Saturday, December 19, 2015

ಬದುಕಿನ ರೆಕ್ಕೆಗಳಿಗೆ ಬಣ್ಣ ತು೦ಬಿದವಳು...


ತೀರಾ ಪ್ರೀತಿಯ ಗ೦ಡಎಷ್ಟೆ೦ದರೂ ನನ್ನವನುಜೀವನ ಸ೦ಗಾತಿ ಎ೦ಬೆಲ್ಲ ಎಮೋಷನ್ನಿಗೆ ಬೀಳುವಹೆ೦ಡತಿಯರು ಮಾಡಿಕೊಳ್ಳುವ ದೊಡ್ಡ ಅನಾಹುತವೆ೦ದರೆ ಹಾಗೆ ಮಾಡಿಯೇ ಗ೦ಡಸಿಗೆ ಇಲ್ಲದ ಬೆಲೆಯನ್ನುನಿಗದಿಪಡಿಸೋದುಹುಟ್ಟಾ ಅಹ೦ಕಾರಿ ಗ೦ಡಸು ಮತ್ತಷ್ಟು ಕೆಡಲು ಕಾರಣಗಳೇ ಬೇಕಾಗುವುದಿಲ್ಲ.ಸೋಮಾರಿಯಾದವನ ಬದುಕಿನ ಚೆ೦ದದ ಪುಟ ಮಗುಚುವುದೇ ಆವಾಗ.

ಆಸ್ಪತ್ರೆಯ ಬೆತ್ತದ ಕುರ್ಚೀಲಿ ದಿನಾ ರಾತ್ರಿ ಕೂತು ತೂಕಡಿಸುವ ಕಾಯಕಕ್ಕೆ ನಾನು ಅನಿವಾರ್ಯವಾಗಿ ಒಪ್ಪಿಕೊಂಡಿz. ಆ ಹೊತ್ತಿಗೆ ಆ ಹಿರಿಯರು ಪರಿಚಯದವರೂ ಮತ್ತು ಇಂಥಾ ಕೆಲಸಗಳಿಗೆ ‘ನೀನು ಬಾ ಮಾರಾಯ’ ಎಂದು ಗೆಳೆಯ ಅಲವತ್ತುಕೊಂಡಿದ್ದಕ್ಕೆ ಒಪ್ಪಿz. ಎಮರ್ಜೆನ್ಸಿ ವಾರ್ಡುಗಳೆಂದರೆ ಪ್ರತಿ ಬೆಡ್ಡೂ ಸಾವಿನ ಕೊನೆಯ ಮೆಟ್ಟಿಲುಗಳೇ. ತರಹೇವಾರಿ ಕೊಳವೆಗಳ ಬದುಕಿನ ಜೀವದ್ರವ ರೋಗಿಯ ದೇಹದ ಹಲವು ಕೋವೆಗಳಿಗೆ ಹರಿಯುತ್ತಿರುತ್ತದೆ. ಯಾವ ಕೊಳವೆಯಲ್ಲಿಂದ ಜೀವ ಹೊರಕ್ಕೆ ಹೋಗಲಿದೆ ಅಂತ ಮಾತ್ರ ಗೊತ್ತಾಗುವುದಿಲ್ಲ. ಹಾಗಾಗಿ ಅಂಥ ವಾರ್ಡಿನಲ್ಲಿರುವವರೂ ಕೂಡ ಯಾವ ಸ್ಪಂದನೆಗೂ ನಿಲುಕದ, ಅಕ್ಷರಶಃ ಆಗೀಗ ಕಣ್ಣು ಮಾತ್ರ ಮಿಟುಕಿಸುವ, ಅನಿಯಂತ್ರಿತ ವಿಸರ್ಜನೆಗೆ ಈಡಾಗುತ್ತಿರುವ ರೋಗಿಗಳೇ ಆಗಿರುತ್ತಾರಾದ್ದರಿಂದ ಕೇರ್‌ಟೇಕರ್ ಆಗಿ ಕೂರುವವರಿಗೆ ಆ ಜಾಗ ಅಪ್ಪಟ ಓಪನ್ ನರಕ.