Saturday, April 23, 2016

ಆಳ ಕಣಿವೆಯಿಂದೇಳುವ ಜಲಪಾತದಂತೆ...

ಗಂಡಸಿನ ಲಂಪಟತನದ ಕೊಟ್ಟಕೊನೆಯ ಹಂತವೆಂದರೆ ಹೆಣ್ಣುಮಕ್ಕಳನ್ನು ಬಡಿಯುವುದು. ಅದರಲ್ಲೂ ತನ್ನ ಕೈಲಾಗದ ಹಂತದಲ್ಲಿ ಹೆಗಲು ನೀಡುವ ಹೆಣ್ಣಿನ ತಾಕತ್ತನ್ನು ಅರಗಿಸಿಕೊಳ್ಳದವನು ಪುರುಷ ಕುಲಕ್ಕೇ ಕಳಂಕ ಎಂದರೂ ತಪ್ಪಿಲ್ಲ. ಕಾರಣ ಕುಟುಂಬಕ್ಕೆ ತನ್ನ ಯೌವ್ವನ, ಜೀವನ ಎರಡೂ ಬಲಿಕೊಡಬಲ್ಲವಳು ಅವಳು ಮಾತ್ರ.

ಆಸ್ತಿ ಮತ್ತು ಮನೆತನದ ಗತ್ತು ಗೈರತ್ತಿಗಾಗಿ ಏನೆ ನಡೆದು ಹೋಗುತ್ತದೆನ್ನುವುದು ಹೊಸದಲ್ಲವಾದರೂ, ಕುಟುಂಬದ ಸದಸ್ಯರೇ ಒಟ್ರಾಸಿಯಾಗಿ ಸಂಬಂಧಗಳನ್ನು ತೆಳುಗೊಳಿಸುವುದಿದೆಯಲ್ಲ ಅದು ಮಾನವೀಯತೆಯ ತಂತನ್ನೇ ಕಡಿಯುತ್ತದೆ ಎನ್ನಿಸಿದ್ದು ಹೌದು. ನಂದಿತಾ ಕನ್ನಡ ಶಾಲೆಯಲ್ಲಿ ಆಗ ಟೀಚರ್ ಆಗಿzಳು ಈಗ ಹೆಡ್‌ಮಿಸ್ಸು. ಚೆಂದವಾಗಿ ಬದುಕು ಕಟ್ಟಿಕೊಂಡಿದ್ದ ಹುಡುಗಿ ಅಸಹಾಯಕತೆ, ಮಾನವೀಯತೆ ಎನ್ನುವ ಆದರ್ಶದ ಹಿಂದೆ ಬಿದ್ದು ಯಾಮಾರಿದಳಾ ಅಥವಾ ನಿಜಾರ್ಥದಲ್ಲಿ ಜೀವಿಸುತ್ತಿzಳಾ? ಆಕೆ ಸಿಗುವವರೆಗೂ ಗೊತ್ತಾಗಿರಲಿಲ್ಲ. ಆದರೆ, ನಂದಿತಾಳನ್ನು ನೋಡುತ್ತಿದ್ದರೆ ಇದ್ಯಾಕಿದ್ದೀತು ಎನ್ನಿಸಿದ್ದು ಹೌದು. ಊರಕಡೆಯ ಹಳ್ಳಿಗೆ ಪೊಸ್ಟಿಂಗು ಆಗಿದ್ದ ನಂದಿತಾ ಟೀಚರ್ರು, ಯಪುರದ ಬಸ್ಸಿನಲ್ಲಿ ಸಿಕ್ಕಾಗ ‘ಅಕ್ಕೋರೇ..’ ಎಂದು ನಾನು ಕೂಗುತ್ತಿದ್ದರೆ ‘ಶೀ.. ಹಂಗೆ ಬಸ್‌ಲಿ ಕೂಗಬ್ಯಾಡ ಮಾರಾಯ’ ಎನ್ನುತ್ತಿದ್ದರೆ ರಾಯರ ಮನೆಯವರೆಗೂ ಅವಳೊಂದಿಗೆ ಕಾಡದಾರಿಯಲ್ಲಿ ಕಾಲು ಹರಿಸಿz.
