Saturday, December 12, 2015

ದೇವರು ಮತ್ತೊಮ್ಮೆ ಕಣ್ಣು ಹಾಕದಿರಲಿ...

ಯಾವ ಪಾಪ ಮಾಡದಿದ್ದರೂ ಬದುಕು ತಿರುಗಣಿಗೆ ಸಿಕ್ಕಿಬಿಡುತ್ತದೆ. ಕೆಲವೊಬ್ಬರ ಬದುಕಿನಲ್ಲಿ ಮಾತ್ರ ತುಂಬು ಚೆಂದದ ಘಳಿಗೆಗಳಲ್ಲೂ ಗಾಢವಾದ ವಿಷಾದವೊಂದು ಹಿನ್ನೆಲೆಯಾಗಿ ಉಳಿದೇ ಇರುತ್ತದಲ್ಲ ಅದು ಯಾವ ಕರ್ಮದ ಫಲ? ಎಲ್ಲ ಚೆಂದವಿದ್ದರೂ ಕೊನೆ ಮಾತ್ರ ಆಘಾತವೇ ಅದರೊಂದಿಗೆ ಬದುಕೂ. ಇದೇನು ದೇವರೂ ಕಣ್ಣು ಹಾಕಿಬಿಡುತ್ತಾನಾ...?

ಆ ಮಗು ಮಾತಿಗೂ ಮೊದಲು ಅಪ್ಪ.. ಅಪ್ಪ.. ಎನ್ನುತ್ತಾ ಓಡಾಡುತ್ತಿದ್ದರೆ, ಅವಳಪ್ಪನೂ ‘ಏನವಾ.. ಈಗ ಗಪ್ಪ ಕುಂಡ್ರಲಿಲ್ಲಂದರ ಬಾಯಿ ಒಡದ ಹೋಗತದ ನೋಡು. ಸುಮ್ನಿರತಿಯೋ ಇ..’ ಎನ್ನುತ್ತಾ ಪ್ರೀತಿಯಿಂದ ಗದರುತ್ತಿದ್ದ. ಬೆಳಗ್ಗೆಯಿಂದ ಸಂಜೆಯವರೆಗೂ ಅಪ್ಪ-ಮಗಳಿಬ್ಬರೂ ಗಲ ಗಲ ಎನ್ನುತ್ತ ಓಡಾಡುತ್ತಿದ್ದರು. ಆ ಹೊತ್ತಿಗಾಗಲೇ ಅರೆಬರೆಯಾಗಿ ಒಬ್ಬರಿಗೊಬ್ಬರು ಬದುಕಬೇಕು ಎಂದು ಅವರಿಬ್ಬರಿಗೂ ಗೊತ್ತಾಗಿಬಿಟ್ಟಿತ್ತು. ಅವರನ್ನುನೋಡುತ್ತಿದ್ದರೆ ಊರಿನ ಕುಟುಂಬಗಳು ಯಾವತ್ತೂ ಸಹಾಯಕ್ಕೆ ನಿಲ್ಲಲು ತಯಾರಿದ್ದವು. ಅದರಲ್ಲೂ ಆ ಮಗುವನ್ನು ಬೆಳೆಸುತ್ತಿದ್ದ ರೀತಿಗೆ ಯಾರೆಂದರೆ ಅವರು ವೆಂಕಣ್ಣನ ಮೇಲೆ ಅಭಿಮಾನ ಪಡುತ್ತಿದ್ದರು. ಮೇಲಾಗಿ ಬಡತನವನ್ನೇ ಹಾಸಿ ಹೊದೆಯುವ ಊರ ಮುಂದಿನ ಕಟ್ಟೆಯೇ ಇವತ್ತಿಗೂ ಜಾಗತಿಕ ಚರ್ಚೆಯ ವೇದಿಕೆಯಾಗುವ ಉತ್ತರ ಕರ್ನಾಟಕದಲ್ಲಿ ಸಂಬಂಧಕ್ಕೂ, ಗೌರವಕ್ಕೂ ತುಂಬ ಬೆಲೆ. ಯಾರನ್ನೂ ಏಕವಚನದಲ್ಲಿ ಮಾತಾಡಿಸುವ ಜನ ತುಂಬ ಕಮ್ಮಿ. ಕೊಂಚ ಓದಿಕೊಂಡವರನ್ನಂತೂ ‘ಬರ್ರಿ ಸಾಹೇಬ್ರ’ ಎಂದು ಮಾತಾಡಿಸುವ, ರೀ ಎಂದಿಲ್ಲದ ಭಾಷೆ ಇಲ್ಲಿ ಅಲಭ್ಯ.
ಅಪರಿಚಿತರು ಮತ್ತು ಹೊರ ಊರಿನವರಿಗೆ ತುಂಬು ಗೌರವ ಕೊಡುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೀವಂತಿಕೆ ಉಳಿದಿರುವುದು ಪ್ರತಿ ಮಾತಿನ ಕೊನೆಯಮ್ಮೆ ಅಪರಿಚಿತನೂ ಕಾಕಾ, ಮಾಮ, ಅತ್ತಿ, ಯವ್ವಾ, ಕಾಕಿ ಇತ್ಯಾದಿ ಸಂಬಂಧಿ ಉವಾಚಗಳಿಂದ.ಅಸಲಿಗೆ ನನಗೂ ವೆಂಕಣ್ಣನಿಗೂ ವಯಸ್ಸಿನಲ್ಲಿ ದಶಕಗಳ ಅಗಾಧ ವ್ಯತ್ಯಾಸ. ಆದರೆ ನನಗ್ಯಾವತ್ತೂ ಒಂದು ದಿವಿನಾದ ಬಂಧವನ್ನು ಏರ್ಪಡಿಸಿಕೊಳ್ಳಲು ಆಯಸ್ಸು, ಹಂತ, ಮಟ್ಟ, ಜಾತಿ, ದುಡ್ಡು ದುಗ್ಗಾಣಿ ಇದ್ಯಾವುದೂ ಅಡ್ಡ ಬಂದಿದ್ದೇ ಇಲ್ಲ. ಅವರ ವಿಶ್ವಾಸ ಮತ್ತು ಅಭಿಮಾನ ದೊಡ್ಡದು.
ಹಾಗಾಗಿ ರಸ್ತೆಯ ಮೇಲೆ ಅಬ್ಬೇಪಾರಿಯಂತಿರುವಾಗ ಕೌಟುಂಬಿಕ ಸಾಮರಸ್ಯದ ಹೊಸ ಹೊನಲಿಗೆ ನಮ್ಮನ್ನೂ ಸೇರಿಸಿಕೊಂಡು ನಮ್ಮ ಸಂಜೆಯ ಕಾರ್ಯಕ್ರಮಗಳಿಗೆ ಕೆಲಸಮಯ ಬ್ರೇಕು ಹಾಕಿಸಿದವನು ವೆಂಕಣ್ಣ.ಆವತ್ತು ದೀಪಾವಳಿ, ರಜೆಯ ದಿನವಾಗಿದ್ದರಿಂದ ನಾವೆಲ್ಲ ಹೊರಹೊರಡುವ ಯೋಚನೆಯಲ್ಲಿದ್ದರೆ ವೆಂಕಣ್ಣ ಎದುರಿಗೆ ನಿಂತು ‘ಎಲ್ಲಿ ಹೊಂಟ್ರೆಪಾ.. ದೀಪಾ ಹಚ್ಚೋದಿನು. ಬರ್ರಿ.. ಚಹಾ ಮಿರ್ಚಿ ಮಾಡೋಣು’ ಎನ್ನುತ್ತಾ ನಮ್ಮ ಯೋಚನೆಗಳ ಧಾಟಿ ಮತ್ತು ಕಾರ್ಯದ ದಿಕ್ಕು ಬದಲಿಸಿದವನು. ಅನಂತರದಲ್ಲಿ ಒಂದೊಂದಾಗಿ ವೆಂಕಣ್ಣನ ವಿಷಯ ನಿಧಾನಕ್ಕೆ ನನ್ನರಿವಿಗೆ ಬರುವ ಹೊತ್ತಿಗೆ ನಾನು ಸಲೀಸಾಗಿ ವೆಂಕಣ್ಣನ ಮನೆ ಹೊಕ್ಕು ಕೂತು ಚವಳಿಕಾಯಿ ಮುರಿಯುತ್ತಾ ‘ಇನೊಂದಸಲ್ಪ..ಬೇಕೇನು..? ನೀ ಉಳ್ಳಾಗಡ್ಡಿ ಜಜ್ಜಿಡು. ರೊಟ್ಟಿ ತಂದಬಿಡ್ತೇನಿ...’ ಎನ್ನುವಂತಾಗಿ ಹೋಗಿತ್ತು.ಚೆಂದದ ಸಂಸಾರದ ಮೇಲೆ ಅದ್ಯಾವ ಮಾರಿಯ ಕಣ್ಣು ಬಿತ್ತೋ ಗೊತ್ತಿಲ್ಲ. ಚೆಂದದ ಮಗು ವೆಂಕಣ್ಣನ ಪಾಲು ಮಾಡಿ ಅಂತೂ ಇಂತೂ ಹಡೆದಾಗಿನಿಂದ ಒಂದಲ್ಲ ಒಂದು ತಾಪತ್ರಯಕ್ಕೀಡಾಗುತ್ತಲೇ ಇದ್ದ ಅವನ ಹೆಂಡತಿ ಕಣ್ಮುಚ್ಚಿದ್ದಳು. ನಾಲ್ಕಾರು ದಿನ ಕಳೆಯುವ ಹೊತ್ತಿಗೆ ಮಗು ಬಂದವರಿಗೆ ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ ಅಂತ...’ ಎನ್ನುತ್ತಿದ್ದರೆ ಊರಿಗೆ ಊರೇ ಕಣ್ಣೀರಿಡುತ್ತಿತ್ತು. ವೆಂಕಣ್ಣ ಮಗುವನ್ನೆತ್ತಿಕೊಂಡು ರಸ್ತೆಗೆ ಬಂದು ಮುಗಿಲಿಗೆ ಮುಖಮಾಡುವುದನ್ನೇ ಬಿಟ್ಟುಬಿಟ್ಟಿದ್ದ.
ಹುಡುಗಿ ಅಪ್ಪನಿಗಂಟಿಕೊಂಡು ತನ್ನ ಗೊಣ್ಣೆ ಮೂಗನ್ನು ಅವನ ಬೆನ್ನಿಗೆ ಉಜ್ಜುತ್ತ, ಅಳು ಬಂದು ನಿಂತು ಕರೆಗಟ್ಟಿದ್ದ ಕೆನ್ನೆಯನ್ನು ಅವನ ಹೆಗಲಿಗೊರಗಿಸಿ ಅ ನಿದ್ರೆ ಮಾಡಿರುತ್ತಿದ್ದರೆ ಓಣಿಯ ಜನರೆಲ್ಲ ‘ವೆಂಕು ದೇವರು ಭಾಳ ಕೆಟ್ಟಂವ ಬಿಡಪಾ...’ ಎಂದು ಏಕಪಕ್ಷೀಯ ನಿರ್ಣಯ ಜಾರಿ ಮಾಡುವಂತಾಗಿತ್ತು. ದೇವರು ಅವನ ಜೀವನ ಪ್ರೀತಿಗೆ ತೆರಿಗೆ ಕೇಳಿಬಿಟ್ಟಿದ್ದ. ಹುಡುಗಿ ಹೈಸ್ಕೂಲು ಹೋಗುವ ಹೊತ್ತಿಗೆ ನಮ್ಮ ಮಧ್ಯೆ ಸಂಪರ್ಕ ಕಡಿದುಹೋಗಿತ್ತು. ಎರಡ್ಮೂರು ವರ್ಷದ ಹಿಂದೊಮ್ಮೆ ಕಾರ್ಯಕ್ರಮವೊಂದಕ್ಕೆ ಆ ಕಡೆಗೆ ಹೋಗಿz. ಕೊನೆಯಲ್ಲಿ ಕಾಯ್ದು ನಿಂತ ಕುರುಚಲು ಗಡ್ಡ. ಬಿಳಿಬಿಳಿ ತಲೆಯ ವೆಂಕಣ್ಣ ತಕ್ಷಣಕ್ಕೆ ಗುರುತು ಸಿಗದಂತಾಗಿದ್ದರೂ ಪರಿಚಯ ಹೇಳಿಕೊಂಡು ಮಾತಾಡಿಸಿದ್ದ. ಅವನ ಪರಿಸ್ಥಿತಿ ಮತ್ತು ಇತಿಹಾಸ ಗೊತ್ತಿದ್ದುದರಿಂದ ‘ವೆಂಕಣ್ಣ ಮನಿ ಕಡಿಗೆ ಬರ್ತೀನ್ರಿ.. ವ್
ಯಾಳಿzಗ ಒಂದು ಮಿಸ್ ಕಾಲ್ ಕೊಡ್ರಿ’ ಎಂದು ಬಂದಿದ್ದಾ. ಅದಾಗಿ ಒಂದೆರಡು ವರ್ಷದಲ್ಲಿ ಎರ್ಡ್ಮೂರು ಸರ್ತಿ ಮಾತಾಡಿz. ಕೊನೆಯ ಬಾರಿಗೆ ಮಾತಾಡಿದಾಗ ಮಗಳು ಫೋನ್ ತೆಗೆದಿದ್ದಳು. ಮಾತಾಡಲು ಏನೂ ಉಳಿದಿರಲಿಲ್ಲ. ಧಡಪಡಿಸಿ ಅತ್ತ ವೆಂಕಣ್ಣನ ಮನೆಯ ಕಡೆಗೆ ಕಾರು ಹರಿಸಿದ್ದಾ. ಹುಡುಗಿ ಬೆಳೆಯುತ್ತಲೇ ಪ್ರತಿಯೊಂದನ್ನೂ ಅರ್ಥಮಾಡಿಕೊಳ್ಳುತ್ತಾ, ಅಮ್ಮನ ನೆನಪಿನಿಂದ ಮನಸ್ಸು ಕಂಗೆಡುತ್ತಿದರೂ ಅವನಿಗೂ ನೋವಾಗದಂತೆ ಬೆಳೆದುಬಿಟ್ಟಿzಳೆ. ಒಪ್ಪವಾಗಿ ಓದಿಕೊಂಡ ಹುಡುಗಿ ಕೆಲಸ ಇತ್ಯಾದಿ ಎಲ್ಲದರಲ್ಲೂ ಅಚ್ಚುಕಟ್ಟಾಗಿ ಬೆಳೆದಿದ್ದಾಳೆ. ಕೈಗೆ ಸಾಕಷ್ಟು ದುಡ್ಡು ದುಗ್ಗಾಣಿ ಬರುತ್ತಿದ್ದಂತೆ ವೆಂಕಣ್ಣನಿಗೆ ಕೆಲಸ ಬೊಗಸೆ ಬಿಟ್ಟು ತನ್ನೊಂದಿಗಿರುವಂತೆ ಬಲವಂತವಾಗಿ ಕೂರಿಸಿಕೊಂಡು ಮಗಳೂ ಅಮ್ಮನೆ ಎನ್ನುವಷ್ಟು ಚೆಂದವಾಗಿ ಅವನ ಇಳಿ ವಯಸ್ಸಿನ ಸಂಜೆಗಳಿಗೆ ಅವನೊಂದಿಗೆ ಇದ್ದುಬಿಟ್ಟಿzಳೆ. ವೆಂಕಣ್ಣನಿಗೂ ಮನದ ತಾಯಿ ಇಲ್ಲದ ಹುಡುಗಿ ಎಂದು ಮುಚ್ಚಟೆಯಿಂದ ಬೆಳೆಸಿದ್ದನಲ್ಲ. ಮುಖ ಸಣ್ಣಗೆ ಮಾಡುತ್ತಾ ಕೂತಿರುತ್ತಾನೆ. ಮಡದಿಯ ಮೋಹಕ್ಕಿಂತ ಆಕೆಯಿzಗ ಜೀವನದಲ್ಲಿ ಬದುಕಿನ ಸಂಭ್ರಮ ಮತ್ತು ಮಗುವೊಂದರ ಬೆಳವಣಿಗೆಯಲ್ಲಿ ತಾಯಿ ವಹಿಸುವ ಪಾತ್ರವಿದೆಯಲ್ಲ ಅದರಲ್ಲೂ ಹೆಣ್ಣು ಮಗುವಿಗೆ ಅವಶ್ಯಕವಿದ್ದಷ್ಟು ಇನ್ನಾರಿಗೂ ಇರಲಿಕ್ಕಿಲ್ಲ.
ಕಾರಣ ಅಪ್ಪನಾದವನು ಅದೆಷ್ಟೇ ಮುಚ್ಚಟೆಯಿಂದ, ಮುತುವರ್ಜಿ ವಹಿಸಿ ಮಗುವನ್ನು ಬೆಳೆಸಿದರೂ ಹೆಣ್ಣು ಮಕ್ಕಳಿಗೆ ಅಮ್ಮನ ಮಡಿಲಿನ ಆರ್ದ್ರತೆ ಮತ್ತು ರಕ್ಷಣಾತ್ಮಕ ಭಾವವೇ ಬೇರೆ. ಆ ಸವೇಂದನಾತ್ಮಕ ಭಾವವಿಲ್ಲದ ಬೆಳವಣಿಗೆ ಯಾವಾಗಲೂ ಬದುಕಿನಲ್ಲಿ ಒಂದು ರೀತಿಯ ನಿರ್ವಾತವನ್ನು ಳಿಸಿಬಿಟ್ಟಿರುತ್ತದೆ. ಅಂಥಾ ಭಾವಕ್ಕೀಡಾಗುವ ಮಗುವು ಸಹಜವಾಗೇ ಅನಾಥವಾದ ಭಾವದ ಜೊತೆಗೆ ಅತೀವ ಪ್ರೀತಿಯ ನಿರೀಕ್ಷೆಯನ್ನೂ ಅಪೇಕ್ಷಿಸುತ್ತಿರುತ್ತದಲ್ಲ. ಅವೆಲ್ಲದರಿಂದ ವಂಚಿತವಾದ ಹುಡುಗಿಯ ಬದುಕು ಆದಷ್ಟೇ ಹಸನಾಗಿರಲಿ ಎಂದು ವೆಂಕಣ್ಣ ಅಪ್ಪ-ಅಮ್ಮ ಎಲ್ಲವೂ ಆಗಿದ್ದ. ಹುಡುಗಿ ಈಗ ಅವನನ್ನು ಥೇಟು ಅಮ್ಮನಂತೆ ನೋಡಿಕೊಳ್ಳತೊಡಗಿದ್ದಳು. ಅದರೆ ಎ ಒಂದು ಕಡೆಯಲ್ಲಿ ಅವಳಿಲ್ಲದಿರುವ ಭಾವ ವೆಂಕಣ್ಣನನ್ನು ಕಡೆಯವರೆಗೂ ಕಾಡುತ್ತಿತ್ತಾ ಗೊತ್ತಿಲ್ಲ. ಅದೆಷ್ಟೆ ಚೆಂದವಾದ ಬಂಧವಿದ್ದರೂ ಒಮ್ಮೆ ಮಗಳು ಜವಾಬ್ದಾರಿಯುತ ಸ್ಥಾನಕ್ಕೆ ಬರುತ್ತಿದ್ದಂತೆ ಮೂಕವಾಗಿ ಹೋಗಿದ್ದನಂತೆ. ಬಾಹ್ಯ ಜಗತ್ತಿಗೆ ಸಂಪರ್ಕ ಕಡಿದುಕೊಂಡವನಂತೆ ಇರುತ್ತಿದ್ದ ವೆಂಕಣ್ಣ ಆಕಾಶ ದಿಟ್ಟಿಸುತ್ತಾ ಕೂತು ಬಿಡುತ್ತಿದ್ದನಂತೆ. ಏನಾಗುತ್ತಿದೆ ಎನ್ನಿಸುವಷ್ಟರಲ್ಲಿ ಸ್ಟ್ರೋಕಿಗೆ ಒಳಗಾದ ವೆಂಕಣ್ಣ ಮತ್ತೆ ಹಿಂದಿರುಗಿಲ್ಲ.
ಸತತ ಒಂದು ತಿಂಗಳು ಒzಡಿದ ಜೀವ ಮಗಳನ್ನು ನೋಡುತ್ತಾ ಕಣ್ಣೀರಿಡುತ್ತಾ ನಿಶ್ಚಲವಾಗಿದೆ. ಹುಡುಗಿಗೆ ಈ ಬಾರಿ ಕಣ್ಣೀರು ತಡೆಯಲಾಗಿಲ್ಲ. ಯಾವತ್ತೂ ನಮ್ಮಪ್ಪ ನಮ್ಮಪ್ಪ ಎಂದು ಮಾತಿಗೊಮ್ಮೆ ಒರಲುತ್ತಿದ್ದವಳು ಅದಕ್ಕೆ ಅಪ್ಪನ ಪ್ರತಿಕ್ರಿಯೆ ಬಾರದಿದ್ದರೆ ಏನಾದೀತು..? ಕೊನೆಯ ದಿನಗಳಲ್ಲಿ ವೆಂಕಣ್ಣ ಏನೇನೋ ಹೇಳುವ ಭಾವಕ್ಕೀಡಾಗುತ್ತಿದ್ದ. ಆದರೆ ಪ್ರತಿ ಬಾರಿಯೂ ಮಾತು ಮತ್ತು ಧ್ವನಿ ಎರಡೂ ಕೈ ಕೊಡುತ್ತಿದ್ದವು. ಬರೆಯಲಂತೂ ಕೈ ಮೊದಲೇ ನಿಶ್ಚಲವಾಗಿದ್ದವು. ಮೂಕವಾಗಿ ರೋದಿಸುತ್ತಿದ್ದನಂತೆ. ನಾನು ಸುಮ್ಮನೆ ಕೂತುಬಿಟ್ಟಿz. ವೆಂಕಣ್ಣ ಬೆರಳು ತೋರಿಸುವಂತಹ ಯಾವ ಋಣಾತ್ಮಕ ಅಂಶವನ್ನೂ ಉಳಿಸಿರಲಿಲ್ಲ. ಹುಡುಗಿ ಯಾವತ್ತೂ ಅವನ ಮಡಿಲು ಬಿಟ್ಟು ಕದಲುವ ಊಹೆ ಅವನ ಮನಸ್ಸಿನ ಬಂದಿರಲಿಲ್ಲ. ತನ್ನ ನಂತರ ಏನು ಮಾಡುತ್ತೋ ಎನ್ನುವ ಯೋಚನೆ ಕಾಡಿಬಿಟ್ಟಿತ್ತು ತೀವ್ರವಾಗಿ ಅವನನ್ನು. ‘ಯಾವತ್ತೂ ಅವ್ವ ಇಲ್ಲ ಅನ್ನೋದನ್ನ ನನ್ನ ನೆನಪಿಗೆ ಬರದಂಗ ಅಪ್ಪ ನೋಡ್ಕೊಂಡಿದ್ದ. ಆದರ ಕೊನಿತನಕನೂ ಅವನಿಗೆ ಆಕಿನ್ನ ಮರೆಯೋದು ಅಗ್ಲೆ ಇಲ್ಲ. ನನಗ ಗೊತ್ತಿಲ್ಲದಂಗ ರಾತ್ರಿ ಹೊತ್ತು ಎದ್ದು ಹೊರಗ ಕಟ್ಟಿ ಮ್ಯಾಲೇ ಮುಖ ಮುಚ್ಚಿಕೊಂಡು ಕೂತಿರ್ತಿದ್ದ.
ಸರಹೊತ್ತಿನ್ಯಾಗ ಕತ್ತಲ ರಾತ್ರಿಯೊಳಗ ಎಂಥಾ ಗಂಡಸೂ ಒದ್ದಿಯಾಗಿ ಬಿಡ್ತಾನ. ಅಪ್ಪಂಗೂ ಅದರಿಂದ ಹೊರಗ ಬರ್ಲಿಕ್ಕೆ ಅಗಲಿಲ್ಲ ಅನ್ನಸ್ತದ. ಸಣ್ಣಿದ್ದಾಗ ಅವ್ವ ಮ್ಯಾಲಿದಾಳು ಅಂತ ನಾನು ಚಿಕ್ಕಿ ತೋರ್ಸ್ತಿz. ಅದನ್ನ ನೋಡ್ತಾ ಕೂರ್ತಿದ್ದ...’ ಮಾತು ಮುಂದಕ್ಕ ಹರಿಯದೆ ಭೋರೆಂದು ಅತ್ತುಬಿಟ್ಟಿದ್ದಳು ಹುಡುಗಿ. ‘ಅಳಬ್ಯಾಡ ಸುಮ್ನಿರವ್ವ.. ನಿಮ್ಮಮ್ಮಂಗ ನೀನು ಅಳೋದು ಬೇಕಿರಲಿಲ್ಲ. ಬಸಿರಿ ಹುಡುಗಿ ಏನಾರ ಮಾಡ್ಕೊಬ್ಯಾಡ. ನಿಮ್ಮಪ್ಪ ಹುಟ್ಟಿ ಬರತಾನು..’ ಎಂದು ತಿಳಿದದ್ದು ಹೇಳಿ ಎದ್ದು ಬಂದಿದ್ದಾ. ಕೆಲವೇ ದಿನದಲ್ಲಿ ಕರೆ ಬಂದಿತ್ತು.‘ಕಾಕಾ.. ನಮ್ಮಪ್ಪ ಎಲ್ಲೂ ಹೋಗಿಲ್ಲ.. ಮತ್ತ ಬಂದಾನು.. ನಮ್ಮಪ್ಪನಂಗ ಕರ್ರನ ಕೂದ್ಲ.. ಕೆಂಪ ಕೆಂಪ ಮಾರಿ’. ಹುಡುಗ ಹುಟ್ಟಿದ ಸಂಭ್ರಮಕ್ಕೆ ಮಾತಾಡುತ್ತ ಆಕೆ ಅಪ್ಪ ಅಮ್ಮನನ್ನು ಮತ್ತೆ ಕಾಣುತ್ತಿದ್ದರೆ ನಾನು ಮೂಕನಾಗಿz. ಹುಡುಗಿಯ ತೊದಲು ಮಾತು ಈಗಲೂ ಕಿವಿಯಲ್ಲಿ.. ‘ಅವ್ವ ಮ್ಯಾಲ ಅದಾಳು. ರಾತ್ರಿ ಅಷ್ಟ ಕಾಣಸ್ತಾಳು.. ಮುಗಿಲಿನ್ಯಾಗ ಚಿಕ್ಕಿ ನೋಡಿರೇನು..? ಆ ದೊಡ್ಡ ಚಿಕ್ಕಿನ ನಮ್ಮವ್ವ...’ ಬಹುಶಃ ಈಗ ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕಿ ಇರಬಹುದೇನೋ. ಹುಡುಗಿ ಮಗುವಿಗೆ ಈಗ ಎರಡನ್ನೂ ತೋರಿಸುತ್ತಿzಳು. ದೇವರೇ ಮತ್ತೊಮ್ಮೆ ಕಣ್ಣು ಹಾಕದಿರು... ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment