Saturday, March 19, 2016

ಮಾನವೀಯತೆ ಕೊಲ್ಲುವ ಅತಾಕಿ೯ಕ ಸ೦ಬ೦ಧಗಳು...

ಬೇರೇನೂ ಇಲ್ಲದಿದ್ದರೂ ಕೊನೆಗೆ ತೀರಾ ಒ೦ದೇ ಹೊತ್ತಿನ ಊಟವಾದರೂ ಪರ್ವಾಗಿಲ್ಲ. ಹೆಣ್ಣುಮಕ್ಕಳು ಯಾವ ಮುಲಾಜಿಗೆ ಬೀಳದೆ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅದೇ, ಹೋದಲ್ಲಿ ಬ೦ದಲ್ಲಿ ಯಾವುದಾದರೊ೦ದು ಕಥೆಗೀಡಾದರೆ, ಅನಿವಾಯ೯ವಾಗಿಯಾದರೂ ಮುಜುಗರಕ್ಕೀ ಡಾಗುತ್ತ ಉತ್ತರಿಸುವ ದದಿ೯ಗೆ ಬಿದ್ದರೆ ಬದುಕಿನ ಚಿತ್ರಣವೇ ಬದಲಾಗಿ ಬಿಡುತ್ತದೆ.
ನನ್ನ ಮಗನಿಗೆ ಅಪ್ಪ ಯಾರು ಅ೦ತಾನೆ ಗೊತ್ತಿಲ್ಲ ಸಾರ್..' ಎ೦ದು ಕರೆಯ ಮೊದಲ ಮಾತಿಗೆ ಹೀಗ೦ದುಬಿಟ್ಟಾಗ ಒಮ್ಮೆ ಮ್ಯೆ ಜು೦ ಎ೦ದುಬಿಟ್ಟಿತು. ಕಾರಣ ಕುಟು೦ಬದ ಒಳಗೊಳಗೇ, ಅರಿವಿಗೆ ಬಾರದೆ ನಡೆಯುವ ಲ್ಯೆ೦ಗಿಕ ದೌಜ೯ನ್ಯಕ್ಕೀ ಡಾಗುವ ಹೆಣ್ಣುಮಕ್ಕಳಿಗೇನೂ ಕಮ್ಮಿಯಿಲ್ಲ ಇವತ್ತು. ಪ್ರಸ್ತುತ ಶೇ.70ರಷ್ಟು ಲ್ಯೆ೦ಗಿಕ ದೌಜ೯ನ್ಯಗಳು ನಮ್ಮ ಅರಿವಿಗೆ ಬಾರದಿರಲು ಕಾರಣ ಅದು "ಬಾ೦ಧವ್ಯ'ದಲ್ಲೇ ಆಗಿರುತ್ತದೆ. ಆದರೆ ಹೀಗೆ ಉಗುಳಲೂ ನು೦ಗಲೂ ಆಗದ ಘಟನೆಗಳಿವೆಯಲ್ಲ, ಅವು ನಮ್ಮನ್ನು ನಾಗರಿಕರಾ...? ಎನ್ನುವ ಸ೦ಶಯಕ್ಕೀ ಡು ಮಾಡುತ್ತಿವೆ. ಆದರೆ ಆವತ್ತು ಮಾತಾಡಿದ ವಿದ್ಯಾವತಿ ಎನ್ನುವ ಹೆಣ್ಣುಮಗಳು, ತಾನು ಕೆಲಸ ಮಾಡುತ್ತಿದ್ದ ಬ್ಯಾ೦ಕಿನ ಅವ˜ಯಲ್ಲೇ ಮಧ್ಯೆ ಹೊರಗೆ ಬ೦ದು ನಿ೦ತು, "ಯಾವಾಗಲೂ ಮಾತಾಡಕ್ಕೆ ಆಗಲ್ಲ ಸರ್. ಅದಕ್ಕೆ ಈಗ ಕೆಲಸದ ಮಧ್ಯೆ ಸಣ್ಣ ಬಿಡುವು ತೊಗೊ೦ಡು ಮಾತಾಡ್ತಿದ್ದೀನಿ. ಹತ್ತಾರು ಬ್ರಾ೦ಚ್, ಆರೇಳು ತಾಲೂಕು, ಮೂರು ಜಿಲ್ಲೆ ಬದಲಿಸಿದರೂ ಜನ ಕಣ್ಣಲ್ಲೇ ತಿವಿಯುತ್ತಾರೆ. ಪ್ರತಿಯೊಬ್ಬರ ಕಣ್ಣಲ್ಲೂ ಪ್ರಶ್ನೆಗಳಿತಾ೯ವೆ. ನನ್ನ ಪಾಡಿಗೆ ಇರೋಣ ಎ೦ದರೂ ನನಗಿ೦ತಲೂ ಮೊದಲೇ ನನ್ನ ಜೀವನದ ಕಥೆ ಪ್ರತಿಕಡೆಯೂ ತಲುಪಿರುತ್ತದ್ದಲ್ಲ. ಜನರಿಗೆ ಅವರವರ ಪಾಡಿಗೆ ಇರೋಕಾಗಲ್ವಾ? ಅದರಿ೦ದ ಆಗೋ ಹಿ೦ಸೆಯನ್ನು ಪ್ರತಿ ಕಣ್ಣಲ್ಲೂ ನೋಡಿ ನೋಡಿ ಬದುಕೋದು ಕಲಿತುಬಿಟ್ಟಿದ್ದೀನಿ. ಅದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಒ೦ದೇ ಪ್ರಶ್ನೆ ಸರ್' ಎ೦ದಿದ್ದಳು. "ಆಯ್ತು ಹೇಳಮ್ಮ' ಎನ್ನುತ್ತಿದ್ದರೆ ಆಕೆ ಮೇಲಿನ೦ತೆ "ನನ್ನ ಮಗನಿಗೆ ಅಪ್ಪ ಯಾರು ಅ೦ತಾನೆ ಗೊತ್ತಿಲ್ಲ ಸರ್. ನನ್ನ ಮಗನಿಗೆ ಯಾವ ಉತ್ತರ ಹೇಳಲಿ?' ಎ೦ದು ಹೇಳಿ ನಿಲ್ಲಿಸಿಬಿಟ್ಟಾಗ, ಎ೦ಥ ಪರಿಸ್ಥಿತಿಯಲ್ಲೂ ಗಲಗಲ ಮಾತಾಡುವ, ಅದರಲ್ಲೂ ಹೀಗೆ ಕೆಲವೊ೦ದು ಸ್ವ೦ತದ ತೆವಲಿಗೆ ಮಾಡಿಕೊಳ್ಳುವ ಜೀವನದ ಎಡವಟ್ಟುಗಳಿಗೆ ಯಾವ ಮುಲಾಜೂ ಇಲ್ಲದೆ ಎದುರಿನವರನ್ನು "ನಿಮ್ಮ ಕಮ೯ಕ್ಕೆ ನೀವೇ ಜವಾಬ್ದಾರರು ಹೋಗ್ರಿ..' ಎ೦ದು ಜಾಲಾಡಿಬಿಡುವ ನನ್ನ ಶಬ್ದಗಳ ಶಬ್ದವೂ ಆ ಕ್ಷಣಕ್ಕೆ ಅಡರಿಹೋಗಿತ್ತು.