ಒಂಟಿಯಾದ ಕೆಂಪುಹಂಚಿನ ಮನೆಗಳ ಅಕ್ಕಪಕ್ಕದಲ್ಲಿ ಉದ್ದುದ್ದ ತೆಂಗಿನ ಗಿಡ, ಎದುರಿಗೆ ಅಡಿಕೆ ಅಂಗಳ, ಅ ನೀರು ಹರಿಯುವ ಓಳಿ, ಅದರ ಪಕ್ಕ ಹೂವಿನ ಗಿಡಗಳ ಪಾಲು, ಅದರಲ್ಲಿ ಸದಾಕಾಲಕ್ಕೂ ಇರುವ ಗುಲಾಬಿ, ಚೆಂಡು ಹೂವಿನ ಸಾಲು, ಮೂಟೆಗಳ ಮಧ್ಯೆ ಕೂತು ಅಡಿಕೆ ಸುಲಿಯುತ್ತಿದ್ದ ಅಜಾನುಬಾಹು ಆರಡಿ ಎತ್ತರದ ಕೆಂಪಗಿನ ಮೈಯ್ಯ ರಾಯರು ‘ಮಾಣಿ ಎಲ್ಲಿಂದ ಬಂದ್ಯಾ? ಅವ್ನಿಗೆ ಅಸ್ರಿಗೇನಾರ ಕೊಟ್ಯೆನೇ?’ ಎನ್ನುತ್ತಾ ಕೈಯ್ಯಂದು ಕೊನೆಗತ್ತಿ ಹಿಡಿದು ಬರುತ್ತಿದ್ದರೆ ದೊಡ್ಡ ಅಂಗಳದ ತುದಿಯಲ್ಲಿ ನಿಂತಿದ್ದ ನಾನು ಕುರಿ ತರಹ ಕಾಣುತ್ತಿz ಅವರೆದುರಿಗೆ. ಇದೆಂಥ ನಮುನೀ ದೈತ್ಯ ಮಾರಾಯ ಎನ್ನಿಸುವ ಮೊದಲೆ ಅವರ ನಡೆಯಲ್ಲೂ, ಆದರಿಸುವ ಪರಿಗೂ ನಾನು ಕರಗಿ ಹೋಗಿz.
ರಾಯರು ಏಕಾಂಗಿಯಾಗಿ ನಿಂತು ಬ್ಯಾಣ ಕಡಿದು ತೋಟ ಬೆಳೆಸಿದ ಕತೆ ಹೇಳುತ್ತಿದ್ದರೆ ಗಡಸು ಮುಖ, ಅಗಲಗಲವಾದ ಅವರ ಕೈಯ್ಯನ್ನೂ ನೋಡುತ್ತಿದ್ದರೆ, ಅವರೆದುರಿಗೆ ನಾವೆಲ್ಲ ಚಿಲ್ಟುಗಳಂತೆ ಕಾಣುತ್ತಿzವು. ನಂತರದಲ್ಲೂ ಆಗೀಗ ಅವರ ಮನೆಯ ಹೊಂಬಣ್ಣದ ಚಂದ್ರಬೊಕ್ಕೆ ತರಲು, ಪ್ರತೀ ಹಲಸಿನ ಸಿಜನ್ನಿಗೂ ಭಿಡೆ ಬಿಟ್ಟು ಹೋಗುತ್ತಿz. ಅದಾದ ನಂತರದ ಎರಡು ದಶಕದ ಕಾಲಾವಧಿಯಲ್ಲಿ ನಂದಿ ಆಗೀಗ ಮರೆತಂತಾಗಿದ್ದರೂ, ಮಧ್ಯದಮ್ಮೆ ಯಾರೋ ‘ನಿಮಗೆ ಗೊತ್ತಿರಬೇಕಲ್ಲ ನಂದಿ ಟೀಚರು ದುಡ್ಡಿಗೆ ಮಾವನ್ನೇ ಕರ್ಕೊಂಡು ಓಡಿ ಹೋದ್ಲಂತೆ’ ಎನ್ನುವ ತೀರಾ ರೇಜಿಗೆಯ ಮಾತುಗಳನ್ನು ಕೇಳಿz. ಆದರೆ ಹೆಣ್ಣುಮಗಳೊಬ್ಬಳು ಸುಲಭಕ್ಕೆ ಹಾಗೊಂದು ಸಂಬಂಧಕ್ಕೆ ಬೀಳುತ್ತಾಳೆಂಬುವುದನ್ನು ನಾನು ನಂಬುವುದಿಲ್ಲ. ಆ ತರಹದ ಕತೆಗಳನ್ನು ಬೇಕಿದ್ದರೆ ದಶಕಗಳ ನಂತರವೂ ಆಡಿಕೊಳ್ಳುತ್ತಾ ಆಕೆಯನ್ನು ಇನ್ನಷ್ಟು ಹಿಂಸೆಗೀಡು ಮಾಡುವಲ್ಲಿ ಈಗಲೂ ಹೆಂಗಸರ ಪಾಲೇ ದೊಡ್ಡದು.
ತಮಗೆ ದಕ್ಕದ್ದು ಬೇರೆಯವರಿಗೆ ಸಿಕ್ಕಿತಲ್ಲ ಎನ್ನುವ ಸಂಕಟದ ಹಲವು ಬಾರಿ ಚಿತ್ರ ವಿಚಿತ್ರ ಕತೆಗಳನ್ನು ಹರಿಬಿಡುವವರಿಂದಾಗಿ, ಸುಲಭಕ್ಕೆ ಇಂತಹದ್ದನ್ನು ಚಪ್ಪರಿಸುವ ಜನರ ಮನಸ್ಥಿತಿಯಿಂದಾಗಿ ಕತೆಗಳು ಬೀದಿಗೆ ಬಂದುಬಿಡುತ್ತವೆ. ಹಾಗಾಗಿ ‘ನಂದಿ ಏಂತಾದ್ದೇ ಕತೆ ಅದು, ಏನಾಯ್ತು’ ಎಂದು ಕೇಳೋಣ ಎಂದರೆ ನನ್ನ ಬಳಿ ಸಂಪರ್ಕವೂ ಇರಲಿಲ್ಲ. ದೂರದ ಹಾನಗಲ್ಲಿನ ಮೂಲೆಯ ಹಳ್ಳಿಯೊಂದರ ಸರ್ಕಾರಿ ಶಾಲೆಯ ಅಕ್ಕೋರು ಅಚಾನಕ್ ಆಗಿ ಸಂಪರ್ಕಕ್ಕೆ ಬಂದಿದ್ದು ಹಾವೇರಿಯ ಸ್ನೇಹಿತರೊಬ್ಬರು ನೀಡಿದ ಮಾಹಿತಿಯಿಂದಾಗಿ. ‘ನಮ್ಮ ಹೊಲಾ ಅ ಅದರೀ. ಅ ಹೆಡ್ಮಿಸ್ಸಾಗ್ಯಾರು’ ಎನ್ನುತ್ತಿದ್ದಂತೆ ಸಂಪರ್ಕಿಸಿz.
ವಯಸ್ಸು ಮತ್ತು ಪರಿಸ್ಥಿತಿ ಎರಡೂ ಬೀರಿದ ಪ್ರಭಾವದ ಹೊರತಾಗಿಯೂ ಆವತ್ತಿನ ಚೆಂದನೆಯ ಬೆಳ್ಳಗಿನ ನಂದಿ.. ಈಗಲೂ ಅದೇ ಹಳೆಯ ಸೆಳಕುಗಳ ಛಾಯೆಯಲ್ಲಿ ಹಾಗೆಯೇ ಇದ್ದಳು. ಶಾಲೆ ಬಳಿ ಹೋಗಿ, ಹೊರಗೆ ನಿಂತು ಹೇಳಿ ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಬಂದವಳೊಂದಿಗೆ ನಡೆದು ಹೋಗಿz. ಅವಳ ಬಗೆಗೆ ಸುದ್ದಿಗಳು ಗೊತ್ತಿದ್ದುವಾದರೂ ನಿಜವಾ, ನಿನಗೂ ರಾಯ್ರಿಗೂ ಸಂಬಂಧವಿತ್ತಾ, ಹೌದಾದರೆ ಹಿಂಗ್ಯಾಕೇ? ಎನ್ನುವಂಥ ಯಾವ ಅಸಂಬದ್ಧ, ಅತಾರ್ಕಿಕ ಪ್ರಶ್ನೆಯನ್ನೂ ಕೇಳಿರಲಿಲ್ಲ. ಕಾರಣ, ನನಗೇ ಗೊತ್ತಿರುವಂತೆ ಹಾಗಾಗುವ, ಆದರೂ ಅದ್ಯಾವುದನ್ನೂ ಕೆದಕುವ, ಅವರವರ ಅನಿವಾರ್ಯತೆಗಳ ಮೂಲಕ್ಕೆ ಕೈಯ್ಯಾಡಿಸುವ ಮೂಲಕ ಮತ್ತೊಮ್ಮೆ ಮುಜುಗರ ಸೃಷ್ಟಿಸುವ ಕಾಯಕಕ್ಕೆ ನಾನ್ಯಾವತ್ತೂ ಕೈಹಾಕಿದ್ದಿಲ್ಲ. ಅಕಸ್ಮಾತಾಗೇ ಆಗಿದ್ದರೂ ಅಂತಹದ್ದರಲ್ಲಿ ಕೆದಕಿ ಮಾತಾಡಲು ನಾನೆಷ್ಟರವನು?
ಪ್ಲಾಸ್ಟಿಕ್ಕಿನ ಆರಾಮ ಕುರ್ಚಿ, ಪುಟಾಣಿ ಟೇಬಲ್ಲು, ಹರಡಿದ್ದ ವೃತ್ತಪತ್ರಿಕೆಗಳು, ಪೆಂಡಿಗಟ್ಟಲೇ ಶಾಲೆಯ ಮಕ್ಕಳ ಉತ್ತರ ಪತ್ರಿಕೆಗಳು, ಟಾಪು ಬದಲಿಸದ ದೀವಾನ, ಹಾಲ್ ನಾಚೆಗಿನದ್ದು ಕಾಣಿಸದಂತಹ ಕೊಂಚ ಕರೆಗಟ್ಟಿದ ದಪ್ಪನೆಯ ಪರದೆ ನಾನು ನೋಡುತ್ತಿದ್ದಂತೆಯೇ ಕದಲಿ ಅಗಲವಾದ ಚೌಕನೆಯ ಸ್ಟ್ಯಾಂಡಿನ ಮೇಲೆ ಭಾರ ಹಾಕುತ್ತಾ ರಾಯರು ನಿಧಾನವಾಗಿ ಹೊರಬರುತ್ತಿದ್ದರೆ, ‘ನಿಂಗ ಎಷ್ಟ ಸರ್ತಿ ಹೇಳಿಲ್ಲ. ನಾ ಬರೂ ತಂಕ ಓಡಾಡಬ್ಯಾಡ ಅಂತ’ ಎಂದು ಸರಕ್ಕನೆ ಅವರ ಬಳಿಸಾರಿ ನಂದಿ ಅವರನ್ನು ಕರೆದೊಯ್ದು ಕಿಟಕಿ ಕಡೆ ಮುಖಮಾಡಿಟ್ಟಿದ್ದ ಆರಾಮ ಕುರ್ಚಿಯಲ್ಲಿ ಕೂರಿಸಿದಳು. ಎತ್ತರದ ನಿಲುವು ಬಾಗಿದೆ. ಮೇಲೊಂದು ಮುಂಡಿಚಾಟು, ಅದರ ಜೇಬಿಗೆ ಕೈಹಾಕಿ ತೆಗೆದ ಗಾಢ ಕಲೆಗಳು, ಮೊಳಕಾಲಿನವರೆಗೆ ಮಾಂಜರಪಾಟಿನ ಪೈಜಾಮು, ನನ್ನ ನೆನಪು ಅವರಿಗಿದ್ದಂತೆ ಕಾಣಲಿಲ್ಲ. ನಂದಿಯ ಹಿಂದೆ ನಡೆದು ಅಡುಗೆಕಟ್ಟೆಯ ಪಕ್ಕದ ಸ್ಟೂಲಿನ ಮೇಲೆ ಕೂತಿದ್ದರೆ ಸ್ಸ..ಸ್.. ಎನ್ನುತ್ತಿದ್ದ ಗ್ಯಾಸಿನ ಸದ್ದೂ ಯಾಕೋ ಕಿರಿಕಿರಿ ಎನ್ನಿಸುತ್ತಿತ್ತು. ಆ ಮೌನವಂತೂ ಇನ್ನೂ.
ಬ್ಯಾಣದ ತೋಟದಲ್ಲಿ ಸಾಕಷ್ಟು ಫಸಲೂ, ದುಡಿಯುವುದರಲ್ಲಿ ಎತ್ತಿದ ಕೈಯ್ಯಾಗಿದ್ದ ರಾಯರ ಮಕ್ಕಳು ಮಾತ್ರ ಅವರಂತಾಗಿರಲಿಲ್ಲ. ಸೊಸೆಯಾಗಿ ಬಂದಿದ್ದ ಹುಡುಗಿಯ ಚುರುಕುತನದಿಂದಾಗಿ ವ್ಯವಹಾರದಲ್ಲ ಆಕೆಯ ಅಗತ್ಯತೆ ಕಾಣಿಸತೊಡಗಿದೆ. ಮಕ್ಕಳು ಮರಿಗಳೊಂದಿಗೂ ಏಗುತ್ತಾ ಇತ್ತ ಊರಿಗೆ ಹತ್ತಿರದ ಶಾಲೆಯಲ್ಲೂ ದಕ್ಷವಾಗಿ ಕೆಲಸ ನಿರ್ವಹಿಸುತ್ತಿದ್ದ ನಂದಿತಾ ಮೂಲಕ ಮಾನವಿಯತೆಯ ಇನ್ನೊಂದು ಮುಖ ನೋಡಿz ಆಗ. ತನ್ನ ಹಿಂದೆ ಏನು ನಡೆಯುತ್ತಿದೆ ಎನ್ನುವುದೇ ಆಕೆಗೆ ಗೊತ್ತಾಗಿರಲಿಲ್ಲ. ನೋಡುನೋಡುತ್ತಿದ್ದಂತೆ ರಾಯರ ವಿಶ್ವಾಸ ಹೆಚ್ಚಾಗುತ್ತಿದ್ದರೆ, ಗಂಡ ಮತ್ತು ಮನೆಯ ಇತರರ ದುಸುಮುಸು ಆಕೆಗೆ ತಗಲತೊಡಗಿತ್ತು. ವರ್ಷವೊಂದು ಕಳೆಯುವಷ್ಟರಲ್ಲಿ ಗಂಜಲದ ನೊಣದಂತೆ ಗಿಜಿಗಿಜಿ ಮಾಡುತ್ತಿದ್ದ ಗಂಡ ನೇರವಾಗಿ ರಂಪಕ್ಕಿಳಿದಿದ್ದಾನೆ. ಆಸ್ತಿಯ ವಿಷಯವಾಗಿ ಶರಂಪರ ಜಗಳಗಳು ನಡೆಯತೊಡಗಿವೆ. ಕಾರಣ ರಾಯರು ಮಾಡಿದ್ದು ಹೆಚ್ಚಾಗಿ ಸ್ವಯಾರ್ಜಿತ ಆಸ್ತಿ. ಈಗ ನಂದಿತ ರಾಯರೊಂದಿಗೆ ಚೆನ್ನಾಗಿದ್ದಾಳೆ, ಹೀಗೆ ಆದರೆ ನಾಳೆ ಅದನ್ನೆಲ್ಲ ರಾಯರು ಆಕೆಗೇ ಬರೆದುಬಿಡುವುದಿಲ್ಲ ಎಂದು ಏನು ಗ್ಯಾರಂಟಿ? ಮಗನ ಹಣೆಬರಹ ಗೊತ್ತಿದ್ದ ರಾಯರು ಆಸ್ತಿಯ ಹಿಡಿತ ಸೂಕ್ತವಾಗಿರಿಸಲು ಸೊಸೆಯನ್ನು ಆಶ್ರಯಿಸಿದ್ದರೆ, ಅರೆಪ್ಯಾಲಿ ಮಗ ಹೆಂಡತಿಯನ್ನೇ ದಾರುಣವಾಗಿ ಬಡಿದಿದ್ದಾನೆ. ಬಹುಶಃ ಹೆಂಡತಿಯನ್ನು ಬಡಿಯುವುದು ಗಂಡಸೊಬ್ಬನ ನಾಮರ್ದತನದ ಕೊನೆಯ ಹಂತ. ಅತ್ತೆಯಾದವಳು ಸೊಸೆಯ ಪರವಲ್ಲ ಎನ್ನುವಂತೆ ರಾಯರನ್ನೂ ಸೇರಿಸಿಕೊಂಡು ಆಕೆ ನಂದಿಯನ್ನು ಝಾಡಿಸುತ್ತಾ, ‘ಗಂಡಸರ ಕಚ್ಚೆ ಸಡಿಲವಾಗಿzಗ ಏನೂ ಘಟಿಸುತ್ತವೇ’ ಎನ್ನುವಂತಹ ಮಾತುಗಳಿಗೆ, ಅವರ ಹಸಿಹೊಲಸುತನಕ್ಕೆ ರೋಸಿ ನಂದಿತ ಊರು ಬಿಟ್ಟಿದ್ದಾಳೆ.
ಮನೆ ಕಡೆಗೆ ಬಾರದ ನಂದಿಯ ಮನೆಗೆ ರಾಯರೇ ಬಂದುಹೋಗಿ ಮಾಡುತ್ತಿದ್ದರೆ, ಆಸ್ತಿ ಲಪಟಾಯಿಸಲು ಮಾವನನ್ನೇ ಇಟ್ಟುಕೊಂಡಿದ್ದಾಳೆ ಎಂದು ಪಂಚಾಯಿತಿ ಕರೆದಿzರೆ. ಅಸಹ್ಯಗೊಂಡ ನಂದಿ ಆ ಕಡೆ ತಲೆ ಹಾಕಿಲ್ಲ. ಆದರೆ ಕಾಲ ಕಾಯುವುದಿಲ್ಲ. ಬದಲಾದ ಸನ್ನಿವೇಶದಲ್ಲಿ ರಾಯರು ಕೈಲಾಗದ ಹಂತದಲ್ಲಿ ಎಲ್ಲ ಅನುಭವಿಸಿಯೂ, ಅನಿವಾರ್ಯವಾಗಿ ಮಕ್ಕಳ ಕೈಗೆ ಅಧಿಕಾರ ಕೊಟಿzರೆ. ಅಷ್ಟೆ ಅವರ ನಂಬಿಕೆ ಎಕ್ಕುಟ್ಟಿತ್ತು. ಬದುಕು ಬೀದಿಗೆ ಬಿದ್ದಿತ್ತು. ಅವರ ಹರೆಯದ ದುಡಿತದ ಹೊಡೆತಕ್ಕೆ ಕಾಲು ವಕ್ರವಾಗಿವೆ. ಬೆನ್ನು ಬಿದ್ದಿದೆ. ವೃದ್ಧಾಪ್ಯ ಅವರನ್ನು ಹಿಂಡುತ್ತಿದ್ದರೆ ಜೀವನವೇ ದುಸ್ತರ ಅನ್ನುವ ಗಳಿಗೆಯಲ್ಲಿ ಮನೆಗೆ ನುಗ್ಗಿ ಮಾವನನ್ನು ಕರೆತಂದು ಸೂಕ್ತ ಚಿಕಿತ್ಸೆ ಇತ್ಯಾದಿ ಸೇವೆ ಮಾಡುತ್ತಿದ್ದಾಳೆ ನಂದಿ.
‘ಇಂಥಾ ಅಪ್ಪನ್ನ ಪಡೆಯೋಕೂ ಪುಣ್ಯಾ ಮಾಡಿರ್ಬೇಕಿತ್ತು. ಮನೆ ಜನಾನೇ ಅಪ್ಪನ ಮ್ಯಾಲೇ ಸಂಬಂಧದ ಆರೋಪ ಮಾಡಿದ್ರಲ್ಲ ಮಾರಾಯ ಆಸ್ತಿ, ಹಣ ಅನ್ನೋದು ಇಷ್ಟು ನೀಚತನಕ್ಕಿಳಿಸುತ್ತೆ ಅಂತಾ ಆವತ್ತೇ ಗೊತ್ತಾಗಿದ್ದು ನೋಡು. ಉಳಿದವ್ರು ಸಾಯ್ಲೋ.. ನಮ್ಮತ್ತೆಗೂ ಎಂಥ ರೋಗ. ಅವರೂ ಹಿಂಗಾ ಮಾಡೊದು? ದುಡ್ಡು ದುಗ್ಗಾಣಿ ಎಂದರೆ ಮನುಷ್ಯ ಯಾಕಿಂಗಾಡ್ತಾನೆ ಅಂತಾ ಈಗಲೂ ನಂಗೆ ಗೊತ್ತಾಗ್ತಿಲ್ಲ ಮಾರಾಯಾ’ ಎನ್ನುತ್ತಿದರೆ ಆಕೆ ಮಾತಾಡುವುದು ಕೇಳಿಸುತ್ತಿತ್ತೇನೋ. ಕೂತ ರಾಯರು ದುಸುಮುಸು ಮಾಡುತ್ತಿದ್ದರು. ಅ ಇದ್ದ ಒz ಬಟ್ಟೆಯಿಂದ ಒಮ್ಮೆ ಅವರ ಮುಖ ಒರೆಸಿ, ‘ಸುಮ್ನಿರು ನಿಂಗೆಂತಾ ಆಯ್ತು ಈಗ’ ಎಂದು ಮಗುವಿನಂತೆ ಗದರುತ್ತಿದ್ದರೆ, ಜೀವನದ ಆ ಗಳಿಗೆಗಳಿಗೆ ಬದುಕಬೇಕಾದ ಅವರ ಸಂಕಟಗಳೂ, ಇದೆಲ್ಲ ನುಂಗಿಯೂ ಅವರನ್ನು ನೋಡಿಕೊಳ್ಳುತ್ತಿರುವ ನಂದಿಯೂ, ಯಾರನ್ನು ನೋಡುವುದೋ ತಿಳಿಯದೆ ಚಹಾ ಕಪ್ಪು ಹಿಡಿದು ಸುಮ್ಮನೆ ಹೊರಗೆ ಬಂದು ಬಿಟ್ಟೆ. ಅದು ಅರಿವಾಗೋದು ಅವಳೊಬ್ಬಳಿಗೆ ಮಾತ್ರ.
ಕಾರಣ
ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)


No comments:

Post a Comment