ನಾನು ಸಾಕಷ್ಟು ಪುಸ್ತಕ, ಪತ್ರಿಕೆಗಳನ್ನು ಹರಡಿಕೊಂಡು ಮೈತುಂಬಾ ‘ಓಡೊಮಸ್ಸು’ ಬಳಿದುಕೊಂಡು ಕಾಲಿಗೆ, ಕೈಗೆ ಸೊಳ್ಳೆ ಕಚ್ಚದಿರಲಿ ಎಂದು ಸಾಕ್ಸ್ ಏರಿಸಿ ಕೂತಿರುತ್ತಿದ್ದರೆ ರೌಂಡ್ಸ್‌ಗೆ ಬರುತ್ತಿದ್ದ ಡಾಕ್ಟ್ರು ‘ಏನ್ರಿ..ನೀವೂ ಪೇಷಂಟ್ ತರಹ ಕೂತಿದ್ದೀರಲ್ಲ..’ಎನ್ನುತ್ತಿದ್ದರು. ಮೊದಲ ಎರಡು ದಿನ ‘ನೈಟ್‌ಡ್ಯೂಟಿ ಶೋಭಾಂದು.. ಆಕೆ ಬಂದಿಲ್ಲ, ರಜಾ.. ಅಮ್ಮಂಗೆ ಹುಶಾರಿಲ್ಲ..’ ಎಂದು ಇತರೆ ನರ್ಸುಗಳು ಮಾತಾಡಿಕೊಳ್ಳುತ್ತಿದ್ದರೆ ಆಕೆ ಯಾರೋ ಎಂಬಂತೆ ನಾನು ಸುಮ್ಮನಾಗಿದ್ದೇನೆ ಹೊರತು, ಮರೆತುಹೋಗಿದ್ದ ಶೋಭಾ ಮರುದಿನ ರಾತ್ರಿ ಸಿಕ್ಕಿ ಬದುಕಿನ ಕರಾಳ ಮುಖದ ಕಥೆಗೀಡಾಗಿzಳೆ ಎಂಬ ಯಾವ ಕಲ್ಪನೆಯೂ ನನ್ನಲ್ಲಿರಲಿಲ್ಲ.ಮೂರನೆಯ ದಿನ ರಾತ್ರಿ ಹನ್ನೊಂದರ ಹೊತ್ತಿಗೆ ರೌಂಡ್ಸ್‌ನಲ್ಲಿ ಶೋಭಾಳನ್ನು ನೋಡುತ್ತಿದ್ದರೆ ನಾನು ನೆನಪು ಹಾರುವ ಸಾಧ್ಯತೆಯೇ ಇರಲಿಲ್ಲ ಎನ್ನಿಸಿತ್ತು. ಚೆಂದದ ಬಿಳಿಬಿಳಿ ಹಲ್ಲುಗಳ ಜಲಪಾತದಂತೆ ಲೂಸು ಲೂಸಾಗಿ ಕೂದಲು ಬೆನ್ನಿಗಿಳಿಬಿಟ್ಟು ಸಾಗುತ್ತಿದ್ದ ನರ್ಸಮ್ಮ. ರೌಂಡ್ಸು ಮುಗಿಸಿ ಬಂದವಳೆ ‘ಏನು ಹೆಂಗಿದ್ದೀ..ಎಲ್ಲ ಬಿಟ್ಟು ಈ ವಾರ್ಡಿಗ್ಯಾಕೆ ಬಂದು ಕೂತಿದ್ದಿ..ಯಾರಿzರೆ..?’ ಎನ್ನುತ್ತ ಮಾತಿಗಿಳಿದಿದ್ದಳು. ನನ್ನ ಪ್ರಕ್ಷುಬ್ಧತೆಯ ದಿನದಲ್ಲಿ ಶೋಭಾ ನೌಕರಿಯ ಬಗೆಗೆ ಇರಬೇಕಾದ ಸ್ಪಷ್ಟ ಅವಗಾಹನೆಗಳ ಪಾಠ ಹೇಳಿಕೊಟ್ಟವಳಾದರೆ, ಮನೆ ಊಟದ ರುಚಿಯ ಮೋದಕ್ಕೂ, ತೀರಾ ಅಮ್ಮನ ಪ್ರೀತಿಗೂ ಈಡುಮಾಡಿದ್ದು ಅವರಮ್ಮ.. ಆಯಿ.ಹೀಗೆ ಆಕಸ್ಮಿಕವಾಗಿ ಸಿಕ್ಕಿದವಳಿಗೆ ‘ಆಯಿ ಹೆಂಗಿದಾಳೆ’ ಎಂದೆನ್ನುತ್ತ ಮಾತಿಗಿಳಿಯುತ್ತಲೇ ಕಣ್ಣಿಗೆ ಬಿದ್ದಿದ್ದು ಮುಖದ ಮೇಲೆ ಅಗಾಧ ಗಾಯದ ಗುರುತುಗಳು, ಒಡೆದು ಸೇರಿಸಿದ್ದ ತುಟಿ, ಹಣೆಯ ಮೇಲೊಂದು ಅಪ್ಪಟ ಕೌಟುಂಬಿಕ ದೌರ್ಜನ್ಯಕ್ಕೀಡಾದ ಸಂಕೇತವಾಗಿ ಗೀರೊಂದು ಗುಬುರು ಗುಬುರಾಗಿ ನಿಂತಿದ್ದರೆ, ಜಜ್ಜಿ ಹೋದರೂ ಹೊಳಪು ಕಡಿಮೆಯಾಗದ ಮುತ್ತಿನಂತೆ ಕಾಣಿಸುತ್ತಿದ್ದಳು ಶೋಭಾ.ಮರಾಠರ ಕುಟುಂಬವೊಂದರ ಊಟದ ರುಚಿಗೂ, ಆ ಖಾರಕ್ಕೂ, ಬೆಲ್ಲದ ತಿನಿಸುಗಳಿಗೂ ಕೊನೆಗೆ ಅವರ ಮನೆಯ ಅನ್ನದ ಋಣಕ್ಕೂ ನನ್ನ ನಾ ಕೆಡುವಿಕೊಂಡದ್ದು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ. ನೌಕರಿ ಹುಡುಕಿಕೊಂಡು ಅಲೆಯುವಾಗ ಹುಮ್ಮಸ್ಸಿತ್ತಾದರೂ ಅಲ್ಲಿ ಹೆಂಗಿರಬೇಕು, ಹೇಗೆ ದಕ್ಷತೆಯಿಂದ ಕೆಲಸ ಮಾಡಬೇಕು, ರೆಸ್ಪೆಕ್ಟು ಎಂದರೇನು ಎಂಬೆಲ್ಲ ಯಾವ ಗೈಡನ್ಸೂ ಮತ್ತು ತಯಾರಿ ಎರಡೂ ನನಗಿರಲಿಲ್ಲ. ಟೈಮಿಗೆ ಸರಿಯಾಗಿ, ರೀಫಿಟ್ಟಿಂಗ್ ಮಾಡಿದ್ದ ಬಟ್ಟೆಗಳನ್ನು ಕೆಂಡದ ಇಸಿಯಲ್ಲಿ ಒತ್ತಿಕೊಂಡು ನೀಟಾಗಿ ನಿಲ್ಲುವುದರ ವಿನಾ ನೌಕರಿಯ ಬಗ್ಗೆ ಇರಬೇಕಾದ ಸ್ಪಷ್ಟ ಅವಗಾಹನೆ ನನಗಿರಲೇ ಇಲ್ಲ. ಜೈಹಿಂದ್ ಇಂಡಸ್ಟ್ರೀಸ್‌ನಲ್ಲಿ ನಿಕ್ಕಿ ಮಾಡಿದ ದಿನಕ್ಕಿಂತ ಒಂದಿನ ತಡ ಮಾಡಿ ಮೊದಲ ದಿನವೇ ಬೈಸಿಕೊಂಡಿz. ಅದಾದ ಮರುದಿನವೇ ಮತ್ತೆ ಬೈಸಿಕೊಂಡು ಈಚೆ ಬರುವಾಗ ಪಕ್ಕದ ರೂಮಿನಲ್ಲಿ ಆಗಷ್ಟೆ ಕ್ಯಾಂಟಿನ್ ಹುಡುಗ ಇರಿಸಿ ಹೋಗಿದ್ದ ‘ಆಲೂ ಪೊಹೆ’ ತಿನ್ನುತ್ತಿದ್ದ ಶೋಭಾ ಎನ್ನುವ ನನಗಿಂತ ಆರೆಂಟು ವರ್ಷದ ಸೀನಿಯರ್ ಒಬ್ಬಳು ಕಿಸಕ್ಕೆಂದು ನಕ್ಕಿದ್ದು ಮೈಯೆಲ್ಲ ಉರಿದು ಹೋಗಿತ್ತು.ಆವತ್ತೆ ಸಂಜೆ ನಾನಿದ್ದ ಚಾಳಿನ ಪಕ್ಕದ ಆಕೆ ಸಿಕ್ಕಬೇಕೆ. ಹೋಗಿ ನಿಲ್ಲಿಸಿಕೊಂಡು ಎರ್ರಾಬಿರ್ರಿ ಬೈದಾಡಬೇಕೆನ್ನುವ ತಯಾರಿಯಲ್ಲಿದ್ದರೂ ಆಕೆಗೆ ಯಾವ ಕೋಪವೂ ಬಂದಿರಲಿಲ್ಲ. ಆದರೆ, ಜೊತೆಗೆ ಹಿಂದಿನಿಂದ ಬರುತ್ತಿದ್ದ ಅವರಮ್ಮ ಮಾತ್ರ ‘ಕಾಯ್ ಝಾಲ್.. ಸಗಳ್ಯಾ ಕಡೆ ಕಶಾಲಾ ಭಾಂಡಣ್ ಕರತೋ.. ಶೋಭಿ..’ ಎನ್ನುತ್ತಿದ್ದರೆ ‘ಆಯಿ...ಬಗಾ ಇಕಡೆ..’ ಎನ್ನುತ್ತ ನಾನು ಶುದ್ಧ ಮರಾಠಿಯಲ್ಲಿ ಮಾತಿಗಿಳಿಯುತ್ತಿದ್ದಂತೆ ಅರ್ಧ ಗಂಟೆಯಲ್ಲಿ ಅಮ್ಮ-ಮಗನೇ ಎನ್ನುವಂತಾಗಿ ಹೋಗಿದ್ದೆವು. ಅದವಳಿಗೆ ಇನ್ನಷ್ಟು ದುಸುಮುಸು ಮಾಡಲು ಕಾರಣವಾಗಿತ್ತಾದರೂ ಕೆಲವೇ ದಿನದಲ್ಲಿ ಅವರಪ್ಪನ ಸೈಕಲ್ಲು ಹೊಡೆದುಕೊಂಡು ಅದರ ಮೇಲೆ ಅವಳನ್ನೂ ಹೇರಿಕೊಂಡು ಹೊರಡುವ ಮಟ್ಟಿಗಿನ ಸಲಿಗೆ ಬೆಳೆದಿತ್ತು. ದಿನಾ ಬಸ್ಸು, ಆಟೋ ಹಿಡಿಯುವ ಕಸರತ್ತಿಗೆ ಹೊರತಾದುದೂ ಅವಳಿಗೆ ಅನುಕೂಲವೂ ಆಗಿತ್ತು. ತಂದೆ ಇಲ್ಲದ, ತಮ್ಮನೊಬ್ಬ ಓದುತ್ತಿರುವ, ಅಮ್ಮನ ಅಲ್ಲಿ ಇಲ್ಲಿನ ಗಳಿಕೆಯಲ್ಲಿ ಸಾಗಿ ಮೇಲೆ ಬಂದ ಕುಟುಂಬ ಅದು. ಅದರಲ್ಲಿಯೇ ಓದಿ ನರ್ಸಿಂಗ್ ಸೇವೆಗೆ ಸೇರಬೇಕಿದ್ದ ಶೋಭಾ, ತಕ್ಷಣದ ಕೆಲಸಕ್ಕೆಂದು -ಕ್ಟ್ರಿಯ ಲೆಕ್ಕಪತ್ರ ವ್ಯವಹಾರ ನೋಡಿಕೊಳ್ಳುತ್ತಿದ್ದಳು.ಕ್ರಮೇಣ ಅವರಮ್ಮ ನನಗೆ ಕೊಂಚ ಹೆಚ್ಚೇ ಹತ್ತಿರವಾದರು. ಅದರಲ್ಲೂ ಅಪ್ಪನ ಕೋಟೆ ಮತ್ತು ಅಮ್ಮನ ತೆಕ್ಕೆಯಿಂದ ಹೊರಬಿದ್ದು ಬ್ಯಾಚುಲರಾಗಿ ಅರೆಬರೆ ಹೋಟೆಲುಗಳ ಊಟಕ್ಕೆ ತಗುಲಿಕೊಂಡಿರುವ ನನ್ನಂಥವರಿಗೆ ಇಂಥಾ ಸಂಬಂಧ ಬೆಳೆದುಬಿಟ್ಟರೆ ಅದಕ್ಕಿಂತ ದೊಡ್ಡ ಜರೂರತ್ತು ಆ ಹೊತ್ತಿಗಿನ್ನೊಂದು ಇರಲಾರದು. ವಾರದಲ್ಲಿ ನಾಲ್ಕು ದಿನ ಖುದ್ದು ಕೂತು ಅವರಮ್ಮ ಬಡಿದು ಹಾಕುತ್ತಿದ್ದ ರೊಟ್ಟಿ ಸುಡುತ್ತಿz. ಅದರ ಜೊತೆಜೊತೆಗೆ ಕಾಯಿಪಲ್ಯೆ ಹೆಚ್ಚಿ, ಕೆಲವೊಮ್ಮೆ ಬಾಂಡ್ಲಿ ತುಂಬಿ ರವೆ ಹುರಿದಿಡುತ್ತಿz. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯ ಹುಡುಗರಿಗೆ ಅಡುಗೆಮನೆಯದ್ದು ಹುಟ್ಟಾ ಸಂಬಂಧ. ಹಾಗಾಗಿ ಅದಕ್ಕೆ ಕುದುರಿಕೊಳ್ಳುವುದು ಇನ್ನೂ ಸುಲಭ. ಇಂಥ ಪಾಪದ ಮೂತಿಯ ಅರೆಬರೆ ಹುಂಬತನದ ನನ್ನಂಥ ಎಡವಟ್ಟ ಹುಡುಗ ಆಯಿಗೆ ತುಂಬ ಹೊಂದಿಕೆಯಾಗುತ್ತಿತ್ತು. ನನಗೋ ಅವರ ಮನೆಯ ಸೈಕಲ್ಲು ಅದ್ಭುತ ಆಕರ್ಷಣೆ. ಯಾವ ಕೆಲಸಕ್ಕೆ ಬೇಕಾದರೂ ಅದನ್ನು ಬಳಸುವ ಸ್ವಾತಂತ್ರ್ಯ ಬೇರೆ ದಕ್ಕಿಬಿಟ್ಟಿತ್ತಲ್ಲ. ಶೋಭಾಳ ಅಪ್ಪ ಇಟ್ಟುಹೋಗಿದ್ದ ಸೈಕಲ್ಲು ಯಾರೂ ಬಳಸದೆ ಕೂತಿತ್ತು. ಮೊದಲೆರಡು ದಿನ ಕಿಇಂ.. ಕಿಇಂ.. ಎನ್ನುತ್ತಿತ್ತಾದರೂ ಕ್ರಮೇಣ ನಿಶ್ಶಬ್ದವಾಗಿ ಚಲಿಸತೊಡಗಿತ್ತು ಹರ್ಕ್ಯೂಲೆಸ್ಸು.‘ಆಯಿ ಝುಣಕಾ..ಘೇವುನ್ ಏತೋ..’ ಎಂದು ಅಲ್ಲಿಂದ ಹೊರಟು ಊರೆ ಹರಗ್ಯಾಡಿ ಬರುತ್ತಿz. ಜೊತೆಗೆ ಬೇಕಾದ ಸಾಮಾನುಗಳೂ. ಆದರೆ ಆ ಮನೆಯ ಅನ್ನ ಮತ್ತು ಊರಿನ ಋಣ ಎರಡೂ ನನಗೆ ತುಂಬ ದಿನ ಇರಲಿಲ್ಲ. ತೀರಾ ಅಸಡ್ಡೆಯಿಂದ ಇದ್ದ ನನ್ನನ್ನು ನೌಕರಿಯಿಂದ ನಾಳೆ ಕಿತ್ತಾಕುತ್ತಾರೆ ಎನ್ನಿಸುತ್ತಿದ್ದಂತೆ ನಾನೇ ನಿಗುರಿ ನಿಂತುಕೊಂಡು ‘ನನ್ನ ಸಂಬಳ ಈ ಆಡ್ರೆಸ್ಸಿಗೆ ಎಂ.ಒ. ಮಾಡ್ರಿ’ ಎಂದು ಇನ್ನಿಷ್ಟು ರಾವಾಗಿ ಹೊರಬಂದಿz. ಅಷ್ಟೆ.. ಮರುಮಾತಿಲ್ಲದೆ ಥಾಲಿಪಿಟ್ಟಿಗೆಂದು ಕಟ್ಟಿಕೊಂಡಿದ್ದ ಹಿಟ್ಟು, ಫಿಟ್ಟಿಂಗ್ ಬಟ್ಟೆಗಳ ಗಂಟು ಎರಡೂ ಹಿಡಿದು ಮತ್ತೆ ರಸ್ತೆಗಿಳಿದಿz. ಶೋಭಾ ಮತ್ತು ಆಯಿ ಇಬ್ಬರೂ ಆವತ್ತೆ ಮರೆಯಾಗಿಬಿಟ್ಟಿದ್ದರು.ಆವತ್ತಿನ ಮಟ್ಟಿಗೆ ಶೋಭಾಳೊಂದಿಗೆ ಸಾಕಷ್ಟು ಮಾತಾಡಿದೆನಾದರೂ ತತಕ್ಷಣಕ್ಕೆ ಆಯಿಯನ್ನು ಹೋಗಿ ನೋಡುವುದು ಸಾಧ್ಯವಾಗಲೇ ಇಲ್ಲ. ನನ್ನ ನಿಗರಾಣಿಯಲ್ಲಿದ್ದ ಹಿರಿಯರು ಇಲ್ಲವಾಗಿದ್ದರು. ಇತ್ತ ಶೋಭಾ ರಾತ್ರಿ ಪಾಳಿಯಲ್ಲದೆ ಬೇರೆ ಪಾಳಿಗೆ ಬರುತ್ತಲೇ ಇರಲಿಲ್ಲ. ಕಳೆದ ಎಂಟ್ಹತ್ತು ವರ್ಷಗಳಿಂದ ಆಕೆ ರಾತ್ರಿ ಮಾತ್ರವೇ ಕಾರ್ಯನಿರ್ವಹಿಸುತ್ತಿzಳಂತೆ. ಆ ಕ್ಷಣಕ್ಕೆ ಶೋಭಾಳ ಕಥೆ ಅರಿವಿಗೆ ದಕ್ಕದಿದ್ದರೂ ಆಕೆಗೆ ರಾತ್ರಿಗಳ ಬಗ್ಗೆ ಆವರಿಸಿದ್ದ ಭಯದ ನೆರಳು ಕೇಳಿದಾಗ ಬೆನ್ನಮೂಳೆಯಲ್ಲಿ ಭಯದ ಸೆಳಕೊಂದು ಅರಿವಿಲ್ಲದಂತೆ ಮೂಡಿತ್ತು.‘ರಾತ್ರಿನ್ಯಾಗ ನಿದ್ದಿ ಅನ್ನೊದು ಇಲ್ಲ ಅಂತ ಗೊತ್ತಾತಲ್ಲ. ಅದಕ್ಕೆ ಆವತ್ತಿಂದ ರಾತ್ರಿ ಪಾಳೇಕೆ ಬರ್ಲಿಕ್ಕ ಹತ್ತಿದೆ...’ ಎನ್ನುತ್ತಾ ಕಥೆ ಹೇಳುತ್ತಿದ್ದರೆ ಸರಿರಾತ್ರಿಯಲ್ಲಿ ಕುಡಿದ ಬಾಯಿಯಲ್ಲಿ ಆಕೆಯನ್ನು ಹರಿದುಕೊಳ್ಳುತ್ತಲೂ, ನಿದ್ರೆಯ ಆಳದಲ್ಲಿzಗ ಮೈಮೇಲೆ ಸರಕ್ಕನೆ ಸುಡುತ್ತಿದ್ದ ಸಿಗರೇಟಿನ ಕಿಡಿಗಳೂ, ಕೈಗೆ ಸಿಕ್ಕಿದ ರಿಮೋಟು, ಟವಲ್ಲು, ತಂಬಿಗೆ, ಸಾರಿನ ಸೌಟು, ಉಂಡೆದ್ದ ತಟ್ಟೆಯ ಏಟು, ಹಾಯ್ದು ಹೋಗುತ್ತಿzಗ ಅರಿವಾಗೋ ಮೊದಲೇ ಅ ಬಿದ್ದಿರುತ್ತಿದ್ದ ಮೊನಚು ಪೆನ್ಸಿಲ್ಲು ತುದಿಯಿಂದ ಹಿಂಭಾಗಕ್ಕೆ ಸರಕ್ಕನೆ ತಿವಿದು ಬಿಟ್ಟಲ್ಲಿ ಆಗುವ ಅನಿರೀಕ್ಷಿತ ಭಯ ಮತ್ತು ನೋವು. ಬೆತ್ತಲೆ ನಿಲ್ಲಿಸಿ ಮನೆಯಿಂದ ಹೊರಹಾಕುವ ಬೆದರಿಕೆ, ಮಧ್ಯರಾತ್ರಿಯಲ್ಲಿ ಮೈಮೇಲೆ ಬಿಸಿನೀರು ಬಿzಗ ಆಗಿರಬಹುದಾದ ಯಾತನೆ ಇವನ್ನೆಲ್ಲ ಸುಮ್ಮನೆ ಆಲಿಸುತ್ತಿದ್ದ ನನಗೆ ಎದೆ ಝಂದಿತ್ತು.ಅವನ್ನೆಲ್ಲ ದಾಟಿ ಶೋಭಾ ತನಗೂ ಆಯಿಗೂ ಮತ್ತೊಮ್ಮೆ ಬದುಕು ಗಟ್ಟಿಗೊಳಿಸಿಕೊಂಡಿದ್ದಳು. ಆದರೆ, ಅದಕ್ಕೂ ಮೊದಲು ಸತತವಾಗಿ ಅವಳ ಬದುಕು ನರಕದಲ್ಲಿ ಸವೆದುಹೋಗಿತ್ತಲ್ಲ ಅದೆಲ್ಲ ಮುಂದಿನ ವಾರಕ್ಕಿರಲಿ. ಆದರೆ ಆಕೆಯ ಪ್ರಶ್ನೆಯನ್ನು ಇವತ್ತಿಗೂ ಮನಸ್ಸಿನಿಂದ ತೆಗೆದು ಹಾಕಲಾಗುತ್ತಿಲ್ಲ. ಗಂಡಸರಿಗೆ ಬೇಕಿರೋದಾದರೂ ಏನು..? ಮನಸ್ಸು ಅನ್ನೋದೆ ಇರೋದಿಲ್ವಾ..? ಅದಕ್ಕುತ್ತರಿಸಲು ನನ್ನಲ್ಲಿ ಪದಗಳಿರಲಿಲ್ಲ. ಮನಸ್ಸು ಅದಕ್ಕೂ ಮೊದಲೇ ಖಾಲಿಯಾಗಿತ್ತು ಆಕೆಯ ಕಥೆ ಕೇಳಿ..ಕಾರಣಅವಳು ಎಂದರೆ...

No comments:

Post a Comment