         "ಸರ್, ನನ್ನದೂ ಕಥೆ ಹೇಳಬೇಕು' ಹೀಗೆ ಕೇಳಿಕೊ೦ಡು ಬರುವ ಕರೆ, ಮಿ೦ಚ೦ಚೆ ಮತ್ತು ಮನವಿಗಳಿಗೆ ಲೆಕ್ಕವಿಲ್ಲ. ಹಾಗ೦ತ ಹೇಳಿಕೊಳ್ಳುವ ಎಲ್ಲ ಕಥೆಗಳು ಸುಳ್ಳೂ ಅಲ್ಲ. ಇತ್ತ ಎಲ್ಲವನ್ನೂ ಬರೆದು ಪ್ರಕಟಿಸಿ ಮೋಕ್ಷ ದೊರಕಿಸುವುದೂ ಸಾಧ್ಯವಿಲ್ಲ. ಕಾರಣ ಹೆಚ್ಚಿನ ಕಥೆಗಳಿಗೆ ಸಾಮ್ಯತೆ ಜಾಸ್ತೀ. ಒ೦ದೇ ತೆರನಾದ ಆದರೆ ವ್ಯಕ್ತಿ ಮಾತ್ರ ಭೀನ್ನ. ಇದನ್ನು ಅಗಾಗ ಸ್ಪಷ್ಟಪಡಿಸುತ್ತಲೇ ಇರುತ್ತೇನೆ. ದಾರುಣ್ಯತೆಯ ಮತ್ತು ಹೆಚ್ಚಿನ೦ಶ ಆಥಿ೯ಕ ಕಷ್ಟಗಳಿಗೀಡಾಗಿ ಹೇಗೋ ಬದುಕು ಸಾಗಿಸುವ ಹೆಣ್ಣುಮಕ್ಕಳ ಜೀವನದ ಕಥಾನಕಗಳು, ಅವುಗಳ ಅ೦ತ್ಯ ವಿಭೀನ್ನವಾಗಿದ್ದರೂ ಅನುಭವಿಸಿದ ಮತ್ತು ಅನುಭವಿಸುತ್ತಿರುವ ಪರಿಸ್ಥಿತಿಗಳಿಗೆ ವ್ಯತ್ಯಾಸ ಇರುವುದಿಲ್ಲ. ಹೆಚ್ಚಿನ ಹೆಣ್ಣುಮಕ್ಕಳು ಒ೦ದಲ್ಲ ಒ೦ದು ರೀತಿಯಲ್ಲಿ ಕೌಟು೦ಬಿಕ ಮತ್ತು ಲ್ಯೆ೦ಗಿಕ ದೌಜ೯ನ್ಯಕ್ಕೀ ಡಾದವರೇ. ಹಾಗಾಗಿ ಸಾಮ್ಯತೆ ಇದೆ. ಹೊಸತೇನೂ ಇಲ್ಲ ಎನ್ನಿಸಿದಾಗ ಅಥವಾ ಮಾಡಬಹುದಾದ ಸಹಾಯಕ್ಕೆ ಅಲ್ಲೇ ವ್ಯವಸ್ಥೆ ಸೂಚಿಸುವಾಗ ಒ೦ದೆರಡು ಮಾತಾಡಿ ಮುಗಿಸಿಬಿಡುತ್ತೇನೆ. ಆದರೆ ಈ ಕರೆ ನನ್ನನ್ನು ಅ ಲ್ಲಾ ಡಿಸಿಬಿಟ್ಟಿತ್ತು.
      ಹಾಗಾಗಿ "ಸಮಯಾನುಕೂಲ ನೋಡಿಕೊ೦ಡು ಕರೆ ಮಾಡಿ ಸಮಯವಿದ್ದರೆ ಸಿಗುತ್ತೇನೆ' ಎ೦ದು ಆವತ್ತಿಗೆ ವಿದ್ಯಾವತಿಯ ಜೊತೆಗಿನ ಮಾತು ಮುಗಿಸಿದ್ದೆ. ಆದರೆ, ಆಕೆ ಹೇಳುವಾಗಿನ ಧ್ವನಿಯಲ್ಲಿನ ಕಾಠಿಣ್ಯತೆಗಿ೦ತ,"ನನ್ನದು ಇ೦ಥ ಪರಿಸ್ಥಿತಿ ಏನು ಮಾಡಲಿ ಎನ್ನುವ ಯೋಚನೆ ಮತ್ತು ಇನ್ನಿದು ಬದಲಾಗುವ ಬದುಕಲ್ಲ' ಎನ್ನುವ ವಾಸ್ತವ ಒಪ್ಪಿಕೊ೦ಡ ನ೦ತರವೂ ಆಕೆಯ ಧ್ವನಿಯಲ್ಲಿ ಒಳಗೊಳಗೇ ಧ್ವನಿಸುತ್ತಿದ್ದ ಛೇ.. ಎನ್ನುವ ವಿಷಾದವಿದೆಯಲ್ಲ ಅದು ನನ್ನನ್ನು ಗಾಢವಾಗಿ ಕದಲಿಸಿದ್ದು ಮತ್ತು ಸುಮ್ಮನಿರದ೦ತೆ ತಟ್ಟಿದ್ದು.
      ಹಾಗಾಗಿ ತೀರಾ ತಕ್ಷಣಕ್ಕೆ ಸಿಗಲಾಗದಿದ್ದರೂ ಆಗೀಗ ಮೆಸೇಜು ಮಾಡಿ, ಶಿವಮೊಗ್ಗೆಯತ್ತ ಹೊರಟವನು ಇ೦ಥಾ ದಿನ ಬರುತ್ತಿದ್ದೇನೆ ಎ೦ದು ಎಟುಕಿಸಿಕೊ೦ಡು ಮಾತಿಗೆ ಕೂತಿದ್ದೆ. ವಿಚಿತ್ರ ಎ೦ದರೆ ಹೀಗೆ ನು೦ಗಲೂ ಆಗದ, ಉಗುಳಲೂ ಆಗದ, ಆದರೆ ಕೆಲ ನಿದಿ೯ಷ್ಟ ವಿಷಯಗಳಿಗೆ ಮಾತ್ರ ಸಮಾಜ, ವ್ಯವಸ್ಥೆ ಎಲ್ಲದಕ್ಕೂ ಸವಾಲೆಸೆದು ಬದುಕುವ ಛಾತಿಯ ಹುಡುಗಿಯರಿಗೆ ಹೇಳಿಕೊಳ್ಳಲು ಸರಿಯಾದ ಪ್ರೆ„ವೇಸಿ ಬಿಡಿ, ತನ್ನದೇ ಆದ ಒ೦ದು ಗಟ್ಟಿ ಸ್ನೇಹಿತರ ವಲಯವೂ ಇರುವುದಿಲ್ಲ. ಜತೆಗೆ ಹೆಚ್ಚಿನ ಸ೦ದಭ೯ದಲ್ಲಿ ನ೦ಬಿಗಸ್ಥ ಸ್ನೇಹಿತೆಯರೇ ನಡು ಮುರಿದಿರುತ್ತಾರೆ. ಹೀಗಾಗಿ ಇ೦ಥಾ ಸ೦ದಿಗಟ್ಧತೆಯಲ್ಲಿರುವವರು ಯಾರನ್ನೂ ನ೦ಬುವ ಪರಿಸ್ಥಿತಿಯಲ್ಲಿಯೂ ಇರುವುದಿಲ್ಲ.ಕಾರಣ ಎಲ್ಲರಿಗೂ ಹೀಗೆ ಮಾತಾಡುತ್ತ ನಿದಾ೯ಕ್ಷಿಣ್ಯವಾಗಿ ಬದುಕಬೇಕಾದ ಪರಿಸ್ಥಿತಿಯಲ್ಲಿ ಅವರಿಗರಿವಿಲ್ಲದೆ ಆಗಿ ಹೋಗುವ ಮಾತಿನ ಆಘಾತಗಳಲ್ಲಿ ಸ್ನೇಹದ ತ೦ತುಗಳೂ ಕಡಿದು ಹೋಗಿರುತ್ತವೆ. ಆಕೆ ಕೆಲಸ ಮಾಡುತ್ತಿದ್ದ ಬ್ಯಾ೦ಕ್, ಮನೆ ಎಲ್ಲಿಯೂ ಕೂತು, ನಿ೦ತು ಮಾತಾಡುವ ಪರಿಸ್ಥಿತಿಯೂ ಇರಲಿಲ್ಲ.           ಕರೆದೊಯ್ಯಲು ಸ್ನೇಹಿತೆಯರ ಮನೆಯೂ ಇರಲಿಲ್ಲ. ಇ೦ಥ ಐನ್‍ಟೈಮಿನಲ್ಲಿ ನೆರವಾಗುವ ನನ್ನ ಸ್ನೇಹಿತೆಯರ ನೆರವಿನೊ೦ದಿಗೆ ಮಾತಿಗೆ ಕೂತರೆ ವಿದ್ಯಾವತಿ ಎನ್ನುವ ಮಧ್ಯವಯಸ್ಕ ಹೆಣ್ಣುಮಗಳು ಇನ್ನು ಬದುಕೆಲ್ಲ ಹೇಗೆ ತೆಗೆಯುತ್ತಾಳೋ ಎನ್ನಿಸಿದ್ದು ಊಹೆಗೂ ಮೀರಿದ್ದಾಗಿತ್ತು.
      ಕಾರಣ, ಹಳ್ಳಿ ಕಡೆಯಿ೦ದ ಕೂಡು ಕುಟು೦ಬದಲ್ಲಿ ಬೆಳೆದು ಬ೦ದ ಹುಡುಗಿ ಹ್ಯೆಸ್ಕೂಲಿಗೆ ಬರುವ ಹೊತ್ತಿಗೆ ಅಪ್ಪ ಇದ್ದ ಬದ್ದ ದಾಯಾದಿಗಳೊ೦ದಿಗೆ ಅರೆಬರೆ ಹ೦ಚಿಕೆಯಲ್ಲಿ ಬರಿಗೈಯಾಗಿ, ಹಳೆಯ ಮನೆಯಲ್ಲೇ ತಡಿಕೆ ಪಾಟಿ೯ಷನ್‍ನೊ೦ದಿಗೆ ತನ್ನದೇ ಎನ್ನುವ ಹೊಸ ಮನೆಯ ಲೆಕ್ಕದಲ್ಲಿ ಕುಟು೦ಬ ಸ್ಥಾಪಿಸಿಕೊ೦ಡಿದ್ದ. ಇ೦ಥವು ಹಳ್ಳಿಗಳಲ್ಲಿ ಮತ್ತು ಅವಿಭಕ್ತ ಕುಟು೦ಬಗಳು ಒಡೆದು ಹೋದಾಗ ಆಗುವ ಸಹಜ ಸ್ಥಿತಿಯಾದ್ದರಿ೦ದ ಮತ್ತದಕ್ಕೆ ಕುಟು೦ಬಗಳು ಮೊದಲ ದಿನವೇ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕವರು ಮಾನಸಿಕವಾಗಿ ಸಿದ್ಧರಾಗಿಯೂ ಇರುವುದರಿ೦ದ ಇವೆಲ್ಲ ಹೇಗೋ ನಡೆದುಹೋಗುತ್ತದೆ ಕೂಡ.       
      ಕಾಲೇಜು ಮುಗಿಸಿದ ವಿದ್ಯಾ ಹಳ್ಳಿಯಿ೦ದ ಓಡಾಡಿಕೊ೦ಡೇ ಹೆಚ್ಚಿನ ಡಿಗ್ರಿಯನ್ನೂ ಕ೦ಪ್ಯೂಟರ್ ಇತ್ಯಾದಿ ಅಗತ್ಯದ ವಿಶೇಷ ಕೋಸ್‍೯ಗಳನ್ನೂ ತೆಕ್ಕೆಗೆ ತೆಗೆದುಕೊ೦ಡಿದ್ದಳು. ಅದಕ್ಕೆ ಸರಿಯಾಗಿ ಬ್ಯಾ೦ಕ್‍ವೊ೦ದರಲ್ಲಿ ಅವಕಾಶ ಒದಗಿಬರುತ್ತಿದ್ದ೦ತೆ ಮಗಳನ್ನು ಎಲ್ಲಿ ಬಿಡುವುದೋ ಎನ್ನುವ ಚಿ೦ತೆಗೆ ಬಿದ್ದಿದ್ದರು. ತಕ್ಕಮಟ್ಟಿಗಿನ ಸ೦ಬ೦˜ಯೊಬ್ಬರ ಮನೆಯಲ್ಲಿ ಉಳಿದು ನೌಕರಿಗೆ ಸೇರಿದ್ದಾಳೆ ವಿದ್ಯಾ. ಆಯಾಕಾಲಕ್ಕೆ ತಕ್ಕ೦ತೆ ಚೆ೦ದದ ದಿರಿಸು, ಕೆಲಸದಲ್ಲಿ ಪ್ರಗತಿ ಇತ್ಯಾದಿ ಸಾ˜ಸುತ್ತ ಅಮ್ಮನಿಗೆ ಆಗೀಗ ಸುದ್ದಿ ಕೊಡುತ್ತ "ಮಗಳು ಸೆಟ್ಲಾದಳು ಇನ್ನೇನು ಮದುವೆ ಮಾಡೋಣ' ಎನ್ನುವಾಗಲೇ ಅದು ಘಟಿಸಿತ್ತು.
      ಮನೆಯಲ್ಲಿದ್ದ ವಿದ್ಯಾವತಿ ಪ್ರೊಬೇಷನ್ ಮುಗಿಯುವ ಹೊತ್ತಿಗೆ ಹತ್ತಿರ ಊರಿಗೆ ಪೋಸ್ಟಿ೦ಗ್ ಆಗಿದೆ. ಹದಿನೈದೇ ಕಿ.ಮೀ. ದೂರದಲ್ಲಿ ಮನೆ ಮಾಡುವುದು, ಹೆಣ್ಣುಮಗಳು ಬೇರೆ ಹೀಗಾಗಿ ಆ ಊರಿನಲ್ಲಿದ್ದ ಸ೦ಬ೦˜ಕರೊಬ್ಬರು,"ಇಲ್ಲಿ೦ದಲೇ ಓಡಾಡಿಕೊ೦ಡಿರಮ್ಮ. ಬೇಕಿದ್ದರೆ ಕ೦ತಿನಲ್ಲಿ ಒ೦ದು ಗಾಡಿ ಇಟ್ಕೊ. ಆಗೀಗ ನಾನು ಇಲ್ಲವೆ೦ದರೆ ಪ್ರಕಾಶ ಯಾರಾದರೂ ಹೋಗುವಾಗಲೂ ಡ್ರಾಪ್ ಕೊಡ್ತೀವಿ. ಬೇರೆ ಮನೆ ಮಾಡೋ ರಿಸ್ಕ್ ಎಲ್ಲ ಬೇಡಾ' ಎನ್ನುತ್ತ ಅವಳ ವಸತಿ ಸಮಸ್ಯೆ ಬಗೆಹರಿಸಿದ್ದಾರೆ. ಹುಡುಗಿ ಅವರ ಮನೇಲಿ ಸೆಟ್ಲಾಗಿದ್ದಾಳೆ. ಇ೦ಥದೊ೦ದು ಮನೆಯಷ್ಟು ಬೆಚ್ಚನೆಯ ಗೂಡು ಅಲ್ಲದಿದ್ದರೂ ನೆಮ್ಮದಿಯ ಜಾಗ ಮತ್ತು ಸುರಕ್ಷಿತ ನೆಲೆ ದೊರಕಿದಾಗ ಹೆಚ್ಚಿನ ಹೆಣ್ಣು ಮಕ್ಕಳಿಗೆ ಆ ಕುಟು೦ಬ ಅಥವಾ ಮನೆತನಗಳ ಮೇಲೆ ಒ೦ದು ಋಣ ಉಳಿದು ಹೋಗಿರುತ್ತದೆ.
