಾಸಾ ಪರಿಚಯದ ಡಿಸಿಪಿಯೊಬ್ಬರು ಮಧ್ಯೆ ಪ್ರವೇಶಿಸಿ ಅಲ್ಲೇ ಸರಿಮಾಡಿದ್ದರು. ಉಷಾ ಯಾವ ಮುಲಾಜೂ ಉಳಿಸಿಕೊಳ್ಳದೆ, ಸ್ನೇಹಿತೆಯೊಬ್ಬಳ ಮನೆಯ ಚಿಕ್ಕ ಹೊರಕೋಣೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಳು. ಸಣ್ಣ ಕೆಲಸಕ್ಕೆ ಹೊರಟಾಗ ಅವಳಮ್ಮ ಬಂದು ಬೆನ್ನಿಗೆ ನಿಲ್ಲುತ್ತಿದ್ದಳು.
ಅದಕ್ಕಿಂತಲೂ ಸಮಸ್ಯೆ ಶುಚಿತ್ವದ್ದು. ತೀವ್ರ ಶುಚಿತ್ವ ಮತ್ತು ಜಾಗೃತೆಯನ್ನು ಬೇಡುವ ಹಂತದಲ್ಲಿದ್ದಾಗ, ಇಂಥಾ ಮನೆಯೆನ್ನುವ ಕಿಷ್ಕಿಂಧೆಯಲ್ಲಿ ಅದನ್ನೆಲ್ಲಾ ಪಾಲಿಸಲು ಪೂರೈಸಲು ಸಾಧ್ಯವೇ ಇರಲಿಲ್ಲ. ಯಾವ ಕಾರಣಕ್ಕೂ ಮಗುವಿಗೆ ಕಾಯಿಸಿ ಆರಿಸಿದ ನೀರಿನ ಹೊರತು ಬೇರೆ ನೀರು ಪಾನೀಯ ಕುಡಿಸುವಂತಿರಲಿಲ್ಲ. ಕಾಯಿಸಿದ ನೀರಿನ ರುಚಿಗೆ ಮಗು ರೋಸಿ ಹೋಗುತ್ತಿತ್ತು. ಪಥ್ಯ ಆಹಾರ ಮತ್ತು ಕಟ್ಟು ನಿಟ್ಟಿನ ಔಷಧವನ್ನೂ ತಿನ್ನುವುದಕ್ಕೂ ತಕರಾರು ತೆಗೆಯುತ್ತಿತ್ತು. ಅದಕ್ಕಿಂತಲೂ ಮಗುವಿಗೆ ಮೈಯ್ಯೆಲ್ಲಾ ಯಾತನೆಯಾಗಿ ಚೀರುತ್ತಿತ್ತಲ್ಲ. ಆಗ ಎಂತಹವರ ಎದೆಯೂ ಒಡೆದು ಹೋಗುತ್ತಿತ್ತು. ಎರಡ್ಮೂರು ವಾರ ಕಳೆಯುವಷ್ಟರಲ್ಲಿ ಮೈಯೆಲ್ಲಾ ಕಪ್ಪಾಗಿ ಅಲ್ಲಲ್ಲಿ ಬಿಳಿಯ ಪಳೆಯುಳಿಕೆ ಉಳಿದು ತಲೆಕೂದಲೆಲ್ಲ ಉದುರಿ ಉಗುರುಗಳು ಕಪ್ಪುಗಟ್ಟಿದಂತಾಗಿ ಅದರಲ್ಲೂ ಅದಕ್ಕೆ ಗಂಟುಗಳೆಲ್ಲಾ ಹಿಂಡಿದಂತಾಗಿ, ಒಂದಾ ಎರಡಾ.. ದೇವರೇ .. ಅದರ ಎರಡೂ ಸ್ಥಿತಿಯನ್ನು ನೋಡಿದವರು ಇಂಥಾ ಪರಿಸ್ಥಿತಿಗಿಂತ ಮಗು ಹೋಗಿದ್ದರೆ ಚೆನ್ನಾಗಿತ್ತಾ ಎನ್ನಿಸದಿರುತ್ತಿರಲಿಲ್ಲ. ಪ್ರತಿ ನಿಮಿಷವೂ ಮಗುವಿನ ಬಗ್ಗೆ ಎಣಿಸುವಂತಾಗಿ ಹೋಗಿತ್ತು ಬದುಕು.
ಇದೆಲ್ಲಾ ಒಂದು ಹಂತವಾದರೆ ಪ್ರತಿ ಬಾರಿ ಆಸ್ಪತ್ರೆಗೆ ಹೋಗುವಾಗಲೂ ದುಡ್ಡು, ಸಂಬಂಧಿಸಿದ ಇತರೆ ಖರ್ಚಿಗಾಗಿ ಉಷಾಳಿಗೆ ಇನ್ನೇನು ಸ್ವತಃ ರಕ್ತ ಮಾರಿಕೊಳ್ಳುವುದೊಂದು ಬಾಕಿ ಉಳಿದಿತ್ತು. ಅವಳಮ್ಮ ಎಲ್ಲೆಲ್ಲಿಂದಲೋ ಹೊಂಚುತ್ತಿದ್ದರಾದರೂ ಅದು ದುಬಾರಿಯ ದಿನದಲ್ಲಿ ಹಿಡಿಯ ಮರಳಿನಂತೆ ಸರಿದು ಹೋಗುತ್ತಿತ್ತು. ಉಷಾ ತೀರ ನಡುಬೀದಿಗೆ ಬಂದಿದ್ದಳು. ಈ ಹಂತದಲ್ಲಿ ನನ್ನ ತಂಡ ಮತ್ತು ಸ್ನೇಹಿತರು, ಎಡಗೈದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡುವ ಒಂದಿಷ್ಟು ಪುಣ್ಯಾತ್ಮರು ಜೊತೆಗೆ ನಿಂತರು. ಕೆಲವರು ವೈದ್ಯರ ಮೇಲೆ ಶಿಫಾರಸ್ಸು ತಂದು ಚಿಕಿತ್ಸೆಯ ವೆಚ್ಚ ತಗ್ಗಿಸಿದರು. ಇನ್ಯಾರೋ ಇನ್ಯಾವುದೋ ರೂಪದಲ್ಲಿ ಒಂದಿಷ್ಟು ಸಹಾಯ ಸಲ್ಲಿಸಿದರು. ಸತತ ಮೂರು ವರ್ಷದ ಹೋರಾಟದಲ್ಲಿ ಉಷಾ ಕಾಲೂರಿ ನಿಂತು ನಡೆಸಿದ ಹಣಾಹಣಿಗೆ ದೇವರೂ ಸೋತುಹೋಗಿದ್ದ. ಮಗು ಬಾಯ್ದೆರೆದು ಸ್ಪಷ್ಟವಾಗಿ ‘ಅಮ್ಮ’ ಎಂದುಬಿಟ್ಟಿತ್ತು. ಅಷ್ಟೆ ಸ್ವರ್ಗ ಎದುರಿಗಿತ್ತು. ಮಗುವಿನ ಐದನೆಯ ವರ್ಷದಿಂದ ಆರಂಭವಾಗಿದ್ದ ಕುರುಕ್ಷೇತ್ರ ಎಂಟನೇ ವರ್ಷದ ಹುಟ್ಟುಹಬ್ಬದ ಹೊತ್ತಿಗೆ ನಮ್ಮ ಟೀಮು ಅದನ್ನೆತ್ತಿ ನೆಲಕ್ಕಿಳಿಯಲು ಬಿಡದೆ ಸೆಲಿ ತೆಗೆಸಿಕೊಳ್ಳುತ್ತಿದ್ದರೆ, ಉಷ ಸುಮ್ಮನೆ ನಿಂತು ಒಮ್ಮೆ ಕಣ್ಣೊರೆಸಿಕೊಂಡಿದ್ದಳು. ಹುಟ್ಟಿಸಲಿಕ್ಕೆ ಮಾತ್ರ ಕಾರಣವಾಗಿದ್ದ ಅಪ್ಪ ಇತ್ತ ಸುಳಿದಿರಲಿಲ್ಲ.
‘ಅಲ್ಲ..ಹೆಣ್ಣು ಮಗು ಹುಟ್ಟಿದರೆ ಯಾಕೆ ಹಿಂಗಾಡ್ತಾರೆ..? ಹೆಣ್ಣೆ ಹುಟ್ಟದಿದ್ರೆ ಇವರ ತೆವಲಿಗೆ ಯಾರು ಸಿಗ್ತಿದ್ರು..? ಹೆಂಡತಿ ಅಂದರೆ ಬರೀ ಸೆಕ್ಸ್‌ಗೆ, ಗಂಡು ಮಕ್ಕಳು ಹುಟ್ಟಿಸಲಿಕ್ಕೆ ಅಂತಾ ಯಾವನು ಇವರ ತಲೆಗೆ ತುಂಬಿದನೋ ಮಾರಾಯ ಅವನನ್ನು ಹಡೆದವಳೂ ಹೆಂಗಸೇ ಅಲ್ವಾ..? ಹೀಗಾಗೋದೇ ಆದರೆ ಮದುವೆ ಅಂತಾ ಮಾಡ್ಕೊಂಡು ಯಾಕೆ ಹೆಣ್ಮಕ್ಕಳ ಬದುಕು ಹಾಳು ಮಾಡ್ಬೇಕು..? ಇಂಥಾ ಹಗರಣಕ್ಕಿಂತ ಸುಮ್ಮನೆ ಇರೋದೆ ಸುಖ..’ ಉಷಾ ಪಡಬಾರದ ಕಷ್ಟಕ್ಕೀಡಾಗಿ ಹೊರಬಂದು ಅಲವತ್ತುಕೊಳ್ಳುತ್ತಿದ್ದರೆ ಪಕ್ಕ ನಿಂತಿದ್ದವನು ಸುಮ್ಮನೆ ಬೆನ್ನು ತಡುವಿ ಸಮಾಧಾನಿಸಿದ್ದೆ. ಹೆಚ್ಚಿಗೆ ಹೇಳಲು ದೇವರು ಪದಗಳನ್ನೂ ಉಳಿಸಿರಲಿಲ್ಲ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)


Monday, November 16, 2015

ಅದು ಗುಣಸಂಧಿಯಂತಹ ಕಾಲ…

Ed 2ಗಂಡನೆಂಬುವ ಮಗು ಹುಟ್ಟಿಸಿ ಕೈಬಿಟ್ಟುಬಿಟ್ಟರೆ, ಸಾಮಾಜಿಕ ಜವಾಬ್ದಾರಿ ಮತ್ತು ಕೌಟುಂಬಿಕ ಸಾಮರಸ್ಯ ಒಲ್ಲೆ ಎನ್ನುವ ಗಂಡಸರಿಗೆ ಮದುವೇನೂ ಒಂದು ತೆವಲಾಗಿಬಿಟ್ಟರೆ ಆ ಸುಳಿಯೊಳಗೆ ಸಿಗುವ ಅವಳಂತೂ ಬಿಡಿ, ಮಕ್ಕಳೂ ದುರ್ಭರ ಪರಿಸ್ಥಿತಿಗೆ ಈಡಾಗಿಬಿಡುತ್ತಾರೆ. ಬದುಕಿಸುವವರು ಯಾರು..?
‘ಹೆಣ್ಣುಗಳೆಂದರೆ ಬರೀ ಸೆಕ್ಸ್​ಗೆ ಮಾತ್ರ ಅಂತಾ ಗಂಡಸರಿಗೆ ಯಾಕೆ ಅನ್ನಿಸ್ತದೆ..? ಹಂಗ ಅನ್ನಿಸೋದೆ ಆದರೆ ಮದುವೆ ಯಾಕ ಆಗಬೇಕು? ಯಾವಾಗ ಬೇಕು ಆವಾಗ ಉಪಯೋಗಿಸ್ಕೊಳ್ಳೊಕೆ ಅಂತಾ ಇರ್ತಾರಲ್ಲ ಅಲ್ಲೇ ಕೆಲಸ ಮುಗಿಸ್ಕೊಬಹುದಲ್ಲ…’ ಕಟ್ಟೆಯ ಮೇಲೆ ಪಕ್ಕದಲ್ಲಿ ಕೂತಿದ್ದು ಶೂನ್ಯವನ್ನು ದಿಟ್ಟಿಸುತ್ತ, ಜೀವನದ ತಿರುವಿನಲ್ಲಿ ಅರ್ಥವಾಗದೆ ನಿಂತುಬಿಟ್ಟಿದ್ದ ಉಷಾ ಸೋತು ಸುಣ್ಣವಾದ ಧ್ವನಿಯಲ್ಲಿ ವಿಚಾರಿಸುತ್ತಿದ್ದರೆ ಯಾವ ಉತ್ತರಕ್ಕೂ ಈಡಾಗದೆ ನಾನು ಪಿಳಿಪಿಳಿ ಮಾಡುತ್ತ ಸುಮ್ಮನೆ ಕೂತಿದ್ದೆ. ತಕ್ಷಣಕ್ಕೆ ಉತ್ತರಿಸುವ ಸಂದರ್ಭವೂ ಅದಾಗಿರಲಿಲ್ಲ. ಸಹಜ ಕೌಟುಂಬಿಕ ದೌರ್ಜನ್ಯದ ಕೇಸಿಗಾದರೆ ‘ಎಲ್ಲಿ ನಿನ್ನ ಗಂಡ.. ತಂದು ಕೂರಿಸಿಕೊಂಡು ಸರಿ ಮಾಡೊಣ್ವಾ..’ ಎನ್ನಬಹುದಾದ ಸೀನ್ ಕೂಡ ಅಲ್ಲಿರಲಿಲ್ಲ.
ತೀರಾ ಗಂಭೀರ ಇರಲಿಕ್ಕಿಲ್ಲ ಬಿಡು ಎಂದು ನಾನೂ ಆಕೆಯ ಕರೆಗಳಿಗೆ ಆಗೀಗ ಹೂಂ.. ಹಾಂ.. ಎನ್ನುತ್ತಲೇ ನಿರ್ಲಕ್ಷ್ಯ ಮಾಡಿ ನನ್ನ ಪಾಡಿಗೆ ಉಳಿದುಬಿಟ್ಟಿದ್ದೆ. ಇನ್ಯಾವತ್ತೋ ಕರೆ ಮಾಡಿ ಮಾತಾಡಿದಾಗಲೇ ಗೊತ್ತಾಗಿದ್ದು ಆಕೆ ಆಗಲೇ ಮನೆ ಬಿಟ್ಟು ಸುಮಾರು ಸಮಯವಾಗಿದೆ ಎನ್ನುವ ವಿಷಯ. ಬಾಕಿ ಏನೇ ಆದರೂ ಹೆಣ್ಣುಮಕ್ಕಳು ಸಹಿಸಿಬಿಡುತ್ತಾರೆ. ಆದರೆ ಮಕ್ಕಳು ಮತ್ತು ಕುಟುಂಬ ದಾಂಪತ್ಯದ ವಿಷಯದಲ್ಲಿ ಅವರ ಡೆಡಿಕೇಶನ್ನಿನ ತಾಕತ್ತೇ ಬೇರೆ. ಅವಶ್ಯಕತೆ ಮತ್ತು ಅಗತ್ಯತೆ ಇದ್ರೆ ದೇವರಿಗೆ ಬೇಕಿದ್ದರೂ ಸೆಡ್ಡು ಹೊಡೆದು ಬಿಡುತ್ತಾರೆ.
ಕೌಟುಂಬಿಕ ದೌರ್ಜನ್ಯವನ್ನೂ ಸಹಿಸಿಕೊಂಡು ಜೀವನ ದೂಡುತ್ತಿದ್ದ ಉಷಾ, ಯಾವಾಗ ಮಗುವಿನ ಬದುಕು ಹಳ್ಳ ಹಿಡಿದೀತು ಎನ್ನಿಸಿತೋ ಸಟಕ್ಕನೆ ಎದ್ದು ನಿಂತಿದ್ದಳು. ಮುಂದೇನು? ಎನ್ನುವ ಎರಡನೆಯ ಯೋಚನೆಗೂ ಮೊದಲೆ ಮನೆ ತೊರೆದಿದ್ದಳು. ತೀರಾ ಏನೆಂದರೆ ಏನೂ ಆದಾಯವಿಲ್ಲದಿದ್ದರೂ ನಾಳೆ ಏನು ಎನ್ನುವುದು ಗೊತ್ತೇ ಇಲ್ಲದ ಪರಿಸ್ಥಿತಿ. ಹೆಣ್ಣುಮಗಳೊಬ್ಬಳ ಸ್ವಾಭಿಮಾನ ಅದು. ಅಮ್ಮನ ಮನಸ್ಥಿತಿಯ ಔನ್ನತ್ಯದ ಹೆಜ್ಜೆ ಅದು. ಉಷಾಳ ಎದುರಿಗೆ ಇದ್ದುದು ಬರೀ ಮಗುವಿನ ಬದುಕು ರೂಪಿಸುವ ಏಕಮಾತ್ರ ಗುರಿ. ಆದರೆ ಅವಳಿಗೂ ಅರಿವಿಲ್ಲದ್ದೇನೆಂದರೆ ಪರಿಸ್ಥಿತಿ ತೀರಾ ಅಂಚಿನಲ್ಲಿ ಬಂದು ನಿಂತಿತ್ತು.
ಆವತ್ತು ಆಕೆಯ ಮಗುವಿನ ರಿಪೋರ್ಟ್ ಬರುವುದಿತ್ತು. ತೀರಾ ನಾಲ್ಕೈದು ವರ್ಷದ ಪುಟ್ಟ ಹುಡುಗಿ ಅದು. ಪದೇಪದೆ ರಕ್ತ ಬಸಿದುಕೊಳ್ಳುತ್ತಿದ್ದ ನರ್ಸ್​ಗಳಿಗೂ, ‘ಆಗೀಗೊಮ್ಮೆ ಕೈಕಾಲು ಆಡಿಸಿ ನೋಡು ಕಣ್ಣ ಕೆಳಗಿನ ಪಾಪೆ ಹಿರಿದಿರಿದು ನೋಡಿ, ಉಸಿರೆಳೆದುಕೋ.. ಹಾಂ.. ಈಗ ಬಿಡು,’ ಎನ್ನುವ ಅರ್ಥವಾಗದ ಕ್ರಿಯೆಗಳಿಂದ ಬದುಕಿದ್ದಾಗಲೇ ಸಾಯಿಸುತ್ತಿದ್ದ ಪರೀಕ್ಷೆಗಳಿಗೀಡಾಗಿ, ಯಾವಾಗ ಆಸ್ಪತ್ರೆಯಿಂದ ಹೊರಕ್ಕೆ ಹೋದೇನೋ ಎಂದು ಚಡಪಡಿಸುತ್ತಿತ್ತು ಮಗು. ತುಂಬ ಬೆಳ್ಳಗೆ ಗುಂಡಗೆ ಮುದ್ದು ಮುದ್ದಾಗಿತ್ತು. ಮುಗ್ಧತೆಗಿಂತಲೂ ಚೆಂದವಿತ್ತು ಅದು. ಕಡುಕಪ್ಪು ಕಂಗಳ ಮೇಲೆ ಹಾರಾಡುತ್ತಿದ್ದ ಜೊಂಪೆ ಕೂದಲನ್ನು ಗದರಿಸುವಂತೆ ಎಡಗೈಯಿಂದ ಆಚೀಚೆ ತಳ್ಳುತ್ತಾ, ಇನ್ನೊಂದು ಕೈಯಿಂದ ದೊಗಳೆ ಚೆಡ್ಡಿ ಎಳೆದುಕೊಂಡು ಓಡಾಡುತ್ತಿದ್ದರೆ ..ಒಹ್.. ನಾನೂ ಮತ್ತೊಮ್ಮೆ ಮಗುವಾಗಬಾರದಿತ್ತೆ ಎನ್ನಿಸುತ್ತಿತ್ತು ಅದರ ಮುಗ್ಧತೆಗೆ. ಅದು ಎಲ್ಲೆಂದರಲ್ಲಿ ಲುಟುಲುಟು ಉರುಳುತ್ತಿದ್ದರೆ ಉಷಾಳಿಗಂತೂ ದೇವರೇ ದೃಷ್ಟಿ ಹಾಕಬೇಡಪ್ಪಾ ಎನ್ನುವಂತಾಗುತ್ತಿತ್ತು.
ಅದಕ್ಕಾಗಿ ಕಾಡಿಗೆಯ ಎರಡ್ಮೂರು ಗೆರೆಗಳನ್ನು ಅದರ ಮುಖಕ್ಕೆಳೆದು, ಮುಖವನ್ನೂ ಗಲೀಜು ಮಾಡಿ, ತಿಂದಾದ ನಂತರ ಕೆನ್ನೆಗೆ ಮೆತ್ತಿಕೊಂಡಿದ್ದನ್ನು ಒರೆಸದೆ ಹಾಗೆ ಬಿಟ್ಟು, ಕೂದಲನ್ನು ಬಾಚದೆ, ಮಾಸಿದ ಅಂಗಿ ಅದರ ಮೇಲೆ ಅದಕ್ಕೊಪ್ಪದ ಒಂದು ದೊಗಳೆ ಚೆಡ್ಡಿ ಹಾಕಿ ಹುಡುಗಿನಾ, ಹುಡುಗನಾ ಎನ್ನುವಂತೆ ಕನ್ಪ್ಯೂಸ್ ಮಾಡಿ, ಹೀಗೆ ಹಲವು ವಿಧದಲ್ಲಿ ಅದರ ಚೆಂದವನ್ನು ನೋಡುಗರ ದೃಷ್ಟಿಯಿಂದ ಮರೆಮಾಚಲು ಯತ್ನಿಸುತ್ತಿದ್ದಳು. ಆದರೆ ಹೂವಿಗೆ ಬೇಲಿಯ ಹಂಗೇ..? ಅಂಥ ಅರೆಬರೆ ವೇಷದಲ್ಲೂ ಮಗು ಪೆದ್ದ ನಗೆ ನಗುತ್ತಾ, ಕೈ ಬೀಸುತ್ತ, ಸರಸರನೇ ಕಾಂಪೌಂಡು ಗೋಡೆ ಹತ್ತಿ ಕೂರುತ್ತ ದಾರಿಯಲ್ಲಿ ಹೋಗುವವರ ಅಕರ್ಷಿಸುತ್ತಿತ್ತು. ಆದರೆ ಅದು ಆಡಾಡುತ್ತಲೇ ಉಸಿರು ಬಿಗಿ ಹಿಡಿದಂತಾಗಿ ಕಿರುಚುತ್ತಿತ್ತು. ಇದ್ದಕ್ಕಿದ್ದಂತೆ ತಿದಿಯೊತ್ತಿದ್ದಂತೆ ಅದಕ್ಕೆ ಉಸಿರುಕಟ್ಟುತ್ತಿತ್ತು.
ಅಸಲಿಗೆ ಮಗುವಿಗೂ ಏನೂ ತೋಚುತ್ತಿರಲಿಲ್ಲ. ಆಗೀಗ ಉಸಿರು ಕಟ್ಟುತ್ತಲೇ ಮೂಗು ಸಿಂಡರಿಸಿಕೊಂಡು ಓಡಾಡುತ್ತಿತ್ತು. ರಾತ್ರಿಯಾದಂತೆ ಸಮಸ್ಯೆ ಉಲ್ಬಣಿಸುತ್ತಿತ್ತು. ಶ್ವಾಸಕೋಶಕ್ಕೆ ವಾಯುವಿನ ಕೊರತೆಯಾಗಿಬಿಡುತ್ತಿತ್ತು. ಅಷ್ಟೆ.. ಮಗು ಎದ್ದು ಕೂತು ಬಿಡುತ್ತಿತ್ತು. ರಾತ್ರಿಯಿಡೀ ಜಾಗರಣೆ. ಪರಿಸ್ಥಿತಿ ಹೀಗೆ ಮುಂದುವರಿಯುತ್ತಿದ್ದಂತೆ ಗಂಭೀರವಾದ ಚಿಕಿತ್ಸೆಯ ಅಗತ್ಯ ಕಂಡುಬರತೊಡಗಿತ್ತು. ಆದರೆ ಮೊದಲ ಒಂದೆರಡು ಮಾಮೂಲಿನ ಚಿಕಿತ್ಸೆ ಫಲಕಾರಿಯಾಗದೆ ಸ್ಥಳೀಯ ವೈದ್ಯರು ಮಗುವನ್ನು ಪರಿಣಿತರ ಕಡೆಗೆ ಒಯ್ಯುವಂತೆ ಸೂಚಿಸುತ್ತಿದ್ದಂತೆ ಮನೆಯಲ್ಲಿದ್ದವರ ವರ್ತನೆ ಬದಲಾಗತೊಡಗಿತ್ತು.
ಆದರೆ ದುರದೃಷ್ಟ ಎಂದರೆ ಪುಟ್ಟ ಕಲಾಕೃತಿಯಂತಹ ಮಗುವನ್ನು ಕೂಡಲೇ ರಕ್ಷಿಸಿಕೊಳ್ಳಬೇಕಾಗಿದ್ದ ಅಪ್ಪನಾದವ, ಮೊದಲೇ ಹೆಣ್ಣು ಮಗು ಎಂದು ಬೇಸರಿಸುತ್ತಿದ್ದವ ಈಗ ತೀರಾ ಹೋದರೆ ಹೋಗಲಿ ಎನ್ನುವ ಹಂತ ತಲುಪಿಬಿಟ್ಟಿದ್ದ. ಯಾವ ಲೆಕ್ಕದಲ್ಲೂ ಚಿಕಿತ್ಸೆಗೆ ಖರ್ಚು ಮಾಡುವ ಲಕ್ಷಣವೇ ಇರಲಿಲ್ಲ. ಅವನ ನಿರ್ಲಕ್ಷ್ಯಂದ ಮತ್ತು ಪ್ರತಿ ದಿನ ಮಗು ಒದ್ದಾಡುತ್ತಿದ್ದ ಪರಿಸ್ಥಿತಿಗೆ ಉಷಾ ನಿಮಿಷಗಳಲ್ಲಿ ಸಮಯವನ್ನು ಲೆಕ್ಕ ಹಾಕುವ ಹಂತಕ್ಕೆ ಬಂದಿದ್ದಳು. ಅಮ್ಮನ ಮನೆಯಿಂದ ಅನುಕೂಲಕರವಾದ ಪರಿಸಿತ್ಥಿಯೇನೂ ಇರಲಿಲ್ಲ. ಆದರೆ ಇವತ್ತಿಗೂ ಪ್ರತಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಬೆಂಬಲ ಮತ್ತು ಒಂದು ಒಲವು ಅಂತಾ ಸಿಕ್ಕುತ್ತಿದ್ದರೆ ಅದು ಅಮ್ಮನ ಮನೆಯಿಂದಲೇ ಎನ್ನುವುದು ಇತರ ಹೆಣ್ಣುಮಕ್ಕಳಿಗಾದಂತೆ ಉಷಾಳಿಗೂ ಆಗಿದ್ದು ನಮ್ಮ ಪ್ರಸ್ತುತ ಪರಿಸ್ಥಿಯ ವ್ಯಂಗ್ಯ ಮತ್ತು ವಿಪರ್ಯಾಸ. ಯಾವ ಲೆಕ್ಕದಲ್ಲೂ ಸಹಾಯ ಸಲ್ಲಿಸುವ ಸ್ಥಿತಿಯಲ್ಲಿ ಇಲ್ಲದ ಅವಳಮ್ಮ, ಉಷಾಳ ಕೈಯಿಂದ ಮಗುವನ್ನು ಒಯ್ದು ಡಾಕ್ಟರರ ಎದುರಿಗಿಟ್ಟು ಕೈ ಮುಗಿದಿದ್ದಳು. ಕೆಂಪು ಕೆನ್ನೆಯ ಲುಟು ಲುಟು ಎನ್ನುತ್ತಿದ್ದ, ಒಂದು ನಿಮಿಷ ನಿಲ್ಲದ, ಚೆಂದಗೆ ಟೇಬಲ್ ಪಕ್ಕ ನಿಂತು ಅವರ ಸ್ಟೇತಾಸ್ಕೋಪನ್ನೆ ಕಿತ್ತುಕೊಳ್ಳುವಂತೆ ನೋಡುತ್ತಿದ್ದ ಮಗುವಿನ ಆ ಚೆಲುವಿನ ಹಿಂದೆ ಕಹಿ ಸತ್ಯವೊಂದು ಮನೆ ಮಾಡಿರಬಹುದೆನ್ನುವ ಅಂದಾಜು ಆ ಕ್ಷಣಕ್ಕೆ ವೈದ್ಯರಿಗೂ ಇರಲಿಲ್ಲ. ಆದರೆ ಅಮ್ಮನಾದವಳು ಹೇಗೆ ಸುಮ್ಮನಿದ್ದಾಳು..?
ಅಲ್ಲಿಂದಿಲ್ಲಿಗೆ ಓಡಾಡಿದ ಮಗುವಿನ ಮೈಯಿಂದ ಕಾಲು ಲೀಟರ್​ನಷ್ಟು ರಕ್ತ ಹಲವು ಪರೀಕ್ಷೆಗೆಂದು ಬಸಿದು ಆದ ಮೇಲೆ ಗೊತ್ತಾಗಿತ್ತು. ಮಗುವಿನ ಮೂಗಿನ ಮೇಲ್ಭಾಗದಲ್ಲಿ ಅದ್ಯಾವುದೋ ಅರಿವಿಗೆ ಸಿಗದ ಗಡ್ಡೆ ಬೆಳೆದು ಕೂತುಬಿಟ್ಟಿತ್ತು. ಅದನ್ನು ಮೂಗಿನ ಮೂಲಕ ನಳಿಕೆ ತೂರಿಸಿ, ಬಾಯಿಯಿಂದ ಅದರ ಒಂದಷ್ಟು ಮಾದರಿ ಸಂಗ್ರಹಿಸಿ ಹೀಗೆ ಏನು ಮಾಡಿದರೂ ಸಾಧ್ಯವಾಗದೆ ಈಗ ಮೂರನೆಯ ಬಾರಿಗೆ ಆ ಪರೀಕ್ಷೆ ಫಲಿತಾಂಶಕ್ಕಾಗಿ ಕಾದು ಕೂತಿದ್ದಳು ಉಷಾ. ಒಂಟಿಯಾಗಿ ನಿಂತ ಅವಳ ಜತೆಗಿದ್ದು ‘ಏನಾಗಲ್ಲ ಬಿಡು’ ಎಂದು ಕೊಂಚ ಧೈರ್ಯ ಹೇಳಲೂ ಯಾರೂ ಇರಲಿಲ್ಲ. ಪ್ರತಿಯೊಬ್ಬರ ಅಸಲಿತನ ಗೊತ್ತಾಗುವುದೇ ಇಂಥ ಸಂದರ್ಭದಲ್ಲಿ. ಚೂರುಪಾರು ಸ್ನೇಹಿತರೂ ‘ಹೌದಾ.. ಒಳ್ಳೇ ಡಾಕ್ಟರಿಗೆ ತೋರಿಸು’ ಎಂದು ಅತ್ಯಂತ ಉಚಿತ ಸಲಹೆ ಕೊಟ್ಟರೇ ವಿನಾ ‘ನಿನ್ನ ಜೊತೆ ನಾನೂ ಇದ್ದೀನಮ್ಮ’ ಎನ್ನಲಿಲ್ಲ.
ಸರಿಯಾಗಿ ಆಟೋದಲ್ಲಿ ಓಡಾಡಲು ಆಗುವಷ್ಟೂ ದುಡ್ಡಿರಲಿಲ್ಲ. ಅಮ್ಮನಾದವಳು ಉಷಾಳಿಗೆ ಮಗುವನ್ನು ಕರೆದೊಯ್ಯುವ ಹೊತ್ತಿಗೆ ಹೇಗೋ ಎಲ್ಲಿಂದಲೋ ಹೊಂಚಿ ಒಂದಿಷ್ಟು ನೋಟುಗಳ ಮುದ್ದೆಯನ್ನು ಕೈಗಿಟ್ಟು ಮಗುವಿಗೆ ಲೊಚ ಲೊಚ ಮುತ್ತಿಟ್ಟು ಕಳಿಸುತ್ತಿದ್ದಳು. ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೂ, ಅದರ ಪರೀಕ್ಷೆಗಳಿಗೆ ಇನ್ಯಾವುದೋ ಮೂಲೆಯ ಲ್ಯಾಬಿಗೆ ಹೋಗುವಾಗಲೇ ಅವಳ ಜೀವ ಅರ್ಧವಾಗುತ್ತಿತ್ತು. ಅದಕ್ಕಿಂತಲೂ ದೊಡ್ಡದೆಂದರೆ ಅಂಥ ಆಸ್ಪತ್ರೆಗೆ ಹೋದಾಗಲೇ ಜನರಿಗೂ ಅರ್ಥವಾಗಿ ಬಿಟ್ಟಿರುತ್ತೆ ಏನಾಗಿರಬಹುದೆಂದು. ಈ ಮಗೂಗಾ..? ಎಂದು ಹುಬ್ಬೇರಿಸಿ ನಿಲ್ಲುತ್ತಿದ್ದರು ಎದುರಿಗೆ ಸಿಕ್ಕವರೆಲ್ಲ. ದೇವರಂಥ ವೈದ್ಯ ಶ್ರೀಕುಮಾರ್ ಮಾತ್ರ ಮಗುವಿನ ಬಿಳಿ ಕೆನ್ನೆ ಮೆಲ್ಲಗೆ ತಾಡಿಸುತ್ತಾ, ‘ಇದನ್ನು ಪಾರಾನಾಸಲ್ ಕ್ಯಾವಿಟಿ ಸೈನಸ್ ಕ್ಯಾನ್ಸರ್ ಎನ್ನುತ್ತಾರೆ. ಇದಕ್ಕೆ ನಾಳೆ ಗುರುವಾರವೇ ಆಪರೇಟ್ ಮಾಡೋಣ. ಕೊಂಚ ತಡವಾಗಿದೆ. ಆದರೂ ಮಗುವಿಗೆ ಏನಾದರೂ ಆಗಲು ಬಿಟ್ರೆ ಆ ದೇವರೂ ನನ್ನ ಕ್ಷಮಿಸಲ್ಲ. ಧೈರ್ಯವಾಗಿರು’ ಎಂದುಬಿಟ್ಟರು. ಅಲ್ಲಿಗೆ ಕೆಂಗುಲಾಬಿಯಂತಹ ಮಗು ಇನ್ನೆರಡು ದಿನದಲ್ಲಿ ಕಾಯಂ ಆಗಿ ಆಸ್ಪತ್ರೆಯ ಮಂಚಕ್ಕೆ ಬರಲಿತ್ತು. ಉಷಾ ಎದುರಿಗಿದ್ದ ವೈದ್ಯರೇ ಸ್ವತಃ ದೇವರೇನೋ ಎನ್ನುವಂತೆ ಕಾಲು ಹಿಡಿದು ಕೂತು ಬಿಟ್ಟಿದ್ದಳು. ಅವರೂ ಕೈ ಬಿಡಲಿಲ್ಲ. ನಿಧಾನಕ್ಕೆ ಅವಳನ್ನೆಬ್ಬಿಸಿ ಕೂರಿಸಿ ನೀರು ಕುಡಿಸಿ, ‘‘ಪ್ರತಿ ಬಾರಿಯೂ ದೇವರು ನಮ್ಮನ್ನು ಪರೀಕ್ಷಿಸುತ್ತಾನಮ್ಮ. ಆದರೆ ಅಮ್ಮಂದಿರು ನಮ್ಮನ್ನು ಬದುಕಿಸುತ್ತಾರೆ. ನಿಮ್ಮ ಈ ನಂಬಿಕೇನೇ ನಮಗೆ ಪ್ರತಿ ಸಾರಿಯೂ ಕೊನೇ ಕ್ಷಣದವರೆಗೂ ಗುದ್ದಾಡಿಸುತ್ತದೆ. ನಾವು ಮತ್ತೆ ಮತ್ತೆ ಸಾವಿಗೆ ಧಿಕ್ಕಾರ ಕೂಗ್ತಿದೀವಿ…’’ ಎನ್ನುತ್ತಿದ್ದಂತೆ ಆಕೆ ಎದ್ದು ನಿಂತಿದ್ದಳು. ಉಳಿದದ್ದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ…