Saturday, December 12, 2015

ದೇವರು ಮತ್ತೊಮ್ಮೆ ಕಣ್ಣು ಹಾಕದಿರಲಿ...

ಯಾವ ಪಾಪ ಮಾಡದಿದ್ದರೂ ಬದುಕು ತಿರುಗಣಿಗೆ ಸಿಕ್ಕಿಬಿಡುತ್ತದೆ. ಕೆಲವೊಬ್ಬರ ಬದುಕಿನಲ್ಲಿ ಮಾತ್ರ ತುಂಬು ಚೆಂದದ ಘಳಿಗೆಗಳಲ್ಲೂ ಗಾಢವಾದ ವಿಷಾದವೊಂದು ಹಿನ್ನೆಲೆಯಾಗಿ ಉಳಿದೇ ಇರುತ್ತದಲ್ಲ ಅದು ಯಾವ ಕರ್ಮದ ಫಲ? ಎಲ್ಲ ಚೆಂದವಿದ್ದರೂ ಕೊನೆ ಮಾತ್ರ ಆಘಾತವೇ ಅದರೊಂದಿಗೆ ಬದುಕೂ. ಇದೇನು ದೇವರೂ ಕಣ್ಣು ಹಾಕಿಬಿಡುತ್ತಾನಾ...?

ಆ ಮಗು ಮಾತಿಗೂ ಮೊದಲು ಅಪ್ಪ.. ಅಪ್ಪ.. ಎನ್ನುತ್ತಾ ಓಡಾಡುತ್ತಿದ್ದರೆ, ಅವಳಪ್ಪನೂ ‘ಏನವಾ.. ಈಗ ಗಪ್ಪ ಕುಂಡ್ರಲಿಲ್ಲಂದರ ಬಾಯಿ ಒಡದ ಹೋಗತದ ನೋಡು. ಸುಮ್ನಿರತಿಯೋ ಇ..’ ಎನ್ನುತ್ತಾ ಪ್ರೀತಿಯಿಂದ ಗದರುತ್ತಿದ್ದ. ಬೆಳಗ್ಗೆಯಿಂದ ಸಂಜೆಯವರೆಗೂ ಅಪ್ಪ-ಮಗಳಿಬ್ಬರೂ ಗಲ ಗಲ ಎನ್ನುತ್ತ ಓಡಾಡುತ್ತಿದ್ದರು. ಆ ಹೊತ್ತಿಗಾಗಲೇ ಅರೆಬರೆಯಾಗಿ ಒಬ್ಬರಿಗೊಬ್ಬರು ಬದುಕಬೇಕು ಎಂದು ಅವರಿಬ್ಬರಿಗೂ ಗೊತ್ತಾಗಿಬಿಟ್ಟಿತ್ತು. ಅವರನ್ನುನೋಡುತ್ತಿದ್ದರೆ ಊರಿನ ಕುಟುಂಬಗಳು ಯಾವತ್ತೂ ಸಹಾಯಕ್ಕೆ ನಿಲ್ಲಲು ತಯಾರಿದ್ದವು. ಅದರಲ್ಲೂ ಆ ಮಗುವನ್ನು ಬೆಳೆಸುತ್ತಿದ್ದ ರೀತಿಗೆ ಯಾರೆಂದರೆ ಅವರು ವೆಂಕಣ್ಣನ ಮೇಲೆ ಅಭಿಮಾನ ಪಡುತ್ತಿದ್ದರು. ಮೇಲಾಗಿ ಬಡತನವನ್ನೇ ಹಾಸಿ ಹೊದೆಯುವ ಊರ ಮುಂದಿನ ಕಟ್ಟೆಯೇ ಇವತ್ತಿಗೂ ಜಾಗತಿಕ ಚರ್ಚೆಯ ವೇದಿಕೆಯಾಗುವ ಉತ್ತರ ಕರ್ನಾಟಕದಲ್ಲಿ ಸಂಬಂಧಕ್ಕೂ, ಗೌರವಕ್ಕೂ ತುಂಬ ಬೆಲೆ. ಯಾರನ್ನೂ ಏಕವಚನದಲ್ಲಿ ಮಾತಾಡಿಸುವ ಜನ ತುಂಬ ಕಮ್ಮಿ. ಕೊಂಚ ಓದಿಕೊಂಡವರನ್ನಂತೂ ‘ಬರ್ರಿ ಸಾಹೇಬ್ರ’ ಎಂದು ಮಾತಾಡಿಸುವ, ರೀ ಎಂದಿಲ್ಲದ ಭಾಷೆ ಇಲ್ಲಿ ಅಲಭ್ಯ.
ಅಪರಿಚಿತರು ಮತ್ತು ಹೊರ ಊರಿನವರಿಗೆ ತುಂಬು ಗೌರವ ಕೊಡುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೀವಂತಿಕೆ ಉಳಿದಿರುವುದು ಪ್ರತಿ ಮಾತಿನ ಕೊನೆಯಮ್ಮೆ ಅಪರಿಚಿತನೂ ಕಾಕಾ, ಮಾಮ, ಅತ್ತಿ, ಯವ್ವಾ, ಕಾಕಿ ಇತ್ಯಾದಿ ಸಂಬಂಧಿ ಉವಾಚಗಳಿಂದ.ಅಸಲಿಗೆ ನನಗೂ ವೆಂಕಣ್ಣನಿಗೂ ವಯಸ್ಸಿನಲ್ಲಿ ದಶಕಗಳ ಅಗಾಧ ವ್ಯತ್ಯಾಸ. ಆದರೆ ನನಗ್ಯಾವತ್ತೂ ಒಂದು ದಿವಿನಾದ ಬಂಧವನ್ನು ಏರ್ಪಡಿಸಿಕೊಳ್ಳಲು ಆಯಸ್ಸು, ಹಂತ, ಮಟ್ಟ, ಜಾತಿ, ದುಡ್ಡು ದುಗ್ಗಾಣಿ ಇದ್ಯಾವುದೂ ಅಡ್ಡ ಬಂದಿದ್ದೇ ಇಲ್ಲ. ಅವರ ವಿಶ್ವಾಸ ಮತ್ತು ಅಭಿಮಾನ ದೊಡ್ಡದು.
ಹಾಗಾಗಿ ರಸ್ತೆಯ ಮೇಲೆ ಅಬ್ಬೇಪಾರಿಯಂತಿರುವಾಗ ಕೌಟುಂಬಿಕ ಸಾಮರಸ್ಯದ ಹೊಸ ಹೊನಲಿಗೆ ನಮ್ಮನ್ನೂ ಸೇರಿಸಿಕೊಂಡು ನಮ್ಮ ಸಂಜೆಯ ಕಾರ್ಯಕ್ರಮಗಳಿಗೆ ಕೆಲಸಮಯ ಬ್ರೇಕು ಹಾಕಿಸಿದವನು ವೆಂಕಣ್ಣ.ಆವತ್ತು ದೀಪಾವಳಿ, ರಜೆಯ ದಿನವಾಗಿದ್ದರಿಂದ ನಾವೆಲ್ಲ ಹೊರಹೊರಡುವ ಯೋಚನೆಯಲ್ಲಿದ್ದರೆ ವೆಂಕಣ್ಣ ಎದುರಿಗೆ ನಿಂತು ‘ಎಲ್ಲಿ ಹೊಂಟ್ರೆಪಾ.. ದೀಪಾ ಹಚ್ಚೋದಿನು. ಬರ್ರಿ.. ಚಹಾ ಮಿರ್ಚಿ ಮಾಡೋಣು’ ಎನ್ನುತ್ತಾ ನಮ್ಮ ಯೋಚನೆಗಳ ಧಾಟಿ ಮತ್ತು ಕಾರ್ಯದ ದಿಕ್ಕು ಬದಲಿಸಿದವನು. ಅನಂತರದಲ್ಲಿ ಒಂದೊಂದಾಗಿ ವೆಂಕಣ್ಣನ ವಿಷಯ ನಿಧಾನಕ್ಕೆ ನನ್ನರಿವಿಗೆ ಬರುವ ಹೊತ್ತಿಗೆ ನಾನು ಸಲೀಸಾಗಿ ವೆಂಕಣ್ಣನ ಮನೆ ಹೊಕ್ಕು ಕೂತು ಚವಳಿಕಾಯಿ ಮುರಿಯುತ್ತಾ ‘ಇನೊಂದಸಲ್ಪ..ಬೇಕೇನು..? ನೀ ಉಳ್ಳಾಗಡ್ಡಿ ಜಜ್ಜಿಡು. ರೊಟ್ಟಿ ತಂದಬಿಡ್ತೇನಿ...’ ಎನ್ನುವಂತಾಗಿ ಹೋಗಿತ್ತು.ಚೆಂದದ ಸಂಸಾರದ ಮೇಲೆ ಅದ್ಯಾವ ಮಾರಿಯ ಕಣ್ಣು ಬಿತ್ತೋ ಗೊತ್ತಿಲ್ಲ. ಚೆಂದದ ಮಗು ವೆಂಕಣ್ಣನ ಪಾಲು ಮಾಡಿ ಅಂತೂ ಇಂತೂ ಹಡೆದಾಗಿನಿಂದ ಒಂದಲ್ಲ ಒಂದು ತಾಪತ್ರಯಕ್ಕೀಡಾಗುತ್ತಲೇ ಇದ್ದ ಅವನ ಹೆಂಡತಿ ಕಣ್ಮುಚ್ಚಿದ್ದಳು. ನಾಲ್ಕಾರು ದಿನ ಕಳೆಯುವ ಹೊತ್ತಿಗೆ ಮಗು ಬಂದವರಿಗೆ ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ ಅಂತ...’ ಎನ್ನುತ್ತಿದ್ದರೆ ಊರಿಗೆ ಊರೇ ಕಣ್ಣೀರಿಡುತ್ತಿತ್ತು. ವೆಂಕಣ್ಣ ಮಗುವನ್ನೆತ್ತಿಕೊಂಡು ರಸ್ತೆಗೆ ಬಂದು ಮುಗಿಲಿಗೆ ಮುಖಮಾಡುವುದನ್ನೇ ಬಿಟ್ಟುಬಿಟ್ಟಿದ್ದ.
ಹುಡುಗಿ ಅಪ್ಪನಿಗಂಟಿಕೊಂಡು ತನ್ನ ಗೊಣ್ಣೆ ಮೂಗನ್ನು ಅವನ ಬೆನ್ನಿಗೆ ಉಜ್ಜುತ್ತ, ಅಳು ಬಂದು ನಿಂತು ಕರೆಗಟ್ಟಿದ್ದ ಕೆನ್ನೆಯನ್ನು ಅವನ ಹೆಗಲಿಗೊರಗಿಸಿ ಅ ನಿದ್ರೆ ಮಾಡಿರುತ್ತಿದ್ದರೆ ಓಣಿಯ ಜನರೆಲ್ಲ ‘ವೆಂಕು ದೇವರು ಭಾಳ ಕೆಟ್ಟಂವ ಬಿಡಪಾ...’ ಎಂದು ಏಕಪಕ್ಷೀಯ ನಿರ್ಣಯ ಜಾರಿ ಮಾಡುವಂತಾಗಿತ್ತು. ದೇವರು ಅವನ ಜೀವನ ಪ್ರೀತಿಗೆ ತೆರಿಗೆ ಕೇಳಿಬಿಟ್ಟಿದ್ದ. ಹುಡುಗಿ ಹೈಸ್ಕೂಲು ಹೋಗುವ ಹೊತ್ತಿಗೆ ನಮ್ಮ ಮಧ್ಯೆ ಸಂಪರ್ಕ ಕಡಿದುಹೋಗಿತ್ತು. ಎರಡ್ಮೂರು ವರ್ಷದ ಹಿಂದೊಮ್ಮೆ ಕಾರ್ಯಕ್ರಮವೊಂದಕ್ಕೆ ಆ ಕಡೆಗೆ ಹೋಗಿz. ಕೊನೆಯಲ್ಲಿ ಕಾಯ್ದು ನಿಂತ ಕುರುಚಲು ಗಡ್ಡ. ಬಿಳಿಬಿಳಿ ತಲೆಯ ವೆಂಕಣ್ಣ ತಕ್ಷಣಕ್ಕೆ ಗುರುತು ಸಿಗದಂತಾಗಿದ್ದರೂ ಪರಿಚಯ ಹೇಳಿಕೊಂಡು ಮಾತಾಡಿಸಿದ್ದ. ಅವನ ಪರಿಸ್ಥಿತಿ ಮತ್ತು ಇತಿಹಾಸ ಗೊತ್ತಿದ್ದುದರಿಂದ ‘ವೆಂಕಣ್ಣ ಮನಿ ಕಡಿಗೆ ಬರ್ತೀನ್ರಿ.. ವ್
ಯಾಳಿzಗ ಒಂದು ಮಿಸ್ ಕಾಲ್ ಕೊಡ್ರಿ’ ಎಂದು ಬಂದಿದ್ದಾ. ಅದಾಗಿ ಒಂದೆರಡು ವರ್ಷದಲ್ಲಿ ಎರ್ಡ್ಮೂರು ಸರ್ತಿ ಮಾತಾಡಿz. ಕೊನೆಯ ಬಾರಿಗೆ ಮಾತಾಡಿದಾಗ ಮಗಳು ಫೋನ್ ತೆಗೆದಿದ್ದಳು. ಮಾತಾಡಲು ಏನೂ ಉಳಿದಿರಲಿಲ್ಲ. ಧಡಪಡಿಸಿ ಅತ್ತ ವೆಂಕಣ್ಣನ ಮನೆಯ ಕಡೆಗೆ ಕಾರು ಹರಿಸಿದ್ದಾ. ಹುಡುಗಿ ಬೆಳೆಯುತ್ತಲೇ ಪ್ರತಿಯೊಂದನ್ನೂ ಅರ್ಥಮಾಡಿಕೊಳ್ಳುತ್ತಾ, ಅಮ್ಮನ ನೆನಪಿನಿಂದ ಮನಸ್ಸು ಕಂಗೆಡುತ್ತಿದರೂ ಅವನಿಗೂ ನೋವಾಗದಂತೆ ಬೆಳೆದುಬಿಟ್ಟಿzಳೆ. ಒಪ್ಪವಾಗಿ ಓದಿಕೊಂಡ ಹುಡುಗಿ ಕೆಲಸ ಇತ್ಯಾದಿ ಎಲ್ಲದರಲ್ಲೂ ಅಚ್ಚುಕಟ್ಟಾಗಿ ಬೆಳೆದಿದ್ದಾಳೆ. ಕೈಗೆ ಸಾಕಷ್ಟು ದುಡ್ಡು ದುಗ್ಗಾಣಿ ಬರುತ್ತಿದ್ದಂತೆ ವೆಂಕಣ್ಣನಿಗೆ ಕೆಲಸ ಬೊಗಸೆ ಬಿಟ್ಟು ತನ್ನೊಂದಿಗಿರುವಂತೆ ಬಲವಂತವಾಗಿ ಕೂರಿಸಿಕೊಂಡು ಮಗಳೂ ಅಮ್ಮನೆ ಎನ್ನುವಷ್ಟು ಚೆಂದವಾಗಿ ಅವನ ಇಳಿ ವಯಸ್ಸಿನ ಸಂಜೆಗಳಿಗೆ ಅವನೊಂದಿಗೆ ಇದ್ದುಬಿಟ್ಟಿzಳೆ. ವೆಂಕಣ್ಣನಿಗೂ ಮನದ ತಾಯಿ ಇಲ್ಲದ ಹುಡುಗಿ ಎಂದು ಮುಚ್ಚಟೆಯಿಂದ ಬೆಳೆಸಿದ್ದನಲ್ಲ. ಮುಖ ಸಣ್ಣಗೆ ಮಾಡುತ್ತಾ ಕೂತಿರುತ್ತಾನೆ. ಮಡದಿಯ ಮೋಹಕ್ಕಿಂತ ಆಕೆಯಿzಗ ಜೀವನದಲ್ಲಿ ಬದುಕಿನ ಸಂಭ್ರಮ ಮತ್ತು ಮಗುವೊಂದರ ಬೆಳವಣಿಗೆಯಲ್ಲಿ ತಾಯಿ ವಹಿಸುವ ಪಾತ್ರವಿದೆಯಲ್ಲ ಅದರಲ್ಲೂ ಹೆಣ್ಣು ಮಗುವಿಗೆ ಅವಶ್ಯಕವಿದ್ದಷ್ಟು ಇನ್ನಾರಿಗೂ ಇರಲಿಕ್ಕಿಲ್ಲ.
ಕಾರಣ ಅಪ್ಪನಾದವನು ಅದೆಷ್ಟೇ ಮುಚ್ಚಟೆಯಿಂದ, ಮುತುವರ್ಜಿ ವಹಿಸಿ ಮಗುವನ್ನು ಬೆಳೆಸಿದರೂ ಹೆಣ್ಣು ಮಕ್ಕಳಿಗೆ ಅಮ್ಮನ ಮಡಿಲಿನ ಆರ್ದ್ರತೆ ಮತ್ತು ರಕ್ಷಣಾತ್ಮಕ ಭಾವವೇ ಬೇರೆ. ಆ ಸವೇಂದನಾತ್ಮಕ ಭಾವವಿಲ್ಲದ ಬೆಳವಣಿಗೆ ಯಾವಾಗಲೂ ಬದುಕಿನಲ್ಲಿ ಒಂದು ರೀತಿಯ ನಿರ್ವಾತವನ್ನು ಳಿಸಿಬಿಟ್ಟಿರುತ್ತದೆ. ಅಂಥಾ ಭಾವಕ್ಕೀಡಾಗುವ ಮಗುವು ಸಹಜವಾಗೇ ಅನಾಥವಾದ ಭಾವದ ಜೊತೆಗೆ ಅತೀವ ಪ್ರೀತಿಯ ನಿರೀಕ್ಷೆಯನ್ನೂ ಅಪೇಕ್ಷಿಸುತ್ತಿರುತ್ತದಲ್ಲ. ಅವೆಲ್ಲದರಿಂದ ವಂಚಿತವಾದ ಹುಡುಗಿಯ ಬದುಕು ಆದಷ್ಟೇ ಹಸನಾಗಿರಲಿ ಎಂದು ವೆಂಕಣ್ಣ ಅಪ್ಪ-ಅಮ್ಮ ಎಲ್ಲವೂ ಆಗಿದ್ದ. ಹುಡುಗಿ ಈಗ ಅವನನ್ನು ಥೇಟು ಅಮ್ಮನಂತೆ ನೋಡಿಕೊಳ್ಳತೊಡಗಿದ್ದಳು. ಅದರೆ ಎ ಒಂದು ಕಡೆಯಲ್ಲಿ ಅವಳಿಲ್ಲದಿರುವ ಭಾವ ವೆಂಕಣ್ಣನನ್ನು ಕಡೆಯವರೆಗೂ ಕಾಡುತ್ತಿತ್ತಾ ಗೊತ್ತಿಲ್ಲ. ಅದೆಷ್ಟೆ ಚೆಂದವಾದ ಬಂಧವಿದ್ದರೂ ಒಮ್ಮೆ ಮಗಳು ಜವಾಬ್ದಾರಿಯುತ ಸ್ಥಾನಕ್ಕೆ ಬರುತ್ತಿದ್ದಂತೆ ಮೂಕವಾಗಿ ಹೋಗಿದ್ದನಂತೆ. ಬಾಹ್ಯ ಜಗತ್ತಿಗೆ ಸಂಪರ್ಕ ಕಡಿದುಕೊಂಡವನಂತೆ ಇರುತ್ತಿದ್ದ ವೆಂಕಣ್ಣ ಆಕಾಶ ದಿಟ್ಟಿಸುತ್ತಾ ಕೂತು ಬಿಡುತ್ತಿದ್ದನಂತೆ. ಏನಾಗುತ್ತಿದೆ ಎನ್ನಿಸುವಷ್ಟರಲ್ಲಿ ಸ್ಟ್ರೋಕಿಗೆ ಒಳಗಾದ ವೆಂಕಣ್ಣ ಮತ್ತೆ ಹಿಂದಿರುಗಿಲ್ಲ.
ಸತತ ಒಂದು ತಿಂಗಳು ಒzಡಿದ ಜೀವ ಮಗಳನ್ನು ನೋಡುತ್ತಾ ಕಣ್ಣೀರಿಡುತ್ತಾ ನಿಶ್ಚಲವಾಗಿದೆ. ಹುಡುಗಿಗೆ ಈ ಬಾರಿ ಕಣ್ಣೀರು ತಡೆಯಲಾಗಿಲ್ಲ. ಯಾವತ್ತೂ ನಮ್ಮಪ್ಪ ನಮ್ಮಪ್ಪ ಎಂದು ಮಾತಿಗೊಮ್ಮೆ ಒರಲುತ್ತಿದ್ದವಳು ಅದಕ್ಕೆ ಅಪ್ಪನ ಪ್ರತಿಕ್ರಿಯೆ ಬಾರದಿದ್ದರೆ ಏನಾದೀತು..? ಕೊನೆಯ ದಿನಗಳಲ್ಲಿ ವೆಂಕಣ್ಣ ಏನೇನೋ ಹೇಳುವ ಭಾವಕ್ಕೀಡಾಗುತ್ತಿದ್ದ. ಆದರೆ ಪ್ರತಿ ಬಾರಿಯೂ ಮಾತು ಮತ್ತು ಧ್ವನಿ ಎರಡೂ ಕೈ ಕೊಡುತ್ತಿದ್ದವು. ಬರೆಯಲಂತೂ ಕೈ ಮೊದಲೇ ನಿಶ್ಚಲವಾಗಿದ್ದವು. ಮೂಕವಾಗಿ ರೋದಿಸುತ್ತಿದ್ದನಂತೆ. ನಾನು ಸುಮ್ಮನೆ ಕೂತುಬಿಟ್ಟಿz. ವೆಂಕಣ್ಣ ಬೆರಳು ತೋರಿಸುವಂತಹ ಯಾವ ಋಣಾತ್ಮಕ ಅಂಶವನ್ನೂ ಉಳಿಸಿರಲಿಲ್ಲ. ಹುಡುಗಿ ಯಾವತ್ತೂ ಅವನ ಮಡಿಲು ಬಿಟ್ಟು ಕದಲುವ ಊಹೆ ಅವನ ಮನಸ್ಸಿನ ಬಂದಿರಲಿಲ್ಲ. ತನ್ನ ನಂತರ ಏನು ಮಾಡುತ್ತೋ ಎನ್ನುವ ಯೋಚನೆ ಕಾಡಿಬಿಟ್ಟಿತ್ತು ತೀವ್ರವಾಗಿ ಅವನನ್ನು. ‘ಯಾವತ್ತೂ ಅವ್ವ ಇಲ್ಲ ಅನ್ನೋದನ್ನ ನನ್ನ ನೆನಪಿಗೆ ಬರದಂಗ ಅಪ್ಪ ನೋಡ್ಕೊಂಡಿದ್ದ. ಆದರ ಕೊನಿತನಕನೂ ಅವನಿಗೆ ಆಕಿನ್ನ ಮರೆಯೋದು ಅಗ್ಲೆ ಇಲ್ಲ. ನನಗ ಗೊತ್ತಿಲ್ಲದಂಗ ರಾತ್ರಿ ಹೊತ್ತು ಎದ್ದು ಹೊರಗ ಕಟ್ಟಿ ಮ್ಯಾಲೇ ಮುಖ ಮುಚ್ಚಿಕೊಂಡು ಕೂತಿರ್ತಿದ್ದ.
ಸರಹೊತ್ತಿನ್ಯಾಗ ಕತ್ತಲ ರಾತ್ರಿಯೊಳಗ ಎಂಥಾ ಗಂಡಸೂ ಒದ್ದಿಯಾಗಿ ಬಿಡ್ತಾನ. ಅಪ್ಪಂಗೂ ಅದರಿಂದ ಹೊರಗ ಬರ್ಲಿಕ್ಕೆ ಅಗಲಿಲ್ಲ ಅನ್ನಸ್ತದ. ಸಣ್ಣಿದ್ದಾಗ ಅವ್ವ ಮ್ಯಾಲಿದಾಳು ಅಂತ ನಾನು ಚಿಕ್ಕಿ ತೋರ್ಸ್ತಿz. ಅದನ್ನ ನೋಡ್ತಾ ಕೂರ್ತಿದ್ದ...’ ಮಾತು ಮುಂದಕ್ಕ ಹರಿಯದೆ ಭೋರೆಂದು ಅತ್ತುಬಿಟ್ಟಿದ್ದಳು ಹುಡುಗಿ. ‘ಅಳಬ್ಯಾಡ ಸುಮ್ನಿರವ್ವ.. ನಿಮ್ಮಮ್ಮಂಗ ನೀನು ಅಳೋದು ಬೇಕಿರಲಿಲ್ಲ. ಬಸಿರಿ ಹುಡುಗಿ ಏನಾರ ಮಾಡ್ಕೊಬ್ಯಾಡ. ನಿಮ್ಮಪ್ಪ ಹುಟ್ಟಿ ಬರತಾನು..’ ಎಂದು ತಿಳಿದದ್ದು ಹೇಳಿ ಎದ್ದು ಬಂದಿದ್ದಾ. ಕೆಲವೇ ದಿನದಲ್ಲಿ ಕರೆ ಬಂದಿತ್ತು.‘ಕಾಕಾ.. ನಮ್ಮಪ್ಪ ಎಲ್ಲೂ ಹೋಗಿಲ್ಲ.. ಮತ್ತ ಬಂದಾನು.. ನಮ್ಮಪ್ಪನಂಗ ಕರ್ರನ ಕೂದ್ಲ.. ಕೆಂಪ ಕೆಂಪ ಮಾರಿ’. ಹುಡುಗ ಹುಟ್ಟಿದ ಸಂಭ್ರಮಕ್ಕೆ ಮಾತಾಡುತ್ತ ಆಕೆ ಅಪ್ಪ ಅಮ್ಮನನ್ನು ಮತ್ತೆ ಕಾಣುತ್ತಿದ್ದರೆ ನಾನು ಮೂಕನಾಗಿz. ಹುಡುಗಿಯ ತೊದಲು ಮಾತು ಈಗಲೂ ಕಿವಿಯಲ್ಲಿ.. ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ...’ ಬಹುಶಃ ಈಗ ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕಿ ಇರಬಹುದೇನೋ. ಹುಡುಗಿ ಮಗುವಿಗೆ ಈಗ ಎರಡನ್ನೂ ತೋರಿಸುತ್ತಿzಳು. ದೇವರೇ ಮತ್ತೊಮ್ಮೆ ಕಣ್ಣು ಹಾಕದಿರು... ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

Monday, December 7, 2015

ಮನಸ್ಸು ಊನವಿಲ್ಲದಿರೆ ಬದುಕು ಬಂಗಾರ…

(ಅವರ ಮನೆ ಮಾತ್ರ ಮಾಸಿತ್ತು, ಮನಸ್ಸಲ್ಲ. ಬಹುಶಃ ಮನಸ್ಸಿನ ಸುಂದರತೆ ಎದುರಿಗೆ ದೈಹಿಕ ಕುರೂಪಗಳೂ ಸೇರಿದಂತೆ ಸರ್ವವೂ ಸಹ್ಯವಾಗುವುದು ಜೀವನದ ಬಗ್ಗೆ ಸ್ಪಷ್ಟ ಅವಗಾಹನೆ ಇದ್ದಾಗ ಮಾತ್ರವೇ. ಆದರೆ, ಊನ ಬದುಕಿನಲ್ಲೂ ಇನ್ನೊಬ್ಬರ ಬದುಕಿಗೆ ಊರುಗೋಲಾಗುವುದಿದೆಯಲ್ಲ ಅದನ್ನು ದೊಡ್ಡಮನಸ್ಸು ಮಾತ್ರ ನಿರ್ವಹಿಸಬಲ್ಲದು.)

ತೀರ ಅಪರಾತ್ರಿಯ ಹೊತ್ತಿನಲ್ಲಿ ಕಾರು ಓಡಿಸುವ ನನ್ನ ಉಮೇದಿಗೆ ತಡೆ ಬಿದ್ದಿದ್ದು ಏನಾದರೂ ತಿನ್ನಲೇಬೇಕೆನ್ನುವಷ್ಟು ಹಸಿವಾಗಿದ್ದಕ್ಕೆ. ಅದಕ್ಕಾಗಿ ಹುಬ್ಬಳ್ಳಿ ಹೊರವಲಯದಲ್ಲೇ ಕಾರು ತಿರುಗಿಸುವ ಬದಲಿಗೆ ಬಸ್​ಸ್ಟ್ಯಾಂಡಿಗೆ ತಿರುಗಿಸಿದ್ದೆ. ಅಂಥಾ ಅಪರಾತ್ರಿಯಲ್ಲೂ ಬೆಂಗಳೂರಿನ ಜಂಗುಳಿಯಷ್ಟೆ ಲಕಲಕ ಅನ್ನುತ್ತಿರುತ್ತದೆ ಹುಬ್ಬಳ್ಳಿ ಬಸ್​ಸ್ಟ್ಯಾಂಡು. ತೀರ ದೊಡ್ಡ ಹೋಟೆಲ್​ಗಳಿಲ್ಲದಿದ್ದರೂ ಚಿಕ್ಕ ತಳ್ಳು ಗಾಡಿಗಳಲ್ಲಿ ಅವಲಕ್ಕಿ, ಸೂಸಲಾ, ಇಡ್ಲಿವಡೆಗೆ ಖಂಡಿತಾ ಮೋಸ ಇಲ್ಲ ಅಲ್ಲಿ.
ಹಾಗೆ ಅಟೋಸ್ಟ್ಯಾಂಡಿನ ಪಕ್ಕದ ಅಂಗಡಿಯಲ್ಲಿ ಅವಲಕ್ಕಿ ತಿಂದು, ಟೀ ಕುಡಿದು ಇನ್ನೇನು ಕಾರು ಹತ್ತಬೇಕು.‘ಮೆಂದಳ್ಯಾರ ಹುಡುಗ ಅಲ್ರಿ ನೀವ್’ ಎಂದದ್ದು ಕೇಳಿಸಿ ನಿಂತೆ. ಅವಲಕ್ಕಿ ಕೊಟ್ಟವನು. ನಡೆಯುವಾಗ ಊನವಾದ ಕಾಲೆಳೆಯುತ್ತ ಬರುತ್ತಿದ್ದಾನೆ. ಹಳೆಯ ನೆನಪು ಸಳಕ್ಕನೆ ಮಗ್ಗಲು ಬದಲಿಸಿತ್ತು. ಹೌದೋ ಅಲ್ಲವೋ ಅನ್ನುವಷ್ಟರಲ್ಲಿ ಅವನೇ ‘ಮರತಿದಿ ಬಿಡಪಾ. ನಾ ಕುಂಟ ಬಸ್ಯಾ..ದಿನಾ ಬೆಳಗ್ಗೆ’ ಎನ್ನುತ್ತಿದ್ದಂತೆ ನಾನು ಮಾತುಮುರಿದು ‘ಎ.ಪಿ.ಎಂ.ಸಿ. ಯಾರ್ಡ..ಹಳ್ಯಾಳ ಕಾಲೇಜು ಕಟ್ಟಿ..ಕಲಘಟಗಿ ರಸ್ತೆ’ ಎಂದು ಪೂರ್ತಿಗೊಳಿಸಿದ್ದೆ. ಅಪೂಟು ಖುಷಿಯಾಗಿತ್ತು ಬಸವನಿಗೆ. ಸರಿಸುಮಾರು ಎರಡು ದಶಕದ ನಂತರದ ಭೇಟಿ ಅದು. ತೀರ ಪ್ರಕ್ಷುಬ್ಧತೆಯ ದಿನಗಳಲ್ಲಿ ನನ್ನ ಜೊತೆ ನೀಡಿದ್ದೂ ಅಲ್ಲದೆ ನನ್ನಲ್ಲಿ ಮತ್ತೆ ಮತ್ತೆ ಬದುಕಿನ ಅವಗಾಹನೆಯನ್ನು ಬದಲಿಸಿದವನು ಅವನು. ಹಾಗಾಗಿ ಮನಸಾರೆ ಅವನ ತಬ್ಬಿಕೊಂಡು, ‘ಏನೋ ಇದು..? ರಾತ್ರಿ ಹೊತ್ತಿನ್ಯಾಗ..? ಏನ್ ಧಂದೆ ಇದು..’ ಎಂದೆ. ‘ಏನೂ ಇಲ್ಲ, ಮನೀಗ ನಡಿ. ಬೆಳಗ್ಗೆ ಮನ್ಯಾಗ ನಾಸ್ಟಾ ಮಾಡಿ ಹೋಗುವಂತಿ’ ಎಂದ. ಅವನನ್ನು ಸಂಭಾಳಿಸಿ ಮತ್ತೆ ಖಂಡಿತವಾಗಿಯೂ ಮನೆಗೆ ಬರುವುದಾಗಿ ಮಾತು, ನಂಬರು ಎರಡೂ ಕೊಟ್ಟು ಬಂದಿದ್ದೆ. ಅದಾಗಿ ವರ್ಷಗಳೇ ಕಳೆದಿದ್ದವು. ನಿರಂತರ ಮಾತುಕತೆ ಜಾರಿಯಲ್ಲಿದ್ದವು. ಜತೆಗೆ ಇನ್ಯಾವತ್ತೂ ದಿನಪತ್ರಿಕೆಯಲ್ಲಿ ನನ್ನ ಬರಹ ಇದ್ದ ಪುಟವನ್ನು ಅವಲಕ್ಕಿ ಕಟ್ಟಲು ಬಳಸುವುದಿಲ್ಲ ಎನ್ನುವವರೆಗೂ ಅವನ ಭಾವುಕತೆ ಬೆಳೆದಿತ್ತು.
ವರ್ಷಗಳು ಸರಿಯಾಗಿ ತುಂಬುವ ಮೊದಲೇ ನಾನು ಮೆಟ್ರಿಕ್ ಕಟ್ಟೆ ಏರಿ, ಉಸಿರುಕಟ್ಟಿ ಸೆಕೆಂಡ್ ಕ್ಲಾಸಿನ ಮೊದಲ ಮೆಟ್ಟಿಲ ಮೇಲೆ ನಿಂತೆದ್ದು ಹೊರಬಿದ್ದಿದ್ದೆನಲ್ಲ. ಬದುಕಿಗೆ ಯಾವುದೇ ಗೊತ್ತು ಗುರಿ, ನಿರ್ದಿಷ್ಟ ಭರವಸೆ ಇಲ್ಲದ ದಿನಗಳವು. ವಕೀಲನಾಗಬೇಕೆನ್ನುವ ಗುಪ್ತ ಬಾಲ್ಯದಾಸೆ ಯಾವತ್ತೋ ಮುರುಟಿ ಹೋಗಿತ್ತು. ತಾಂತ್ರಿಕ ತರಬೇತಿ ಭವಿಷ್ಯತ್ತಿನಲ್ಲಿ ಅನ್ನ ನೀಡುತ್ತದಾ ಗೊತ್ತಿರಲಿಲ್ಲ. ಆದರೆ, ಆ ದಿನಗಳಲ್ಲಿ ಮಾಸಕ್ಕೆ ಐವತ್ತು ರೂಪಾಯಿ ಸ್ಟೈಪಂಡು ಬಹುದೊಡ್ಡ ಆಕರ್ಷಣೆಯಾಗಿದ್ದು ಸುಳ್ಳಲ್ಲ. ಬಸ್ ವ್ಯವಸ್ಥೆ ಇಲ್ಲದ ಕಾರಣ ಸತತ ಎರಡು ವರ್ಷ ಬೆಳಗ್ಗೆ ಎರಡೂವರೆ ಗಂಟೆ ಕಾಲ ಕಾಲೇಜು ಕಟ್ಟೆ ಮೇಲೆ ಕೂತು ಕಳೆಯುವ ಅನಿವಾರ್ಯತೆಗೆ ಒಡ್ಡಿಕೊಂಡಾಗಿತ್ತು.
ಅದರ ಬದಲಿಗೆ ಸೈಕಲ್ಲು ಬಳಸುವುದಾ, ಇನ್ಯಾವುದಾದರೂ ಟೈಪಿಂಗ್ ಕಲಿಯುವುದಾ, ಮಾರ್ನಿಂಗ್ ಕೋರ್ಸ ಇಂಥಾ ಯಾವುದೇ ಆಯ್ಕೆ, ಸಮಯ ಸದುಪಯೋಗದ ಅವಕಾಶಗಳು ನನ್ನೆದುರಿಗಿರಲಿಲ್ಲ. ಅಸಲಿಗೆ ಅಂಥ ಅವಶ್ಯಕತೆಗಳನ್ನು ರೂಪಿಸಿಕೊಂಡು ಏನಾದರೂ ಮಾಡಿಕೊಳ್ಳಬಹುದೆನ್ನುವ ಕಾರ್ಯವಾಹಿ ಯೋಚನೆಗಳನ್ನು ಮಾಡುವ ಪರಿಸ್ಥಿತಿಯಲ್ಲೂ ನಾನಿರಲಿಲ್ಲ. ಹೀಗಾಗಿ ಕೂತೆದ್ದು ಹೊರಡುವ ಅನಿವಾರ್ಯತೆಯಲ್ಲಿದ್ದಾಗ ಹತ್ತಿರದ ಹಳ್ಳಿಯಿಂದ ಬರುತ್ತಿದ್ದ ಬಸವ ಜೊತೆಗಾರನಾಗುತ್ತಿದ್ದ. ಹೆಚ್ಚಿನಂಶ ಬಲಗಾಲು ಊನವಾಗಿದ್ದು ಅವನು ‘ಕುಂಟಬಸ್ಯಾ’ ಎನ್ನುವ ವಿಶೇಷಣಕ್ಕೆ ಈಡಾಗಿದ್ದ. ಅವನಿಗೆ ಹೆಚ್ಚಿನಂಶ ನನ್ನೂರಿನ ಎಲ್ಲ ವಿವರಗಳೂ ಗೊತ್ತಿದ್ದವು. ಅದೇನೂ ದೊಡ್ಡ ವಿಷಯವಲ್ಲ ಅಕ್ಕಪಕ್ಕದ ಹಳ್ಳಿಗಳ ವಿಷಯ ಹಂಚಿಕೆಯಾಗುವುದು. ಅವನ ಲೆಕ್ಕದಲ್ಲಿ ನಾನು ಶಾಣ್ಯಾ ಹುಡುಗ ಆಗ. ‘ನಿಮಗೇನ್ ಬಿಡಪಾ. ನೀವೆಲ್ಲ ಹುಡುಗರು ಶಾಣ್ಯಾ ಅದೀರಿ. ಓದೋದು ಮಾಡಿದರ ನೌಕರಿ ಸಿಕ್ತಾವೇಳು..’ ಎನ್ನುತ್ತಿದ್ದ. ಆದರೆ ಅದಕ್ಕೆ ಪಕ್ಕಾಗುವ ಪರಿಸ್ಥಿಯಲ್ಲಿ ನಾನಿರಲಿಲ್ಲ. ಆ ಮಾತು ಬೇರೆ. ಆದರೆ ಬಸವನ ಪರಿಸ್ಥಿತಿ ಇನ್ನೂ ಗಂಭೀರವಿತ್ತು. ಅಕ್ಷರ ತಲೆಗೇರುತ್ತಿರಲಿಲ್ಲ. ಕೆಲಸಕ್ಕೆ ದೇಹ ಶಿಥಿಲ. ಕಾಲು ಸಹಕರಿಸುವುದಿಲ್ಲ. ಭವಿಷ್ಯದಲ್ಲಿ ಬದುಕು ಹೇಗೆ ಎನ್ನುವುದರ ಅರಿವು ಅಪೂಟ ಇರಲಿಲ್ಲ. ಅಲ್ಲಿಂದೀಚೆಗೆ ಯಾವ ಮಾಹಿತಿಯೂ ಇಲ್ಲದೆ ನಾನು ಊರು ಬಿಟ್ಟಮೇಲೆ ಸಂಪರ್ಕ ಕಡಿದೇ ಹೋಗಿತ್ತು.
ಇದಾದ ವರ್ಷದ ಮೇಲೆ ಬಸವನಿಗೆ ಬರುತ್ತಿದ್ದೇನೆ ಎಂದೆ. ‘ನಾಸ್ಟಾಕ್ಕ ಬಂದಬಿಡ’ಎಂದ. ಮನೆಯಲ್ಲಿ ‘ಗಾಡಿ ಅಂಗಡಿ ಅವಲಕ್ಕಿ ಅಲ್ಲ. ನಮ್ಮನ್ಯಾಗ ಮಾಡಿದ್ದೋ. ತಗೋ ಮಸರ ಹಾಕ್ಲೇನು.. ಚಲೋ ಶಟಗೊಂಡವರಂಗ ತಿಂತಿ ಬಿಡಪಾ..’ ಎನ್ನುತ್ತ ಜುಲುಮಿ ಮಾಡಿದ್ದ. ಬಸವನ ಮಗ ಹೈಸ್ಕೂಲಿಗೆ ಹೊರಟಿದ್ದವನು ನಮಸ್ತೆ ಅಂಕಲ್ ಎಂದು ಚುರುಕಾಗಿ ಸರಿದು ಹೋಗಿದ್ದ. ಅಂದರೆ ಬಸ್ಯಾನ ಮದುವೇನೂ ಆಗಿದೆ. ಕೂತಲ್ಲಿಂದಲೇ ಕಣ್ಣು ಹರಿಸಿದೆ. ಮಾಸಿದ ಬದುಕು ಅವನಷ್ಟೆ ಊನವಾಗಿದ್ದಂತೇನೂ ಕಾಣಲಿಲ್ಲ. ಆದರೆ ಬಣ್ಣ ಕಾಣದ ಗೋಡೆಗಳು. ಚಿಕ್ಕ ಹಾಲ್​ನಂತಹ ಜಾಗದಲ್ಲೇ ಧೂಳು ಹಿಡಿದ ಟಿ.ವಿ. ಪರದೆಗಳು. ಬಣ್ಣ ಬದಲಿಸಿದ್ದ ನೆಲ. ದಿನವಹಿ ಹೋಟೆಲ್ ಕೆಲಸ ಅಲ್ಲೇ ನಡೆಯುತ್ತಿದ್ದುದು ಸ್ಪಷ್ಟ. ಮಾಸಲು ಮಾಸಲಾಗಿದ್ದ ಸೋಫಾದ ಹಿಂದಿದ್ದ ಗೋಡೆಯ ಮೇಲೆ ‘ಬಸವ ಬುಕ್​ಸ್ಟಾಲ್’ ಎನ್ನುವ ಫ್ರೇಮು ಹಾಕಿದ ಫೋಟೊ. ಇದ್ಯಾವ ಹೊಸವೇಷ ಎನ್ನುತ್ತ ಅವನತ್ತ ನೋಡುತ್ತಿದ್ದಂತೆ,
‘ಅಣ್ಣಾ.. ಯಾವಾಗ್ಲೂ ಮೆಂದಳ್ಯಾರ ಹುಡುಗ ಬಂದಿದ್ದ ನಮ್ಮ ಅಂಗಡಿಗೆ ಅಂತಿರ್ತಾರು. ಮನೀಗೇ ಬಂದ್ರಿ ಇವತ್ತು ಭಾಳ ಚಲೋ ಆತು. ಬಸವ ಹೇಳತಿರ್ತಾನ…’ಎನ್ನುತ್ತಿದ್ದಂತೆ ನಾನು ಎದ್ದು ಗೌರಿ ಕೂತಲ್ಲೇ ಹೋಗಿ ಹಾಸಿದ್ದ ಜಮಖಾನೆ ಮೇಲೆ ಕಾಲು ಚಾಚಿದ್ದೆ.
ಊರಲ್ಲಿ ಅವಹೇಳನ ಮತ್ತು ಯಾವ ಕೆಲಸಕ್ಕೂ ಬಾರದ ಬಸವ ಅದ್ಯಾಕೋ ಹುಬ್ಬಳ್ಳಿಗೆ ಹೋದವನಿಗೆ ಅಚಾನಕ್ ಆಗಿ ಇಂಥದ್ದೊಂದು ಯೋಚನೆ ತಲೆಗೆ ಬಂದಿದೆ. ಊರು ಬಿಡದೆ ಉದ್ಧಾರವಾಗುವುದಿಲ್ಲ ಎನ್ನುವುದನ್ನು ಅರಿತವನು ಇದ್ದಕ್ಕಿದ್ದಂತೆ ಕಾಲು ಹೊಸೆಯುತ್ತ ಹೊರಬಿದ್ದಿದ್ದಾನೆ. ಹಗಲು ಕೆಲಸಕ್ಕಿಂತ ರಾತ್ರಿ ಕೆಲಸ ಮತ್ತು ಇಂಥಾ ಜಾಗದಲ್ಲಿ ಹೋಟೆಲ್ ನಡೆಸುವುದು ಸುಲಭ ಅನ್ನಿಸಿದರೂ ಬಂಡವಾಳ ಇಲ್ಲದೆ ಮೊದಲ ಎರಡು ವರ್ಷ ಏನೂ ಮಾಡಲಾಗಿಲ್ಲ. ಮತ್ತೆರಡು ವರ್ಷ ಕಳೆಯುವಷ್ಟರಲ್ಲಿ ಚಿಕ್ಕದೊಂದು ಕೈಗಾಡಿ ಬಾಡಿಗೆಗೆ ಪಡೆದು ಬ್ರೆಡ್-ಆಮ್ಲೇಟ್ ಅಂಗಡಿ ಆರಂಭಿಸಿದ್ದಾನೆ. ಆರಂಭದಲ್ಲಿ ಸ್ವತಃ ಕಾಲು ಊನವಿದ್ದ ಬಸವನಿಗೆ ಕೆಲಸದ ಜವಾಬ್ದಾರಿ, ಸಾಮಾನು ತರುವುದು, ನಿರ್ವಹಣೆ ತೀರ ಕಷ್ಟಕ್ಕೀಡು ಮಾಡಿದ್ದು ಹೌದಾದರೂ ಜತೆಗಿದ್ದ ಸಹಾಯಕ ಹುಡುಗ ಮತ್ತು ಇತರ ಸ್ನೇಹಿತರು ಕ್ರಮೇಣ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇದರ ಮಧ್ಯೆ ಸಂಕ್ರಮಣ ಕಾಲ ಎನ್ನುವಂತೆ ಬದುಕು ಸಾಗಿಸಲು ಅವಶ್ಯ ಎನ್ನಲು ಪಳೆಯುಳಿಕೆ ಎನ್ನುವಂತಿದ್ದ ಖೋಲಿಯ ಆಚೇಗಿದ್ದ ಗೌರಿ ಅವನ ಬದುಕಿಗೆ ಕಾಲಿರಿಸಿದ್ದಾಳೆ. ದೈಹಿಕ ಊನಸ್ಥಿತಿಯ ಕಷ್ಟ ಸುಖದ ಅರಿವಿದ್ದ ಬಸವ ಗೌರಿಯನ್ನು ಬಗಲಿಗೆ ಕಟ್ಟಿಕೊಂಡಿದ್ದಾನೆ.
ಅವನ ಹೆಂಡತಿ ಕೂತಲ್ಲಿಂದಲೇ ಎರಡೂ ಕೈಗಳಿಂದ ದೇಹ ಸರಿಸುತ್ತ ಈಚೆ ಬಂದಳು. ಬೆಪ್ಪಾಗಿ ನೋಡುತ್ತಿದ್ದೆ ನಾನು. ಸೌಂದರ್ಯಕ್ಕೂ ಸಂಸಾರಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಅವರ ಮಧ್ಯೆ ಇದ್ದ ಹುಡುಗ ಸ್ಪಷ್ಟಪಡಿಸಿದ್ದ. ಬಸವನಿಗೆ ಒಂದು ಕಾಲು ಊನವಿದ್ದರೆ ಗೌರಿಗೆ ಎರಡೂ ಕಾಲಿಲ್ಲ. ಬದುಕು ಮಾತ್ರ ದಿವಿನಾಗಿ ನಡಿತಿದೆ.
‘ಏನಿಲ್ಲ. ಕೈಗಾಡಿ ಅಂಗಡಿ ನಡಸ್ತೀನಿ ಅಂದರೆ ಶಾಲ್ಯಾಗ ಅಡ್ಮಿಷನ್ ಸಿಗವಲ್ದು. ಅದಕ್ಕ ಈ ಅವತಾರ. ನಾನು ಮೊದಲ ಹೆಳವ. ನಂದು ಈಕಿದು ಬದುಕು ಹೆಂಗೋ ನಡಿಲಿಕ್ಕ ಹತ್ತೇದ. ಆದರ ಶಾಲ್ಯಾಗ ನಮ್ಮಪ್ಪ ಕೈಗಾಡ್ಯಾಗ ಅವಲಕ್ಕಿ ಮಾರ್ತಾನ ಅಂದರ ವಾರಗಿ ಹುಡುಗರು ಮರ್ಯಾದಿ ಕಳಿತಾರು ಅನ್ನೊ ಅಂಜಕಿ. ಅಷ್ಟ್ಯಾಕ ಸಾಲಿ ಒಳಗನೂ ಬರಬ್ಯಾಡ ಅಂತಾರ. ನಮಗ ಇಂಗ್ಲಿಷು ತಲಿಗ ಹತ್ತಲಿಲ್ಲ. ಗಣಿತ ಅಂತೂ ಮದಲ ಬರ್ಲಿಲ್ಲ. ಮಕ್ಕಳೂ ಹಂಗ ಆಗೋದು ಬ್ಯಾಡ. ಅದಕ್ಕ ಹೆಸರಿಗೊಂದಿರ್ಲಿ ಅಂತಾ ಬಸವ ಬುಕ್​ಸ್ಟಾಲ್. ಖಾಲಿ ಹೊತ್ತಿನ್ಯಾಗ ಗೌರಿ ಹೋಗಿ ಕುಂದರ್ತಾಳು’ ಎನ್ನುತ್ತಿದ್ದರೆ ನೆಲದ ಮೇಲೆ ಹೊಸೆದು ಆಚೀಚೆ ಸರಿಯುತ್ತಿದ್ದ ಗೌರಿ ನುಡಿದ್ದದ್ದು ಇನ್ನೂ ಕಿವಿಯಲ್ಲಿ ಗುಂಯ್ಗುಡುತ್ತಿದೆ.
‘ಮೊದಲೇ ಕಾಲ ಇಲ್ಲದ ಗುದ್ದಾಡತಿದ್ದಾಂವ, ಎರಡೂ ಕಾಲಿಲ್ಲದ ನನ್ನಂಥಾಕಿನ ಕಟಕೊಂಡು ಏನು ಸುಖಾ ಸುರಕೋತಿ ಅಂದರೂ ಕೇಳಲಿಲ್ಲ ಅಣ್ಣಾ. ಉಳಿದವರಿಗಿಂತ ನಿನ್ನ ಜೊತಿಗೆ ಬದುಕು ಚೆಂದ ಇರ್ತದ ಬಾ. ಎಲ್ಲ ಇದ್ದವರು ಇವತ್ತು ಏನೂ ಇಲ್ಲದಂಗಿರೋದು ಕಾಣ್ತದ. ಅಂಥಾದರಾಗ ನಿಂದೇನೂ ದೊಡ್ಡದಲ್ಲ. ಇರೋದರಾಗ ಚೆಂದಕ ಇರೋಣ ಅಂದ..’ ಎಂಥಾ ಮಾತು. ಅವಳ ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ.
ಕುಂಟ ಬಸ್ಯಾ.. ಅಲ್ಲ ಬಸವ ಬೃಹದಕಾರವಾಗಿ ಬೆಳೆದು ನಿಂತಿದ್ದ. ತನ್ನ ಊನತೆಯಾಚೆಗೂ ಬೆಳೆದು ಗೌರಿಯನ್ನು ಮದುವೆಯಾಗುವುದರ ಮೂಲಕ ಔನ್ನತ್ಯವನ್ನು ದಾಟಿದ್ದ. ಗೌರಿ ಮುಖದಲ್ಲಿ ಥೇಟ್ ಅಮ್ಮಂದಿರ ನೆಮ್ಮದಿ. ಅದಕ್ಕೂ ದೊಡ್ಡದು ಕಣ್ಣಲ್ಲಿ ಸಂತಸದ ಪುಟ್ಟ ಕಿರುನಗೆ. ದೇವರು ಮರೆತು ದೇಹ ಊನ ಮಾಡಿದರೂ ಅವರ ಮನಸ್ಸನ್ನು ಮಾತ್ರ ಬಸವನಂತಿರಿಸಲಿ..
ಕಾರಣ
ಅವಳು ಎಂದರೆ..

(ಲೇಖಕರು ಕಥೆ-ಕಾದಂಬರಿಕಾರರು)

Monday, November 30, 2015

ಸೌಜನ್ಯರಹಿತ ರ೦ಗಿನ ಬದುಕು...


ಹಾಯ ಸಾವಿರಾರು ಜನಕ್ಕೆ ಬೇಕಿದೆ. ಆದರೆ ಕೈಚಾಚಲು ಸಿದ್ಧರಿರುವವರು ಕೆಲವರು ಮಾತ್ರ. ಅದರಲ್ಲೂ ಕೆಲಸ ಇಲ್ಲದ ಗ೦ಭೀರ ಸನ್ನಿವೇಶದಲ್ಲಿ ಜೊತೆಗೆ ನಿ೦ತು ಕಾಯ್ದವರನ್ನು ಉಡಾಫೆಯಿ೦ದ ಮರೆತು ಬಿಡುವವರ ಕೃತಘ್ನತೆಯಿ೦ದ, ಭವಿಷ್ಯದಲ್ಲಿ ಅಗತ್ಯವಿದ್ದವರಿಗೆ ಸಹಾಯ ಲಭ್ಯವಾಗದೆ ಸ೦ಕಟಕ್ಕೀ ಡಾಗುತ್ತಾರಲ್ಲ. ಆ ಪಾಪವೂ, ನಿಟ್ಟುಸಿರೂ ಇವರನ್ನು ತಟ್ಟದಿರುತ್ತದೆಯೇ..?
"ನೀನು ಒ೦ದು ಮಾತು ಹೇಳಿದರೆ ಕೆಲಸ ಆಗುತ್ತೆ..? ಆದರೆ ಮುಜುಗರವಾಗಿ ಸುಮ್ಮನಾಗಿದ್ದೆ. ಮಗೂಗೆ ಸ್ಕೂಲು ಶುರುವಾಗಿ ಎರಡ್ಮೂರು ದಿನ ಆಗಿದೆ. ಬೇರೆ ಮಕ್ಕಳನ್ನು ನೋಡಿ ದಿನಾ ಗಲಾಟೆ ಮಾಡ್ತಿದಾನೆ. ಸ್ಕೂಲಿಗೆ ಹೋಗ್ಬೇಕು ಅ೦ತಾ.. ನನ್ನ ಪ್ರಾಬ್ಲ೦ ಸಾಲ್ವ ಅಗ್ತಿಲ್ಲ..' ಎ೦ದಾಕೆ ಪ್ರವರ ಹೇಳಿಕೊಳ್ಳುತ್ತಿದ್ದರೆ, ನಾನು 
     "ಮಕ್ಕಳು ಮತ್ತು ಶಾಲೆಯ ವಿಷಯದಲ್ಲಿ ಏನಾದರೂ ಮಾಡೋಣ. ನೀನು ಕೆಲಸ ಹುಡುಕಿಕೋ' ಎನ್ನುತ್ತ ಆಪತ್ಕಾಲದ ಸ್ನೇಹಿತರ ಮೂಲಕ ಮಗುವಿನ ಶಾಲಾ ಫೀಸು ಕಟ್ಟಿಸಿ, ಹುಡುಗಿ ತೀರಾ ಪೆ ಟ್ರೋಲ್‍ಗೂ ಪರದಾಡುತ್ತಿದ್ದುದರಿ೦ದ ಮೊಬ್ಯೆಲ್ ಕರೆನ್ಸಿ ಹಾಕಿಸಿ, ಮಿಸ್ ಕಾಲ್ ಮಾತ್ರ ಕೊಡುವ೦ತೆ ಹೇಳಿ ಎದ್ದು ಬ೦ದಿದ್ದೆ. 
   ನಾನು ಜಾಲಹಳ್ಳಿಯಿ೦ದ ಸೈಕಲ್ಲು ಹೊಡೆಯುತ್ತಿದ್ದಾಗ ಗೌಡರ ಮನೆಯಲ್ಲಿ ತು೦ಡು ಲ೦ಗ ಹಾರಿಸಿಕೊ೦ಡು ಓಡಾಡುತ್ತಿದ್ದ ಹುಡುಗಿ ಸೌಭಾಗ್ಯ. ಅದು ಎಲ್ಲರ ಬಾಯಲ್ಲಿ ಭಾಗಿ ಎ೦ದಾಗಿತ್ತು. ಓದುವುದಕ್ಕಿ೦ತ ರಸ್ತೆಯ ಮೇಲೆ ಜಾಸ್ತೀ ಇರುತ್ತಿದ್ದಳು. ನಮ್ಮ ನಡು ಮಧ್ಯಾಹ್ನದ, ಬೆಳಗುಗಳಿಗೆ ಆಡಿಕೊಳ್ಳುತ್ತ "ಅದೇನು ರಾತ್ರಿಯಿಡಿ ಕೆಲ್ಸಾ ಮಾಡ್ತೀರೊ. ಹಗಲೆಲ್ಲ ಮಲ್ಗಿರೋ ನಿಮ್ಮನ್ನು ನ೦ಬಿಕೊ೦ಡು ಕ೦ಪನಿ ಉದಾಟ್ಧರ ಆದ೦ಗೆ' ಎ೦ದು ಒ೦ದೇ ಡೈಲಾಗಿನಲ್ಲಿ ನಿವಾಳಿಸುತ್ತಿದ್ದಳು. 
    "ಅಯ್ಯೋ.. ಅವ್ರಿಗ್ಯಾಕೆ ತ್ರಾಸು ಕೊಡ್ತಿ ಪಾಪ ಹುಡುಗರು ನೈಟ್‍ಶಿಫ್ಟಲಿ ಇತಾ೯ರೆ. ಬೆಲ್ ಮಾಡಿ ಎಬ್ಬಿಸಬೇಡ' ಎ೦ದವರಮ್ಮ ಜೋರು ಮಾಡ್ತಿದ್ದರೆ, "ಅಮ್ಮ ಇವೆ್ರಲ್ಲ ಸ೦ಜೆ ಹೊತ್ತಿಗೇ ಬಿಯರು ಕುಡಿದು ಕೆಲ್ಸಕ್ಕೆ ಹೋಗ್ತಾರೆ' ಎ೦ದು ನಮ್ಮನ್ನೆಲ್ಲ ಸರಾಗವಾಗಿ ಹರಾಜಿಗಿಡುತ್ತಿದ್ದಳು. ಹುಡುಗಿಯ ಡಿಗ್ರಿಗೂ ಮೊದಲೇ ಅಪಾರ ಸ೦ಪತ್ತಿನ ಮನೆತನ ಸಿಕ್ಕು ಮದುವೆ ಮಾಡಿದ್ದಾರೆ. ಅದರಾಚೆಗೆ ನಾವೂ ನಮ್ಮದೇ ಬದುಕಿನ ತಿರುಗುಣಿಗೆ ಸಿಕ್ಕು ಎಲ್ಲೆಲ್ಲೋ ತಲುಪಿಕೊಳ್ಳುತ್ತಿದ್ದ೦ತೆ ಮನಸ್ಸಿನಿ೦ದಲೂ, ನಮ್ಮ ಇತಿಹಾಸದ ಪುಟಕ್ಕೂ ಸೇರಿಹೋಗಿದ್ದಳು ಸೌಭಾಗ್ಯ.
   ದಶಕಗಳ ತರುವಾಯ ಸ೦ಪಕ೯ಕ್ಕೆ ಬ೦ದಾಗ,"ಎಲ್ಲ ಬಿಟ್ಟು ಮನೆಯಲ್ಲಿದ್ದೇನೆ' ಎನ್ನಬೇಕೆ..? ಚಿಕ್ಕದಾದ ಒ೦ದು ರೂಮಿನ ಮನೆಯನ್ನು ಬಾಡಿಗೆಗೆರಿಸಿಕೊ೦ಡು, ಮನೆಯ ತು೦ಬ ಪುಸ್ತಕ ಹರಡಿಕೊ೦ಡ ಭಾಗಿ, ಸೊಫಾ ದ ಮೇಲೆ ಕಲೆಗಟ್ಟಿದ್ದ ಊಟದ ತಟ್ಟೆ, ಪಕ್ಕದ ಚಿಕ್ಕ ಟೇಬಲ್ಲಿನ ಮೇಲೆ ಯಾವಾಗಿನದ್ದೋ ಕಾಫಿ ಲೋಟ, ಕೈಯೊರೆಸಿ ಅಲ್ಲಿಯೇ ಬಿಟ್ಟು ಕಪ್ಪಗಾಗಿದ್ದ ಟವಲ್ಲು, ರೂಮಿನಾಚೆಗೆ ಕಾಣಿಸುತ್ತಿದ್ದ ಕೆದರಿದ್ದ ಬೆಡ್‍ಶೀಟು.. ಬದುಕು ಆಸ್ಥೆ ಕಳೆದುಕೊ೦ಡ ಅವಸ್ಥೆ ಎದ್ದು ಕಾಣುತ್ತಿತ್ತು. ಆಗಿದ್ದಿಷ್ಟು..
    ಓದು, ಸಾಹಿತ್ಯ ಇತ್ಯಾದಿ ಆಸಕ್ತಿಯ ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೂ ಅ೦ತಹದ್ದೇ ವಾತಾವರಣ ಸಿಗುವುದು ಕಡಿಮೆಯೇ. ಅದರಲ್ಲೂ ಓದಿಕೊ೦ಡ ಜ್ಞಾನದ, ತನಗೆಲ್ಲವೂ ಗೊತ್ತೆನ್ನುವ ಠೋ೦ಕಾರದ ಎದುರಿಗೆ ಸ೦ಸಾರಗಳು ಬರಕತ್ತಾಗಿದ್ದು ಕಡಿಮೆ. ಕಾರಣ ದಾ೦ಪತ್ಯ ಎನ್ನುವುದು ಅಪಾರ ತಾಳೆ್ಮಯನ್ನೂ, ಅಹ೦ನ್ನು ಅಪೂಟು ಬದಿಗಿಟ್ಟು ಬದುಕುವ ಸ್ಥಿಮಿತತೆಯನ್ನೂ ಬೇಡುತ್ತದೆ. ಫೆಮಿನಿಸ೦ನ ಅವತಾರಗಳೇನೇ ಇದ್ದರೂ, ಅದನ್ನೇ ಮನೆಯೊಳಗೂ ಅಪೆ್ಲ„ ಮಾಡ್ತೀನಿ ಎನ್ನುವ ಎಡಬಿಡ೦ಗಿತನಕ್ಕೆ ನಿ೦ತರೆ ಸ೦ಸಾರದ ಹಡಗು ಎಕ್ಕುಟ್ಟು ಹೋಗುವುದರಲ್ಲಿ ಸ೦ಶಯವೇ ಇಲ್ಲ. ಸಿOಉೀವಾದದ ಭಾಷಣಗಳೇನಿದ್ದರೂ ವೇದಿಕೆಗೂ, ಭರಪೂರು ಚಪ್ಪಾಳೆಗೂ ಬಾಕಿಯಿರಿಸಿಕೊ೦ಡು, ಮನೆಯಲ್ಲಿ ಚೆ೦ದವಾಗಿ ಸ೦ಸಾರ ನಡೆಸುವ ಸೋಕಾಲ್ಡ್ ಫೆಮಿನಿಸ್ಟು ಸ್ನೇಹಿತೆಯರು ನನಗಿದ್ದಾರೆ. ಕ್ಷಣಾಧ೯ದಲ್ಲಿ ಕಳೆದು ಹೋಗುವ ಬದುಕಿನಲ್ಲಿ ಇಸ೦ಗಳು ಯಾವತ್ತೂ ಸೌ೦ದಯ೯ವನ್ನು ಹೆಚ್ಚಿಸಿದ್ದು ನಾನು ಕ೦ಡಿಲ್ಲ. ಬದುಕಿನಲ್ಲಿ ಏನೇ ಆಗಿದ್ದರೂ ಬಾಯಿಗೆ ಬ೦ದ೦ತೆ ಪುರುಷರನ್ನೂ, ತಮ್ಮ ಮನಸ್ಸಿನ ಕಹಿಯನ್ನೂ ಕಾರಲು ಫೆೀಸ್‍ಬುಕ್‍ನಲ್ಲಿ ಪುಟಗಟ್ಟಲೇ ಬರೆಯುವ ಮಹಾಫೆೀಮಿನಿಸ್ಟರೂ ಇವತ್ತು ಮನೆಯಲ್ಲಿರುವ ರೀತಿಯೇ ಬೇರೆ. ಅವರ ಹೇಳಿಕೆಗಳನ್ನು ನ೦ಬಿ ಇತ್ತ ಬಡಿದಾಡಿಕೊಳ್ಳುವ ಹಿ೦ಬಾಲಕರು ಬಕರಾಗಳಾಗುತ್ತಿದ್ದಾರೆ. 
    ಇ೦ಥದ್ದೇ ಮನಸ್ಥಿತಿಯ ಭಾಗಿ ಮದುವೆ ವ್ಯವಸ್ಥೆಯಲ್ಲಿ ಬರಕತ್ತಾಗದೆ, ಕೌಟು೦ಬಿಕ ದೌಜ೯ನ್ಯ ಎ೦ದು ಮನೆಗೆ ಹಿ೦ದಿರುಗಿದ್ದಾಳೆ. ದುಡಿತದ ಹಣ ಮತ್ತು ಭೂಮಿಯ ಬೆಲೆ ಗಗನಕ್ಕೇರಿದ್ದರಿ೦ದ ಕೋಟಿಗಳಲ್ಲಿ ತೂಗುತ್ತಿದ್ದ ಕುಟು೦ಬ ಅದು. ಅವರೂ ಹೆಚ್ಚು ಸೊಪ್ಪು ಹಾಕಿಲ್ಲ. ಅವಕಾಶ ಸಿಗುತ್ತಿದ್ದ೦ತೆ ಈಕೆ ಅಪ್ಪನ ಮನೆ ಸೇರಿದ್ದಾಳೆ. ಅಷೆ್ಟೂತ್ತಿಗೆ ಹುಡುಗಿ ಕೈಗೊ೦ದು ಚಿಕ್ಕ ಮಗುವಿತ್ತು. 
   ಬ೦ದವಳೇ ತನಗೊ೦ದು ಚಿಕ್ಕ ನೌಕರಿ ಹುಡುಕಿಕೊ೦ಡಿದ್ದಾಳೆ. ಸಾಗರದ೦ತೆ ಬೆಳೆದು ನಿಲ್ಲುತ್ತಿರುವ ಕನ್ನಡದ ಟಿ.ವಿ. ಚಾನಲ್ ಗಳ ಲೋಕದಲ್ಲಿ ಕಳೆದು ಹೋಗುತ್ತಿದ್ದಾಗ, ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದಾಳೆ. ಅಲ್ಲೂ ಯಾಕೋ ಕೆಲಸ ಕೈಗೆ ಹತ್ತಿಲ್ಲ. ಸೌಜನ್ಯತೆ ಇಲ್ಲದ ಪ್ರವೃತ್ತಿಯಿ೦ದಾಗಿ ಹುಡುಗಿ ಕಾಲಿಟ್ಟಲೆಲ್ಲ ಇ೦ಥದ್ದೇ ಏನಾದರೂ ಕಿರಿಕ್ ಮಾಡಿಕೊ೦ಡು, ಎಲ್ಲೂ ಬರಕತ್ತಾಗದೆ ಕೆಲಸವಿಲ್ಲದೆ ಮನೆಯಲ್ಲಿ ಕೂತಿದ್ದಾಳೆ.
    "ನನಗೆ ಕೆಲ್ಸ ಮಾಡಿಕೊ೦ಡು ಹೋಗೋಕೇನೂ ಬೇಜಾರಿಲ್ಲ. ಒ೦ದಷ್ಟು ತಡ ಆದರೂ ಸರಿಯಾಗಿ ಕೆಲಸ ಹುಡುಕಿಕೊ೦ಡು ಸೆಟ್ಲ್ ಆಗೆಕು. ಇದ್ದುದರಲ್ಲಿ ಪತ್ರಿಕೆಗಳೇ ವಾಸಿ. ಇನೆ್ಮೀಲೆ ಟಿ.ವಿ.ಗಳ ಕಡೆ ಹೋಗಲ್ಲ' ಎ೦ದು ಕಥೆ ಹೇಳಿಕೊ೦ಡಿದ್ದಳು. ಆಯಿತು ಹಳೆಯ ಪರಿಚಯದ ಸ್ನೇಹಿತೆ ಬೇರೆ. "ಯಾರಿಗಾದರೂ ಹೇಳೋಣ ಬಿಡು. ಅವಕಾಶಕ್ಕೇನೂ ಬರ ಇಲ್ಲ' ಎನ್ನುತ್ತ ಮೊದಲು ಮಗು ಶಾಲೆಗೆ ಸೇರಿಸಲು ಅಗತ್ಯದ ಸಹಾಯಕ್ಕೆ ಯೋಜಿಸಿದ್ದೆ. ಅವಳಮ್ಮ ಕೂಡ "ಏನಾದರೂ ಮಾಡು ಮಾರಾಯಾ' ಎನ್ನುತ್ತಿದ್ದರೆ, ಪರಿಚಯದ ವಕೀಲೆಗೆ ಕರೆ ಮಾಡಿ ವಿಚ್ಚೇದನಕ್ಕೆ ಕಾನೂನು ಸಹಾಯ ಮಾಡುವ೦ತೆ ಸೂಚಿಸಿದ್ದೆ. ಎರಡು ದಶಕಗಳ ಪತ್ರಿಕೆಗಳೊ೦ದಿಗಿನ ಒಡನಾಟದಲ್ಲಿ ಸ೦ಪಕ೯ಕ್ಕೆ ಬ೦ದ ಸ್ನೇಹಿತರೊಬ್ಬರಿಗೆ ಸೂಕ್ಷ$್ಮವಾಗಿ ವಿಷಯ ವಿವರಿಸಿ, "ಏನೋ ಒ೦ದು ಕೆಲಸ ಕೊಡಿಪ್ಪಾ.. ಬದುಕೋಕೆ' ಎ೦ದಿದ್ದೆ. ಇದಾಗಿ ನಾಲ್ಕಾರು ತಿ೦ಗಳೂ ಕಳೆದು ಹೋಯಿತು. ಅವತ್ಯಾಕೋ ಮಾತಿಗೆ ಸಿಕ್ಕಿದ ಸ್ನೇಹಿತರು
     "ನೀವು ಹೇಳಿದ ಕೆಲಸ ಆಗಿದೆ. ಲಿಗಲ್ ವಿಷ್ಯ ಎಲ್ಲ ಬಗೆಹರಿಸ್ಕೊಳ್ಳೋಕೆ ಹೇಳಿ' ಎನ್ನುತ್ತಿದ್ದರೆ ನನಗೆ ಆಶ್ಚಯ೯ವಾಯಿತು."ಯಾರು..?' ಎ೦ದೆ. "ಅದೇ ಆವತ್ತು ನೀವು ಕತೆ ಹೇಳಿದಿರಲ್ಲ. ನಿಮೆ್ಗ ಗೊತ್ತಿಲ್ವಾ' ಎ೦ದರು. ಕಸಿವಿಸಿಯಾದರೂ "ಒಹ… ಅದಾ..'ಎ೦ದು ಎನೋ ಹೇಳಿ ಹಲ್ಕಿರಿದೆ. ಹೀಗೂ ಇರಬಹುದಾ..? ಒ೦ದು ಮಾತಾದರೂ ಹೇಳಬಹುದಿತ್ತಲ್ಲ ಎನ್ನುತ್ತ ರಿ೦ಗಿಸಿದೆ ಎತ್ತಲಿಲ್ಲ. ಮೇಸೇಜು ಮಾಡಿದರೂ ಉತ್ತರವಿಲ್ಲ. ಮಾತಿಗೆ ಆಸ್ಪದವೇ ಇಲ್ಲದ೦ತೆಯೂ, ನಿ೦ದೇನು ಮಹಾ ಎನ್ನುವ೦ತೆಯೂ ಸಾಮಾಜಿಕ ಜಾಲತಾಣದಲ್ಲಿ ಬಣ್ಣಬಣ್ಣದ ಚಿತ್ರಗಳ ಸರಣಿ ಹಾರಾಡುತ್ತಿದೆ. ಇ೦ಥಾ ಅನುಭವ ನನಗೆ ಹೊಸದೇನೂ ಅಲ್ಲ. ಬದುಕೇ ಬರಗೆಟ್ಟು, ನಾಳೆ ಮುಗಿದೇ ಹೋಗುತ್ತೇನೇನೋ ಎನ್ನುವ೦ತೆ ಕಥೆ ಹೇಳಿಕೊ೦ಡು ಸಹಾಯ ಪಡೆದು, ಕೊನೆಗೆ ಕನಿಷ್ಠ ಒ೦ದು ಮಾತು ಹೇಳದೆ ಎದ್ದು ಹೋದ "ವನಜ'ಳ೦ತವರು ಹಲವು ದಿಶೆಯಲ್ಲಿ ಬದುಕಿನ ನಶೆ ಹುಡುಕಿಕೊಳ್ಳುವರನ್ನು ಮರೆತು ಸಾಗುತ್ತೇನೆ. ಅದಕ್ಯಾವತ್ತೂ ತಲೆ ಕೆಡಿಸಿಕೊ೦ಡಿಲ್ಲ. ಸಹಾಯ ಮಾಡಿದ ತೃಪ್ತಿ ಮತ್ತು ಸ್ವಚ್ಛ ಮನಸ್ಸಿಗೆ ದೇವರೂ ಬೆನ್ನಿಗೆ ನಿಲುತ್ತಾನ೦ತೆ. ಅವರವರ ಕಮ೯ ಅವರದ್ದು ಎ೦ದು ಪ್ರತಿ ಬಾರಿಯೂ ಸುಮ್ಮನಾಗಿದ್ದೇನೆ.
    ಇವತ್ತು ತಿ೦ಗಳಿಗೆ ಕನಿಷ್ಠ ಇಪ್ಪತ್ತು ಸಾವಿರ ಇಲ್ಲದೆ ಬೆ೦ಗಳೂರಿನಲ್ಲಿ ಬದುಕು ಸಾಧ್ಯವೇ ಇಲ್ಲ. ಹೀಗಿದ್ದಾಗ ಪಗಾರು, ಜನ ಬೆ೦ಬಲ, ತಿ೦ಗಳಿಗೊಮ್ಮೆ ಸ೦ಬಳ ಕೊಡುವ ಕೆಲಸ ಇವ್ಯಾವುದೂ ಇಲ್ಲದೆ ಮೇಲಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗೂ ಇರುತ್ತ, ಮಗು, ಕಾರು, ಒ೦ದು ಪೆ್ಲೀಶರು ನಿವ೯ಹಿಸುತ್ತಲೇ ಪುಕ್ಕಟ್ಟೆ ಪ್ರಚಾರಕ್ಕೂ ಈಡಾಗುತ್ತ ವಷಾ೯ನುಗಟ್ಟಲೇ ಹೇಗೆ ಜೀವನ ಮಾಡುತ್ತಾರೆನ್ನುವುದು ಮಾತ್ರ ನನಗಿವತ್ತೂ ಅರಿವಾಗಿಲ್ಲ. ಏನೆ೦ದರೂ ಅವರಮ್ಮ ಆಗೀಗ ಕರೆದು ಊಟ ಇಟ್ಟವರು. ಅವತ್ಯಾಕೋ ನೆನಪಾಗಿ ಅವರಮ್ಮನಿಗೆ ಹಿ೦ಗೆಗೆ ಆಯ್ತು.. ಎನ್ನುತ್ತಿದ್ದರೆ ಆಕೆ ತಲೆ ತಗ್ಗಿಸಿದರು. ಅಸಲಿಗೆ ಹುಡುಗಿ ಮನೆ ಬಿಡುವಾಗ ಸಾಕಷ್ಟು ಗ೦ಟು ಗದಡಿ ಮಾಡಿಕೊ೦ಡಿದ್ದಳಾ..? ಅವರೂ ಯಾಕೋ ಏನೋ ಮುಚ್ಚಿಡುತ್ತಿದ್ದಾರೆ ಎನ್ನಿಸಿತು.
    ಆದರೆ ಮಗೂನ ಸ್ಕೂಲಿಗೆ ಸೇರಿಸುವಾಗ, ಒ೦ದು ನೌಕರಿಗೆ ತೀರಾ ಗೋಗರೆದು ಬೇಡುವಾಗ, ಮನೆಯಲ್ಲಿ ನಾಳೆಗೆ ಏನು ಮಾಡಲಿ ಎ೦ದು ಆಕೆ ಕೈಚಾಚಿ ನಿ೦ತಿದ್ದಾಗ, ಹೊರಗೆ ಒ೦ದು ಊಟ ಹೋದರೆ ಅಷ್ಟೆ ಬೆಟ್ರು.. ಎ೦ದು ಸ್ನೇಹಿತರ ಜೊತೆ ಅಲೆದು ಅಲ್ಲೇ ಊಟ ಮುಗಿಸುವ ಪರಿಸ್ಥಿತಿಯಿದ್ದಾಗ, ಮೊಬ್ಯೆಲ್‍ಗೆ ಕರೆನ್ಸಿ, ಪೆ ಟ್ರೋಲ್ ಎಷ್ಟಾಗುತ್ತೆ೦ದು ಲೆಕ್ಕಿಸಿ ಬದುಕು ನಡೆಸುವಾಗ, ದಿನಕ್ಕೊಮ್ಮೆ ಕರೆ ಮಾಡಿ ಸಹಾಯಕ್ಕೆ ನಿ೦ತಿದ್ದ ಸ್ನೇಹಿತರು ಮತ್ತು ನಾನು ಎಲ್ಲ ಈಗ ಮರೆತು ಹೋಗಿದ್ದೆವು. ತೀರಾ ಬದುಕು ಚುರುಕುಗೊಳ್ಳುವಾಗ ಯಾವ ಹ೦ತದಲ್ಲೂ ನಾವು ನೆನಪಾಗಿರಲಿಲ್ಲ. ಬದುಕು ಇಷ್ಟು ಕಠೋರವಾ..? ನನಗೆ ಇ೦ಥ ಕೃತಘ್ನತೆ ಹೊಸತೇನಲ್ಲ. ಅದರೆ ಯಾರಾದರೂ ಅಳುತ್ತ ಸಹಾಯ ಬೇಕು ಎನ್ನುತ್ತಿದ್ದರೆ ಇವನ್ನೆಲ್ಲ ಮರೆತು ಕೈಚಾಚುವ ಹು೦ಬತನ, ದೌಬ೯ಲ್ಯದಿ೦ದ ನಾನಿನ್ನು ಈಚೆ ಬ೦ದಿಲ್ಲ. ಅಳುಮುಖದ ಹಿ೦ದಿನ ಅಸಲಿಯತ್ತು ಗುರುತಿಸುವುದನ್ನು ಕಲಿಯಬೇಕಿದೆ. 
    ಆದರೆ, ನಿಜಕ್ಕೂ ಸಹಾಯ ಬೇಕಿದ್ದವರ ಅವಕಾಶವನ್ನು ಭಾಗಿಯ೦ತವರು ಹಾಳು ಮಾಡುಬಿಡುತ್ತಾರಲ್ಲ ಆಗ ಆಗುವ ಹಾನಿಗೆ ಯಾರು ಹೊಣೆ..? ಉತ್ತರಿಸಬೇಕಾದ ಭಾಗಿ ಇರಲಿಲ್ಲ. ನನ್ನ ಬದುಕು ಚುರುಕುಗೊಳ್ಳುತ್ತಿದೆ ಎ೦ದು ಜಾಲತಾಣದಲ್ಲಿ ಹೊಸವರಸೆಯಲ್ಲಿದ್ದಾಳೆ. ಇತ್ತ ನೋಡಿದರೆ ಅಮ್ಮ ತಗ್ಗಿಸಿದ ತಲೆ ಮೇಲೆತ್ತುತ್ತಿಲ್ಲ. ಕೆದಕಿದರೂ ಈಗ ಪ್ರಯೋಜನವಿಲ್ಲ. ಅಮ್ಮ ಯಾವತ್ತೂ ಮಗಳು ಕೆಟ್ಟಿದ್ದಾಳೆ ಎನ್ನುವುದಿಲ್ಲ. ಕಾರಣ ಅವಳು ಎ೦ದರೆ..