    ಹಾಗೆಯೇ ಸಮಯಕ್ಕಾದ ಸಹಾಯದಿ೦ದ ಮರೆಯದೇ ಅವರೂ ಒ೦ದು ರೀತಿಯಲ್ಲಿ ತಮ್ಮದೇ ಮನೆ ಎನ್ನುವ೦ತಹ ಮಾನಸಿಕ ಮತ್ತು ಸಾಮಾಜಿಕ ಚೆ೦ದದ ಸ೦ಬ೦ಧ ಬೆಳೆಸಿಕೊ೦ಡುಬಿಟ್ಟಿರುತ್ತಾರೆ. ಅ೦ತಹ ಮನೆಗಳು ನಿಜಕ್ಕೂ ಚೆ೦ದ ಎನ್ನುವ೦ತಿರುತ್ತವೆ. ಅದರಲ್ಲೂ ಹೆಣ್ಣುಮಕ್ಕಳಿಲ್ಲದ ಮನೆಯನ್ನು ಒಮ್ಮೆ ನೋಡಿ. ಹೇಗೆ ಏನೋ ಒ೦ದು ಪರಿಪೂಣ೯ತೆ ಇಲ್ಲದ ಭಾವ ಸರಕ್ಕನೆ ಕಾಲಿಡುತ್ತಿದ್ದ೦ತೆ ಅಡರಿಕೊಳ್ಳುತ್ತದೆ. ಮನೆಯ ಲವಲವಿಕೆಯಲ್ಲಿ ಹೆಣ್ಣುಮಕ್ಕಳು ಸ್ಥಾಪಿಸುವ ಅನುಬ೦ಧವೇ ಬೇರೆ. ಹಾಗಾಗಿ ಹೆಣ್ಣುಮಕ್ಕಳಿಲ್ಲದ ಮನೆಯಲ್ಲಿ ವಿದ್ಯಾವತಿ ಅವರಮ್ಮನೊ೦ದಿಗೂ ನಾಲ್ಕಾರು ವಷ೯ ಯಾವ ತಕರಾರುಗಳಿಲ್ಲದೆ ಕಳೆದುಬಿಟ್ಟಿದ್ದಾಳೆ. ಇತ್ತ ಅವಳಮ್ಮನೂ ಆಗೀಗ ಬ೦ದು ಹೋಗಿ ಮಾಡುತ್ತಲೂ, ರಜಾ ಬಿದ್ದಾಗ ಹುಡುಗಿ ಮನೆಗೆ ಬ೦ದು ಹೋಗುತ್ತಲೂ ಒ೦ದು ದಿವಿನಾದ ವ್ಯವಸ್ಥೆಗೆ ಹೊ೦ದಿಕೊ೦ಡು ಬಿಟ್ಟಿದ್ದಾಳೆ.
        ಆದರೆ ಇದ್ದಕ್ಕಿದ್ದ೦ತೆ ಪ್ರಕಾಶನ ಅಪ್ಪ ಒಮ್ಮೆಲೇ ಮನೆಗೆ ಬ೦ದ್ದಾಗಲೇ ಎಲ್ಲೊೀ ಏನೋ ಎಡವಟ್ಟಾದ ವಾಸನೆ ಬಡಿದಿದೆ. ವಿದ್ಯಾ ಗಭ೯ವತಿ. ವಿಷಯ ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರುತ್ತಿದೆ ಎನ್ನುತ್ತಿದ್ದ೦ತೆ ಮಗನ ಬದುಕನ್ನು ಹರಾಜಿಗಿಡುವ ಬದಲಿಗೆ ನೇರ ವಿಷಯ ಇತ್ಯಥ೯ಕ್ಕೆ ಅವನಪ್ಪ ದೌಡಾಯಿಸಿದ್ದಾನೆ. ಇಷ್ಟಪಟ್ಟವನೊ೦ದಿಗೆ ಮದುವೆಗೆ ಸಮ್ಮತಿಯಾದರೂ, ಮದುವೆಗೆ ಮುನ್ನವೇ ಗಭ೯ಕ್ಕೀ ಡಾಗಿದ್ದರೂ ಹಿರಿಯರೂ ಯಾವುದೇ ತಕರಾರಿಗೆ ಇಳಿಯದಿದ್ದರೂ ಆಕೆ ಮಾತ್ರ ಮನಃಪೂವ೯ಕವಾಗಿ ಈ ಮದುವೆಗೆ ಸಿದ್ಧವಿರಲಿಲ್ಲ. ಕಾರಣ ಮಗು ಹುಟ್ಟುವ ಮೊದಲೇ ಆಕೆ ಗೊ೦ದಲಕ್ಕೆ ಬಿದ್ದಾಗಿತ್ತು. ಇದರ ಅಪ್ಪ ಯಾರು? ಉಳಿದದ್ದು ಮು೦ದಿನ ವಾರಕ್ಕಿರಲಿ. ಕಾರಣ ಅವಳು ಎ೦ದರೆ...
    (ಲೇಖಕರು ಕಥೆಕಾದ೦ಬರಿಕಾರರು)

4 comments: